ಕ್ರಿಮಿನಲ್ ಬೆದರಿಕೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯ ಹೆಸರನ್ನು ಚಾರ್ಜ್ಶೀಟ್ನಿಂದ ತೆಗೆದುಹಾಕಲು ಪೊಲೀಸ್ ಹೆಡ್ ಕಾನ್ಸ್ಟೆಬಲ್ವೊಬ್ಬರು ₹25,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕಾನ್ಸ್ಟೆಬಲ್ ಅನ್ನು ಅಧಿಕಾರಿಗಳು ಮಂಗಳವಾರ ರೆಡ್ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಎಂ ಲೋಕೇಶ್ ಬಂಧಿತ ಆರೋಪಿ. ಇವರು ಕ್ರಿಮಿನಲ್ ಬೆದರಿಕೆ, ದೌರ್ಜನ್ಯ ಮತ್ತು ಐಟಿ ಕಾಯ್ದೆ ಪ್ರಕರಣದ ಆರೋಪಿ ರಮೇಶ್ ಎಂಬಾತನ ಹೆಸರನ್ನು ಚಾರ್ಜ್ಶೀಟ್ನಿಂದ ತೆಗೆದುಹಾಕಲು ಮತ್ತು ಜಾಮೀನು ವ್ಯವಸ್ಥೆ ಮಾಡಲು ಆರೋಪಿ ರಮೇಶ್ ತಾಯಿ ಬಳಿ ₹50,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆರೋಪಿ ರಮೇಶ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಟ್ಟಡದಿಂದ ಬಿದ್ದು ಉದ್ಯಮಿ ಅನುಮಾನಾಸ್ಪದ ಸಾವು
ಹೆಡ್ ಕಾನ್ಸ್ಟೆಬಲ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆರೋಪಿ ರಮೇಶ್ ತಾಯಿ ರೂಪಾ ದೂರು ನೀಡಿದ್ದರು. ಹೆಡ್ ಕಾನ್ಸ್ಟೆಬಲ್ ಲೋಕೇಶ್, ರೂಪಾ ಅವರಿಂದ ₹25 ಸಾವಿರ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಲೆ ಬೀಸಿ ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಹೆಡ್ ಕಾನ್ಸ್ಟೆಬಲ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.