ದಕ್ಷಿಣ ಕನ್ನಡ | ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ; ವರದಿ ಬಹಿರಂಗಗೊಳಿಸದಂತೆ ಬೆದರಿಕೆ 

Date:

Advertisements

ಪಲ್ಗುಣಿ ನದಿಗೆ ಎಂಆರ್‌ಪಿಎಲ್‌ ಕಡೆಯಿಂದ ಮಾರಕ ಕೈಗಾರಿಕಾ ತ್ಯಾಜ್ಯ ಹರಿಯ ಬಿಡಲಾಗುತ್ತಿದೆ. ಮಾರಕ ತ್ಯಾಜ್ಯ ನೇರವಾಗಿ ಹರಿದು ಬಂದು ತೋಕೂರು ಹಳ್ಳ ಸೇರಿ ಪೂರ್ತಿ ನೀರು ಮಲಿನಗೊಂಡಿದ್ದನ್ನು ಗಮನಿಸಿದ ಮಂಗಳೂರಿನ ಹಲವು ಮಾಧ್ಯಮಗಳ ವರದಿಗಾರರು ಆಗಮಿಸಿದ್ದರು. ಸುದ್ದಿ ಚಿತ್ರೀಕರಣ ಮುಗಿಸಿ ಪತ್ರಕರ್ತರು ವಾಪಾಸ್ ಆದ ಬಳಿಕ ಎಂಆರ್‌ಪಿಎಲ್ ಅಧಿಕಾರಿಗಳು ಹಾಗೂ ರಕ್ಷಣಾ ವಿಭಾಗದವರು ಆಗಮಿಸಿ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಕಂಪೆನಿಯ ಒಪ್ಪಿಗೆ ಇಲ್ಲದೆ ಕಂಪೆನಿಯ ಕಾಂಪೌಂಡ್ ಹೊರ ಸುತ್ತಲ ಪ್ರದೇಶದಲ್ಲಿ ನದಿ ವೀಕ್ಷಿಸುವುದು, ನೀರು ಪರೀಕ್ಷೆ ಮಾಡುವುದು, ಸ್ಥಳೀಯ ಪರಿಸರದ ಫೋಟೊ, ವೀಡಿಯೊ ಮಾಡುವಂತಿಲ್ಲ” ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹಾಗೂ ಸ್ಥಳೀಯ ನಾಗರಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದಿದ್ದು, “ಎಂಆರ್‌ಪಿಎಲ್ ಕಂಪೆನಿಯ ಕಾಂಪೌಂಡ್ ಹೊರಗಡೆಯಲ್ಲಿ ಫೋಟೊ, ವೀಡಿಯೊ ಚಿತ್ರೀಕರಣ ಮಾಡಲು ಹಾಗೂ ಅಡ್ಡಾಡಲು, ನದಿ ಪರಿಸರದ ಪೊಟೋ ತೆಗೆಯಲು ನಿರ್ಬಂಧಿಸಲು ಕಂಪೆನಿಗೆ ಏನು ಅಧಿಕಾರ ಇದೆ” ಎಂದು ಮುನೀರ್ ಕಾಟಿಪಳ್ಳ ಹಾಗೂ ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

Advertisements

“ಸಾರ್ವಜನಿಕ ರಸ್ತೆಯಲ್ಲಿನ ಜನರ ಓಡಾಟ ನಿರ್ಬಂಧಿಸಲು ಹಾಗೂ ಪೊಟೋ ತೆಗೆಯುವುದನ್ನು ಆಕ್ಷೇಪಿಸಲು ಯಾವ ಅಧಿಕಾರ ಇದೆ” ಎಂದು ಮರು ಪ್ರಶ್ನಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಸರ್ಕಾರಿ ಶಾಲೆ ಆಟದ ಮೖದಾನ ಉಳಿಸಲು ಮೌನ ಪ್ರತಿಭಟನೆ

“ಎಂಆರ್‌ಪಿಎಲ್ ಅಧಿಕಾರಿಗಳು ಸುಮಾರು ಹದಿನೈದು ನಿಮಿಷಗಳಿಗೂ ಹೆಚ್ಚು ಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ. ಅಷ್ಟೂ ಹೊತ್ತು ಮಾತಿನ ಚಕಮಕಿ ನಡೆದಾಗಲೂ ನದಿಗೆ ಕಂಪೆನಿಯ ತ್ಯಾಜ್ಯವನ್ನು ನೇರವಾಗಿ ಬಿಡುತ್ತಿರುವ ಬಗ್ಗೆ ಎಂಆರ್‌ಪಿಎಲ್ ಕಂಪೆನಿ ಅಧಿಕಾರಿಗಳು ಒಂದು ಶಬ್ದವನ್ನೂ ಮಾತನಾಡಿಲ್ಲ. ಅವರ ಎಲ್ಲ ಆಕ್ಷೇಪ ಇದ್ದದ್ದು ಮಲಿನಗೊಂಡ ನದಿಯ ಫೋಟೋ ತೆಗೆದ ಬಗ್ಗೆ ಮಾತ್ರ” ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X