ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಎಚ್.ಎಲ್.ಸಿ ಕಾಲುವೆಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಕೂಡಲೇ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಶುಕ್ರವಾರ ಬಳ್ಳಾರಿ ಬಂದ್ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದ್ದಾರೆ. ನೀರಾವರಿ ಸಲಹಾ ಸಮಿತಿಯ ಸಭೆ ಈ ಮೊದಲ ನಿರ್ಣಯದಂತೆ ನ.30ರ ವರೆಗೆ ನೀರು ಹರಿಸಬೇಕೆಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ನ. 10ರ ವರೆಗೆ ಮಾತ್ರ ನೀಡಲಿದೆ ಎಂದು ಹೇಳಿರುವುದನ್ನು ಖಂಡಿಸಿದ್ದಾರೆ.
ರೈತ ಸಂಘ ಕರೆ ನೀಡಿದ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು, ನಗರದ ಬಹುತೇಕ ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ವು, ಶಾಲಾ-ಕಾಲೇಜು, ಪೆಟೋಲ್ ಬಂಕ್, ಸಾರಿಗೆ ಬಸ್ ಸಂಚಾರ ಎಂದಿನಂತೆ ನಡೆದವು.
ಈ ಸುದ್ದಿ ಓದಿದ್ದೀರಾ? ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕೆಇಎ ಪರೀಕ್ಷಾ ಅಕ್ರಮದ ಸೂತ್ರದಾರ ಆರ್.ಡಿ. ಪಾಟೀಲ್ ಬಂಧನ
“100 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 26 ಟಿಎಂಸಿ ಮಾತ್ರ ನೀರು ಇದೆ. ತುಂಗಭದ್ರಾ ಜಲಾಶಯದ ಹೆಚ್ಎಲ್ ಸಿ ಕಾಲುವೆ ಮೂಲಕ ನೀರು ಹರಿಯದಿದ್ದರೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಲಿದೆ. ಆದರೆ ನವೆಂಬರ್ 1Oಕ್ಕೆ ಹೆಚ್ಎಲ್ ಸಿ ಕಾಲುವೆಗೆ ನೀರು ನಿಲ್ಲಿಸಲಿದೆ. ನವೆಂಬರ್ ಅಂತ್ಯದವರೆಗೆ ಎಚ್.ಎಲ್. ಸಿ ಕಾಲುವೆಗೆ ನೀರು ಬಿಡುವುದಾಗಿ ಹೇಳಿದ್ದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಈಗ ಮಾತು ತಪ್ಪಿದೆ” ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.