ಬೀದರ್‌ | ವಚನಗಳು ಹೊಸ ಸಾಂಸ್ಕೃತಿಕ ಪರಂಪರೆ ರೂಪಿಸಿದ ಪಠ್ಯ : ಡಾ.ದುಶಾನ್ ಡೀಕ್

Date:

Advertisements

ಜಗತ್ತಿನ ಯಾವುದೇ ಭಾಷೆ ಮತ್ತು ವಿಶ್ವವಿದ್ಯಾಲಯಗಳು ವಚನಕಾರರ ಬಗ್ಗೆ ಅಧ್ಯಯನ ಮಾಡಬೇಕಾದರೆ ವಚನಗಳ ಮೂಲ ಪಠ್ಯ ಓದಲೇಬೇಕು. ಅನ್ಯ ಭಾಷಿಕರು ಕನ್ನಡದ ಮೇಲೆ ಪ್ರಭುತ್ವ ಪಡೆದು ವಚನವನ್ನು ಗ್ರಹಿಸಬೇಕು. ವಚನಗಳು ಹೊಸ ಸಾಂಸ್ಕೃತಿಕ ಪರಂಪರೆ ರೂಪಿಸಿದ ಪಠ್ಯಗಳು ಎಂದು ಸ್ಲೋವಾಕಿಯಾದ ಕೊಮೆನಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ದುಶಾನ್ ಡೀಕ್ ಹೇಳಿದರು. 

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಇತ್ತೀಚೆಗೆ ಬಸವಕಲ್ಯಾಣದ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರಚನೆ ‘ ಕುರಿತ ಪ್ರತಿಷ್ಠಾನದ 89ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಅನುವಾದಿತ ಕೃತಿಗಳಿಗಿಂತ ಮೂಲ ಪಠ್ಯದಿಂದ ಅವುಗಳ ಆಶಯ, ತಾತ್ವಿಕತೆ ಮತ್ತು ಸಿದ್ಧಾಂತಗಳು ಗ್ರಹಿಸಲು ಸಾಧ್ಯʼ ಎಂದರು.

ʼಈ ನೆಲದ ಶರಣರು ಮತ್ತು ಸಂತರು ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿದ್ದಾರೆ. ಅವರಿಗೆ ಯಾವುದೇ ಸ್ಥಾಪಿತ ಮತ್ತು ಜಡಗೊಂಡ ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವೇ ಇಲ್ಲ. ಶರಣರು ಕೊಟ್ಟ ಚಿಂತನೆಗಳು, ನೋಟಕ್ರಮಗಳು ಸಮಾಜದ ಗ್ರಹಿಕೆಗೆ ಹೊಸ ವೈಧಾನಿಕತೆ ಒದಗಿಸಿವೆ. ಕನ್ನಡದ ವಚನ ವಾಙ್ಮಯ ಮತ್ತು ಮರಾಠಿಯ ಸಂತ ವಾಙ್ಮಯಗಳಲ್ಲಿ ಹೆಚ್ಚು ಮಾನವೀಯ ಚಿಂತನೆಗಳು ತುಂಬಿವೆ. ಮನುಷ್ಯತ್ವವನ್ನು ಹಾಗೂ ಸಹಬಾಳ್ವೆಯನ್ನು ‘ಧರ್ಮ’ದ ಸ್ವರೂಪವೆಂದು ತಿಳಿಸಿದರು. ಎಲ್ಲ ಜೀವಿಗಳ ಒಳಿತಿನಲ್ಲೇ ಧರ್ಮ ಅಡಗಿದೆ ಎಂಬುದು ಬಸವಣ್ಣನವರ ನಂಬಿಕೆಯೂ ಆಗಿತ್ತುʼ ಎಂದು ಪ್ರತಿಪಾದಿಸಿದರು.

Advertisements

ʼಸಮುದಾಯ ಕೇಂದ್ರಿತ ಚರಿತ್ರೆಯ ಅಧ್ಯಯನದಿಂದ ಹೊಸ ಸಾಂಸ್ಕೃತಿಕ ತಿಳುವಳಿಕೆ ಹಾಗೂ ಸಾಧ್ಯತೆಗಳು ಅರಿಯಬಹುದು. ಜನ ಸಮುದಾಯದ ನೆಲೆಯಲ್ಲಿ ಚರಿತ್ರೆ ಕಟ್ಟುವ ಪ್ರಯತ್ನ ನಡೆಯಬೇಕು. ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಜನ ಏನಂದುಕೊಂಡಿದ್ದಾರೆ ಎಂಬುದನ್ನು ಅರ್ಥೈಸಿಕೊಂಡು ದಾಖಲಿಸುವುದು ಚರಿತ್ರೆಯಾಗಿದೆ. ಭಾರತೀಯ ಸಮಾಜವು ಬಹು ಧರ್ಮ, ಭಾಷೆ ಹಾಗೂ ಬಹು ಸಂಸ್ಕೃತಿಯಿಂದ ಕೂಡಿದೆ. ಇದನ್ನು ಬಹುತ್ವದ ನೆಲೆಯಲ್ಲಿಯೇ ಅಭ್ಯಾಸಿಸಬೇಕಾಗುತ್ತದೆ. ವಚನಗಳ ಅಧ್ಯಯನ ನಡೆಸಬೇಕಾದರೆ ವಚನಕಾರರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದ ಅರಿವು ಮುಖ್ಯವಾಗುತ್ತದೆ. ಕಾಲ ಪ್ರಜ್ಞೆ ಪ್ರಧಾನವಾಗುತ್ತದೆʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ʼದೇಶಿ ಮತ್ತು ವಿದೇಶಿ ಶಿಕ್ಷಣ ಪದ್ದತಿ ತುಂಬಾ ಭಿನ್ನವಾಗಿದೆ. ಸಂಶೋಧನೆಗೆ ಹೊರ ದೇಶಗಳಲ್ಲಿ ಹೆಚ್ಚು ಮಹತ್ವವಿದೆ. ಸಂಶೋಧಕರು ವಿದ್ವಾಂಸರಾದವರಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಇರುತ್ತದೆʼ ಎಂದರು.

ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಹಿತ್ಯದ ಜೀವಂತಿಕೆ ಇರುವುದು ಅದು ಆಯಾ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವುದರಲ್ಲಿ. ಲೋಕದ ಎಲ್ಲ ರಚನೆಗಳ ಕುರಿತು  ವಿದ್ವತ್ಪೂರ್ಣ ಅನುಸಂಧಾನ ನಡೆಸಿದ ಸಂಶೋಧನೆಗಳು ಹಲವು ಕಾಲ ಸಂಕಥದಗೊಳ್ಳುತ್ತವೆʼ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ವಚನ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ : ಶಿವಕುಮಾರ ಉಪ್ಪೆ

ಪ್ರಾಧ್ಯಾಪಕ ಡಾ.ಶಿವಾಜಿ ಮೇತ್ರೆ, ನಾಗರಾಜ ಮಾನೆ, ಇರ್ಫಾನ್ ಶೇಖ್ ಮತ್ತಿತರಿದ್ದರು. ಶ್ರೀನಿವಾಸ ಶಿಂಧೆ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X