ಬ್ಯಾಡಗಿ ಮಾರುಕಟ್ಟೆ ದುರ್ಘಟನೆ | ಕಾರ್ಪೋರೇಟ್ ಕಂಪನಿಪರ ಕೃಷಿ ನೀತಿಗಳೇ ಕಾರಣ: ಯು ಬಸವರಾಜ ಆರೋಪ

Date:

Advertisements

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗೆ ಒಕ್ಕೂಟ (ಕೇಂದ್ರ) ಸರ್ಕಾರದ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ನೀತಿಗಳೇ ಕಾರಣವೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿ‌ಆರ್‌ಎಸ್) ಬಲವಾಗಿ ಖಂಡಿಸುತ್ತದೆ. ಸದರಿ ಒಟ್ಟು ಪ್ರಕರಣದ ಸಮಗ್ರ ತನಿಖೆಗೆ ಅಗತ್ಯ ಕ್ರಮವಹಿಸಬೇಕು ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು ಬಸವರಾಜ ಸರ್ಕಾರವನ್ನು ಆಗ್ರಹಿಸಿದ್ದಾರೆ.

‌ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “ಎಪಿಎಂಸಿ ಬ್ಯಾಡಗಿಯಲ್ಲಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗಳಿಗೆ ದಾಖಲಾತಿಗಳಿಗೆ ಹಾನಿಯುಂಟು ಮಾಡಿರುವುದು ಖಂಡನೀಯ. ಆದರೆ ರೈತರ ಆಕ್ರೋಶಕ್ಕೆ ಕಾರಣವಾದ ಅಂಶಗಳನ್ನು ಸರ್ಕಾರ ಕೂಲಂಕುಶವಾಗಿ ಗಮನಿಸಬೇಕು” ಎಂದರು.

“ರೈತರ ಉದ್ರಿಕ್ತತೆಯ ಹಿಂದೆ ಬೆಲೆ ಕುಸಿತ ಕಾರ್ಯ ನಿರ್ವಹಿಸಿರುವ ಸಾ‌ಧ್ಯತೆಗಳಿವೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಳೆದ 2023ರಲ್ಲಿ ಗುಂಟೂರು ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ ₹25,000 ಇತ್ತು. ಈಗ ₹15,000ಕ್ಕೆ ಕುಸಿದಿದೆ. ಅದೇ ರೀತಿ, ಬ್ಯಾಡಗಿ ಕಡ್ಡಿಗಾಯಿ ಕಳೆದ ವರ್ಷ ₹40,000ದಿಂದ  ₹45,000 ಇದ್ದದ್ದು ಈ ವರ್ಷ ₹8,000ದಿಂದ ₹10,000ಕ್ಕೆ ಕುಸಿದಿದೆ. ಹಾಗೆ ಬ್ಯಾಡಗಿ ಡಬ್ಬಿಕಾಯಿ ಕಳೆದ ವರ್ಷ ₹60,000ದಿಂದ ₹70,000ಗಳಷ್ಟಿದ್ದದ್ದು ಈ ವರ್ಷ ₹6,000ದಿಂದ ₹8,000ಕ್ಕೆ ಕುಸಿದಿದೆ. ಈ ಬೆಲೆ ಕುಸಿತವು ರೈತರನ್ನು ತೀವ್ರ ಚಿಂತಾಕ್ರಾಂತರನ್ನಾಗಿಸಿದೆ” ಎಂದರು.

Advertisements

“ಮಾಹಿತಿಯಂತೆ ಪ್ರತಿ ಎಕರೆಗೆ ರೈತರು ₹1.5 ಲಕ್ಷದಿಂದ ₹2 ಲಕ್ಷದವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಈ ವರ್ಷ ಇಳುವರಿಯು ನೀರಾವರಿ ಪ್ರದೇಶದಲ್ಲಿ ಎಕರೆಗೆ ಸರಾಸರಿ ತಲಾ 6 ರಿಂದ 10 ಕ್ಚಿಂಟಾಲ್ ಬಂದಿದೆ ಎನ್ನಲಾಗಿದೆ. ಹೀಗಾದಲ್ಲಿ ಪ್ರಸ್ತುತ ಬೆಲೆಯಿಂದಾಗಿ ತಲಾ ಎಕರೆಗೆ ಹೂಡಿಕೆಯ ಬಡ್ಡಿಯು ಬಾರದೆಂಬ ಆತಂಕವೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ಹೇಳಿದರು.

