ಬೆಂಗಳೂರು | ಹೆಜ್ಜೆ ಥಿಯೇಟರ್‌ ತಂಡದಿಂದ ಮಾ.6ರಂದು ʼಸುಣ್ಣದ ಸುತ್ತುʼ ನಾಟಕ ಪ್ರದರ್ಶನ

Date:

Advertisements

ಹೆಜ್ಜೆ ಥಿಯೇಟರ್‌ ತಂಡವು ಸದ್ಯಕ್ಕೆ ʼಸುಣ್ಣದ ಸುತ್ತುʼ ಎಂಬ ನಾಟಕದ ತಾಲೀಮು ನಡೆಸುತ್ತಿದ್ದು, ಈ ನಾಟಕವು ಮಾರ್ಚ್‌ 06ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಸಂಜೆ 07ಕ್ಕೆ ಪ್ರದರ್ಶನಗೊಳ್ಳಲಿದೆ.

ಒಂದು ಸಾಮ್ರಾಜ್ಯ, ಆ ಸಾಮ್ರಾಜ್ಯದಲ್ಲಿ ರಕ್ತ ಸಂಬಂಧಗಳ ಬೆಲೆ ಗೊತ್ತಿಲ್ಲದೆ, ಕೇವಲ ಹಣ ಬಂಗಾರದ ಬಗ್ಗೆ ಯೋಚಿಸುವ ರಾಣಿ. ಯಾವಗ ರಾಜನ ಬೆನ್ನಿಗೆ ಕತ್ತಿ ಚುಚ್ಚುತ್ತೀನೆಂದು ಸಂಚು ಹೂಡೋ ಮರಿದೊರೆ. ಇವರುಗಳ ಮಧ್ಯೆ ಇವರ ಮಸಲತ್ತಿನ ಯೋಜನೆಗಳಿಗೆ ಬಲಿಯಾಗಿ ದೂರ ಉಳಿಯುವ ಪ್ರೇಮಿಗಳು. ಮರಿದೊರೆ ಸಂಚಿನಿಂದ ಸುಳ್ಳು ಪ್ರೀತಿ ತೋರುವ ತಾಯಿಂದ ದೂರಾಗಿ, ನಿಜ ಪ್ರೀತಿ ಪಡೆದುಕೊಳ್ಳುವ ಎಳೆಗೂಸಿನ ಸುತ್ತ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.

ಒಂದು ಕಡೆ ಮರಿದೊರೆಗೆ ಮಗು ಕಂಡರೆ ಕೊಂದು ಬಿಡುವನಲ್ಲ ಎನ್ನುವ ಭಯವಿದ್ದರೆ, ಇತ್ತ ಯುದ್ದಕ್ಕೆ ಹೋದ ಪೇಮಿ ಬರುವ ದಾರಿ ಕಾಯುತ್ತ, ಸೊರಗಿ ಕೂತು, ಜತೆಗೆ ತನ್ನದಲ್ಲದ ಮಗುವನ್ನು ನನ್ನದೆಂದು ಭಾವಿಸಿ, ಆ ಮುಗುವಿಗೆ ಲಾಲನೆ, ಪಾಲನೆ, ಪ್ರೀತಿ, ಕಾಳಜಿ ತೋರುವ ಹೆಣ್ಣಿಗೆ, ಕೊನೆಗೊಂದು ಅಗ್ನಿ ಪರೀಕ್ಷೆ ಕಾದಿರುತ್ತದೆ.

Advertisements

ಈ ಸುದ್ದಿ ಓದಿದ್ದೀರಾ? ಶಿಕಾರಿಪುರ | ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಆರೋಪಿ ನಾಪತ್ತೆ

ಆ ಮಗು, ಕೊನೆಗೆ ಹಣ ಮತ್ತು ಸಂಪತ್ತು ಹೊಂದಿರುವ ಹಾಗೂ ಸುಳ್ಳು ಪ್ರೀತಿ ಉಳ್ಳವರ ಪಾಲಾಗುತ್ತ ಅಥವಾ ಬಡತನದಲ್ಲಿದ್ದು, ನಿಜ ಪ್ರೀತಿ, ಕಾಳಜಿ ತೋರಿದ ಆ ಬಡ ಹೆಣ್ಣಿನ ಪಾಲಾಗುತ್ತ ಎನ್ನವಂತಹ ಕಥೆಯನ್ನು ರಚಿಸಿದ ಜರ್ಮನ್‌ನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರ ಕಥೆಯನ್ನು ಎಚ್‌ ಎಸ್‌ ವೆಂಕಟೇಶ್‌ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು, ರಂಗ ನಿರ್ದೇಶಕ ಹೇಮಂತ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X