ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಕ್ರಾಸ್ ಬಳಿಯ ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಬಸ್ ಡಿಪೊ ನಿರ್ಮಿಸುವ ಸಲುವಾಗಿ ಶಾಸಕ ಜೆ ಎನ್ ಗಣೇಶ್ ಗ್ರಾಮದ ಸರ್ವೇ ನಂಬರ್ 254ರ 5 ಎಕರೆ ಭೂಮಿಯನ್ನು ಪರಿಶೀಲಿಸಿದರು.
“ತಾಲೂಕು ಕೇಂದ್ರವಾದ ಪಟ್ಟಣಕ್ಕೆ ಬಸ್ ಡಿಪೊ ತುಂಬಾ ಅಗತ್ಯವಿದೆ. ಕೆಕೆಆರ್ಡಿಬಿ ಇಲ್ಲವೆ ಜಿಲ್ಲಾ ಖನಿಜ ನಿಧಿಯಡಿ ಅನುದಾನ ಪಡೆಯಲು ಪ್ರಯತ್ನಿಸುವೆ. ಈ ನಿಟ್ಟಿನಲ್ಲಿ ಕೂಡಲೇ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ” ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಶಾಸಕ ಸೂಚಿಸಿದರು.
“ಬಸ್ ಡಿಪೊ ನಿರ್ಮಾಣಕ್ಕೆ ಅಂದಾಜು ₹8 ಕೋಟಿ ಅಗತ್ಯವಿದೆ. ಇದರಲ್ಲಿ ಶೆಡ್, ಯಾಂತ್ರಿಕ ವಿಭಾಗ, ಕಚೇರಿ ಕಟ್ಟಡ, ವಾಷಿಂಗ್, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಕಟ್ಟಡ ನಿರ್ಮಿಸಬೇಕಾಗುತ್ತದೆ” ಎಂದು ಕುರುಗೋಡು ಡಿಪೊ ವ್ಯವಸ್ಥಾಪಕ ಚಂದ್ರಶೇಖರ್ ಅವರು ಶಾಸಕರಿಗೆ ಪ್ರಾಥಮಿಕ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಈ ದೇಶದ ರಾಷ್ಟ್ರೀಯ ಗ್ರಂಥ, ಪ್ರಜಾಪ್ರಭುತ್ವದ ಆತ್ಮ ಸಂವಿಧಾನ: ಸಚಿವ ರಾಮಲಿಂಗಾರೆಡ್ಡಿ
ಈ ವೇಳೆ ತಹಶೀಲ್ದಾರ್ ಎಸ್ ಶಿವರಾಜ, ಕಂದಾಯ ನಿರೀಕ್ಷಕ ವೈ ಎಂ ಜಗದೀಶ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ ಷಣ್ಮುಖಪ್ಪ, ಮೆಟ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೇಣ್ಕಿ ಗಿರೀಶ್ ಸೇರಿದಂತೆ ಇತರರು ಇದ್ದರು.