“ಕೃಷ್ಣಾ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆಗಳಲ್ಲಿನ ಈ ಬೆಳೆಯು ಅಂದಾಜಿನಂತೆ ರೈತರಿಗೆ ₹15 ಸಾವಿರ ಕೋಟಿಗಳಿಗೂ ಅಧಿಕ ಮೊತ್ತದ ನಷ್ಟವನ್ನು ಉಂಟುಮಾಡಿದೆ. ಇಂತಹ ಸಂದರ್ಭದ ರೈತರ ಆಕ್ರೋಶವನ್ನು ಕೆಲವು ಕಿಡಿಗೇಡಿಗಳು ಬಳಸಿಕೊಂಡಿರುವ ಸಂಭವಗಳಿವೆ. ಕಿಡಿಗೇಡಿಗಳ ದುಷ್ಕೃತ್ಯ ತೀವ್ರ ಖಂಡನೀಯವಾಗಿದೆ. ಇವರ ಮೇಲೆ ಕಠಿಣ ಕಾನೂನಿನ ಕ್ರಮವಹಿಸಬೇಕು. ಡಾ. ಎಂ ಎಸ್ ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಯಾದರೆ ಮಾತ್ರ ಈ ತರಹದ ಘಟನೆಗಳನ್ನು ತಡೆಯಲು ಸಾಧ್ಯ” ಎಂದರು.

“ರೈತರ ಈ ಸಂಕಷ್ಠಕ್ಕೆ ಬೆಲೆಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಏರಿಳಿತ ಮಾಡಿ ಲೂಟಿ ಮಾಡುವ ಕಾರ್ಪೋರೇಟ್ ವ್ಯಾಪಾರಿಗಳ ದುಷ್ಟತನವೇ ಕಾರಣವಾಗಿದೆ. ಈ ಕಾರ್ಪೋರೇಟ್ ಸಂಸ್ಥೆಗಳು ಬೆಲೆಗಳನ್ನು ಏರಿಳಿತ ಮಾಡಿ ಲೂಟಿ ಮಾಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರವೇ ಈ ದುರಂತಕ್ಕೆ ನೇರ ಹೊಣೆಯಾಗಿದೆ. ಒಣ ಮೆಣಸಿನಕಾಯಿ ಬೆಳೆಗಾರರನ್ನು ಗುರುತಿಸಿ ಈ ಬೆಲೆ ಕುಸಿತಕ್ಕೆ ತಲಾ ಎಕರೆಗೆ ಕನಿಷ್ಟ ₹50,000 ಪರಿಹಾರ ನೀಡುವುದಾಗಿ ಒಕ್ಕೂಟ ಸರ್ಕಾರ ಘೋಷಿಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿ ಖರೀದಿಸಲು ಅಗತ್ಯ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

ಮಾರುಕಟ್ಟೆ ಭೇಟಿ: ಇಂದು ಬ್ಯಾಡಗಿಯ ಪ್ರಖ್ಯಾತ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆ ಕುರಿತು ಸ್ಥಿತಿಗತಿ ತಿಳಿಯಲು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ವಾಸ್ತವ ಸ್ಥಿತಿಗತಿ ತಿಳಿಯಲು ಎಪಿಎಂಸಿ ಕಾರ್ಯದರ್ಶಿ ಸತೀಶ್, ಮೆಣಸಿನಕಾಯಿ ವರ್ತಕ ಎಸ್ ಆರ್ ಪಾಟೀಲ, ಪೊಲೀಸ್ ಇಲಾಖೆ, ರೈತರು, ಹಮಾಲಿ ಕಾರ್ಮಿಕರ ಜೊತೆ ಚರ್ಚಿಸಿ ಸಮಗ್ರ ಮಾಹಿತಿ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಪರ್ಧೆ ಬಯಸಿರಲಿಲ್ಲ, ಪಕ್ಷ ಅವಕಾಶ ಕೊಟ್ಟಿದೆ: ವಿ ಸೋಮಣ್ಣ

ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು ಬಸವರಾಜ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಆರ್ ಎಸ್ ಬಸವರಾಜ, ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್, ಅಂಗನವಾಡಿ ನೌಕರರ ಸಂಘಟನೆ ಮುಖಂಡ ಮಹಾಂತೇಶ ಎಲಿ, ಹಮಾಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಹಾದೇವಪ್ಪ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X