ಬೆಂಗಳೂರು | ಚಲ್ಕೆರೆ ಕೆರೆಯಲ್ಲಿ ಮೀನುಗಳ ಮಾರಣಹೋಮ

Date:

Advertisements
  • ಕೊತ್ತನೂರು, ಸೀತಾರಾಮಪಾಳ್ಯ ಕೆರೆಗಳಲ್ಲಿ ಮೀನು ಸಾವನ್ನಪ್ಪುತ್ತಿರುವ ವರದಿ
  • ಒಳಚರಂಡಿಯ ನೀರು ಕೆರೆಗೆ ಹರಿಯುತ್ತಿರುವುದನ್ನು ತಡೆಯಬೇಕು: ನಡಿಗೆದಾರರು

ಬೆಂಗಳೂರಿನ ಔಟರ್ ರಿಂಗ್ ರೋಡ್ (ಒಆರ್‌ಆರ್) ಬಳಿಯ ಚಲ್ಕೆರೆ ಕೆರೆಯಲ್ಲಿ ಬುಧವಾರ ಸುಮಾರು 50 ಮೀನುಗಳು ಸಾವನ್ನಪ್ಪಿದ್ದು, ಆತಂಕ ಮೂಡಿಸಿದೆ.

ಚಲ್ಕೆರೆ ಕೆರೆಗೆ ಕೊಳಚೆ ನೀರು ಹರಿದು ಹೋಗುತ್ತಿರುವುದರಿಂದ ಮೀನುಗಳ ಸಾವನ್ನಪ್ಪುತ್ತಿವೆ. ಈ ತಿಂಗಳಲ್ಲಿ ಕೊಳಚೆ ನೀರಿನಿಂದ ಮೀನುಗಳು ಸಾವನ್ನಪ್ಪತ್ತಿರುವ ಪಟ್ಟಿಯಲ್ಲಿ ಈ ಕೆರೆ ಆರನೇ ಸ್ಥಾನದಲ್ಲಿದೆ.

ಚಲ್ಕೆರೆ ಕೆರೆಯಲ್ಲಿ ಅಲ್ಲಲ್ಲಿ ಸತ್ತ ಮೀನುಗಳು ಪತ್ತೆಯಾಗಿವೆ. ಕೆರೆಯ ನೀರಿನ ಬಣ್ಣವೂ ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತಿದೆ. ಕೆರೆಯ ಸುತ್ತಮುತ್ತ ಪ್ರದೇಶಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅತಿಯಾದ ಕಳೆ ಬೆಳೆದಿದೆ. ಆದರೂ, ಇಲ್ಲಿನ ವಿಹಾರಿಗಳು ಕೊಳಚೆನೀರಿನ ಹರಿವಿನ ಸಮಸ್ಯೆಯನ್ನು ಹೊರತುಪಡಿಸಿ, ಕೆರೆಯ ಸ್ಥಿತಿಯ ಬಗ್ಗೆ ಯಾವುದೇ ದೂರು ನೀಡಿಲ್ಲ.

Advertisements

“ಕೊಳಚೆ ನೀರು ಸಾಮಾನ್ಯವಾಗಿ ಕೆರೆಗೆ ಸೇರುವುದಿಲ್ಲ. ಬಿಬಿಎಂಪಿ ಡೈವರ್ಶನ್ ಚಾನೆಲ್‌ಗಳನ್ನು ಒದಗಿಸಿದೆ. ಆದರೆ, ಭಾರೀ ಮಳೆಯಾದಾಗಲೆಲ್ಲಾ ಮಳೆನೀರಿನೊಂದಿಗೆ ಕೊಳಚೆ ನೀರು ಕೆರೆಗೆ ಹರಿಯುತ್ತದೆ. ಇದು ಮೀನುಗಳ ಸಾವಿಗೆ ಕಾರಣವಾಗಬಹುದು” ಎಂದು ಕೆರೆಗೆ ನಿಯೋಜಿಸಲಾದ ಸಿಬ್ಬಂದಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಳೆದ ಒಂದು ತಿಂಗಳಿನಿಂದ ಕೊತ್ತನೂರು, ಸೀತಾರಾಮಪಾಳ್ಯ ಸೇರಿದಂತೆ ನಾನಾ ಕಡೆಗಳಲ್ಲಿ ಮೀನು ಸಾವನ್ನಪ್ಪುತ್ತಿರುವ ವರದಿ ಕಂಡುಬಂದಿದೆ.

ಕೆರೆಗಳ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಮಾತನಾಡಿ, “ಈ ಕೆರೆಗಳಲ್ಲಿ ಮೀನುಗಾರಿಕೆ ವಾರ್ಷಿಕ ವಿದ್ಯಮಾನವಾಗಿದೆ. ಪ್ರತಿ ಮಳೆಗಾಲದ ಆರಂಭದಲ್ಲಿ ಕೆರೆಗಳಿಗೆ ಕೊಳಚೆ ನೀರು ಹರಿದು ಬರುತ್ತದೆ. ಇದರಿಂದ ಮೀನು ಸಾವನ್ನಪ್ಪುತ್ತಿವೆ. ಇದು ನೀರಿನ ಗುಣಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ” ಎಂದರು.

ಬಿಬಿಎಂಪಿಯು ಮಳೆನೀರು ಚರಂಡಿಗಳನ್ನು ಸರಿಪಡಿಸುವ ಮೂಲಕ ಒಳಚರಂಡಿಯ ನೀರು ಕೆರೆಗೆ ಪೋಲಾಗುವುದನ್ನು ತಡೆಯಬೇಕು. ಪ್ರತಿ ವರ್ಷ ಮೀನುಗಳು ಸಾಯುತ್ತಿದ್ದು, ಈ ರೀತಿ ಮುಂದೆ ಆಗದಂತೆ ಗಮನಹರಿಸಬೇಕು ಎಂದು ನಡಿಗೆದಾರರು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X