ದಾವಣಗೆರೆ | ಪಾರದರ್ಶಕ ಮತ್ತು ನ್ಯಾಯಯುತ ವಹಿವಾಟಿಗೆ ಆಗ್ರಹಿಸಿ ಮನವಿ

Date:

Advertisements

ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಬಹಳ ಕಷ್ಟ ಪಟ್ಟು ಭತ್ತ ಬೆಳೆದಿದ್ದರೂ ಭತ್ತದ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ಸಾಕಷ್ಟು ರೋಸಿ ಹೋಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಎಪಿಎಂಸಿ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ವ್ಯಾಪಾರಸ್ಥರ, ಖರೀದಿದಾರರ, ದಲಾಲರ ಮತ್ತು ರೈತರ ಸಭೆ ಕರೆದು ಕೂಲಂಕಷವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪಾರದರ್ಶಕ ಮತ್ತು ನ್ಯಾಯಯುತ ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಭತ್ತ ಖರೀದಿ ಮಾಡಿದ ಖರೀದಿದಾರರು ವೇಮೆಂಟ್, ಪೇಮೆಂಟ್ ಅಂತ ಕಂಡಿಷನ್ ಮಾಡಿರುವುದಲ್ಲದೇ, ವಾರಗಟ್ಟಲೆ ಹಣ ನೀಡದೆ ಸತಾಯಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಖರೀದಿದಾರರ ಇಂತಹ ಕುತಂತ್ರ ಧೋರಣೆ ಸಂಪೂರ್ಣ ನಿಲ್ಲಬೇಕು. ವೇಮೆಂಟ್, ಪೇಮೆಂಟ್ ಪದ್ಧತಿ ಬದಲು ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

Advertisements

ಲೋಡಿಂಗ್, ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಅಂದರೆ ಖರೀದಿಸಿದ ಭತ್ತ ಲೋಡ್ ಮಾಡಿದ ತಕ್ಷಣ ಚೀಲ ಒಂದಕ್ಕೆ 2 ಸಾವಿರ ರೂಪಾಯಿಯಂತೆ ಎಷ್ಟು ಚೀಲ ತುಂಬಿಸಲಾಗಿರುತ್ತದೆಯೋ ಅಷ್ಟು ಚೀಲಗಳಿಗೆ ಲೆಕ್ಕ ಹಾಕಿ ಸ್ಥಳದಲ್ಲೇ ಹಣ ಕೊಡಬೇಕು. ನಂತರ ಲೋಡ್ ಲಾರಿಯನ್ನು ಮುಂದೆ ಹೋಗಲು ಬಿಡ ಬೇಕು. ಇನ್ನುಳಿದ ಹಣವನ್ನು ತೂಕ ವಾದ ನಂತರ ಲೆಕ್ಕ ಹಾಕಿ ಕೊಡಬೇಕು ಎಂದರು. ಖಾಲಿ ಚೀಲ ತೂಕಕ್ಕೆ 1ಕೆಜಿ ಶೂಟ್ ಜೊತೆಗೆ ಇನ್ನೊಂದು ಕೆಜಿ ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದು ಸರಿಯಲ್ಲ. ಮೋಸ ಮಾಡಲಾಗುತ್ತಿದೆ. ಕಾರಣ ಚೀಲದ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಮೆಂಟ್ ಮಾಡಬೇಕು. ಹಮಾಲರ ಕೂಲಿ ಸಂಪೂರ್ಣ ಖರೀದಿದಾರರೆ ನೀಡಬೇಕು. ರೈತರ ಹಣದಲ್ಲಿ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.

ಹಮಾಲರು ಶ್ಯಾಂಪಲ್ ಕಾಳು ಕೊಡಬೇಕು ಎಂದು ರೈತರನ್ನು ಒತ್ತಾಯಿಸಿ ಪೀಡಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು ಒಂದು ಕಾಳನ್ನು ಸಹ ಕೊಡಬಾರದು. ಡಿಸೈಂಟ್ ಪದ್ಧತಿ ಕಡ್ಡಾಯವಾಗಿ ರದ್ದಾಗಬೇಕು. ಭತ್ತದ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಖರೀದಿದಾರರ ಕುತಂತ್ರಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಮಾಜಿ ಮೇಯ‌ರ್ ಎಚ್‌.ಎನ್‌. ಗುರುನಾಥ್, ವಾಸನ ಬಸವರಾಜ, ಅಣಬೇರು ಶಿವ ಪ್ರಕಾಶ್ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X