ಬೆಂಗಳೂರು | ಜೈಲಿನೊಳಗೆ ಕದ್ದು ಮೊಬೈಲ್‌ ಬಳಸುತ್ತಿದ್ದ ಕೈದಿಗಳ ತಂತ್ರಕ್ಕೆ ಬ್ರೇಕ್

Date:

Advertisements

ಪರಪ್ಪನ ಆಗ್ರಹಾರ ಜೈಲಿನಲ್ಲಿ ಮೊಬೈಲ್‌ ಇಟ್ಟುಕೊಂಡು ಹೊರಗಡೆ ಸಂಪರ್ಕ ಸಾಧಿಸುವ ಕೈದಿಗಳ ಆಟವನ್ನು ನಿಲ್ಲಿಸಲು ಬೆಂಗಳೂರು ಕಮೀಷನರ್ ಮುಂದಾಗಿದ್ದಾರೆ. ಇಲ್ಲಿ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ನಿರ್ಮಿಸಲಾಗುತ್ತಿದ್ದು, ಇನ್ನು ಮುಂದೆ ಜೈಲಿನೊಳಗಿಂದಲೇ ನಡೆಯುವ ರೌಡಿ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ.

ಕೆಲವು ಪ್ರಭಾವಿ ರೌಡಿಗಳು ಈವರೆಗೆ ಲಂಚ ನೀಡಿಯೋ, ಕದ್ದು ತರಿಸಿಯೋ ಜೈಲಿನೊಳಗೆ ಮೊಬೈಲ್‌ ಇಟ್ಟುಕೊಳ್ಳುತ್ತಿದ್ದರು. ಇಲ್ಲಿಂದಲೇ ಹೊರಗಿನ ಡೀಲಿಂಗ್‌ಗಳನ್ನು ನಡೆಸುತ್ತಿದ್ದರು. ಆದರೆ, ಇನ್ನು ಮುಂದೆ ಅಂತಹ ಸಾಹಸ ಮಾಡಿ ಮೊಬೈಲ್ ಇಟ್ಟುಕೊಂಡರೂ ಪ್ರಯೋಜನವಿಲ್ಲ. ಜೈಲಿನಿಂದ ಡೀಲ್ ಮಾಡುವ ರೌಡಿಗಳಿಗೆ ಕಮೀಷನರ್ ದಯಾನಂದ್ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಜೈಲಿನ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ಇನ್‌ಸ್ಟಾಲ್‌ ಮಾಡಲಾಗುತ್ತಿದ್ದು, ಹೊಸ ತಂತ್ರಜ್ಞಾನದಿಂದಾಗಿ ಹೊರ ಹೋಗುವ ಮತ್ತು ಒಳಬರುವ ಕರೆಗಳು ಕೂಡ ನಿರ್ಬಂಧಕ್ಕೊಳಗಾಗಲಿವೆ. ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳ ಜೊತೆ ಕಮೀಷನರ್ ಚರ್ಚೆ ನಡೆಸಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ರೂಪುರೇಷೆ ರಚಿಸಲು ಮುಂದಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಾಂಜಾ ಮಾರಾಟ ಆರೋಪ ; ಮೂವರು ಮಹಿಳೆಯರ ಬಂಧನ

Advertisements
Bose Military School

ಜೈಲಿನಿಂದ ಮೊಬೈಲ್ ಬಳಸಿ ಹಲವು ರೌಡಿಗಳು ಹೊರಗಡೆ ಡೀಲಿಂಗ್ ನಡೆಸುವ, ಜೈಲಿನಿಂದಲೇ ಸುಪಾರಿ ನೀಡಿ ದುಷ್ಕೃತ್ಯಗಳಲ್ಲಿ ಭಾಗಿ‌ಯಾಗುತ್ತಿರುವ ಹಿನ್ನೆಲೆ, ಜೈಲಿನ ಎಲ್ಲ ಅಕ್ರಮಗಳಿಗೂ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಜೈಲಿನಲ್ಲಿ ಡ್ರಗ್ಸ್ ಸರಬರಾಜು, ಮಾಫಿಯಾ ಯಾವುದೂ ಇರಬಾರದು ಎಂದು ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ʼಬಯಲು ಸೀಮೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿʼ

ಸುಮಾರು ವರ್ಷಗಳಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ...

ಉಡುಪಿ | ಜಗತ್ತಿನಾದ್ಯಂತ ಪ್ರತೀ ವರ್ಷ ನೂರಾರು ಮುದ್ರಣ ಪತ್ರಿಕೆಗಳು ಮುಚ್ಚಿಕೊಳ್ಳುತ್ತಿವೆ – ರಾಜಾರಾಂ ತಲ್ಲೂರು

ಕೃತಕ ಬುದ್ದಿಮತ್ತೆ ಸುದ್ದಿಮನೆಯ ಒಳಗೆ ಪ್ರವೇಶಿಸಿದರೆ, ಭಾಷಾಂತರ, ಸುದ್ದಿ, ಸಾರಾಂಶ, ವಿವಿಧ...

ಹಾವೇರಿ | ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ತಹಶೀಲ್ದಾರ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಡಾ....

Download Eedina App Android / iOS

X