ಧಾರವಾಡ | ಇಂದೋ-ನಾಳೆಯೋ ಬೀಳುವಂತಿರುವ ಮನೆ: ಈ ಕುಟುಂಬಕ್ಕೆ ಬೇಕಿದೆ ಸರ್ಕಾರದ ಸಹಾಯಹಸ್ತ

Date:

Advertisements

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ದೊಡ್ಡ ಗ್ರಾಮವಾಗಿದೆ. ಸಬಲರಾಗಿ ಸಂಖ್ಯೆ ಬಹು ಸಂಖ್ಯೆಯ ಜನರಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯೂ ಕಾಣಸಿಗುತ್ತದೆ.

ಸರ್ಕಾರದ ಯೋಜನೆಗಳ ಫಲ ತೆಗೆದುಕೊಳ್ಳುವಲ್ಲಿ ಉಳ್ಳವರೇ ಎತ್ತಿದ ಕೈ ಎಂದರೂ ತಪ್ಪಾಗದು. ಆರ್ಥಿಕವಾಗಿ ಮುಂದಿರುವವರಿಗೇ ಸರ್ಕಾರದ ಯೋಜನೆಗಳು ಲಾಭ ಸಿಗುತ್ತವೆಯೊ? ಏನೋ ಅನಿಸುತ್ತದೆ ಎಂದು ಸ್ಥಳೀಯ ಹಿರಿಯರೊಬ್ಬರು ಮಾತನಾಡುತ್ತಿದ್ದರು. ಆ ಹಿನ್ನೆಲೆಯಲ್ಲಿ ಮೊರಬ ಗ್ರಾಮದ ನಿವಾಸಿ ಮಹಾದೇವಿ ಮರೆಪ್ಪ ಕಾಳೆ. ಇವರಿಗೆ ವಯಸ್ಸು ಸುಮಾರು 70ರ ಆಸುಪಾಸು. ಕಳೆದ 25 ವರ್ಷಗಳಿಂದ ಕುಸಿದು ಬೀಳುವ ಹಂತದಲ್ಲಿರುವ ಹಂಚಿನ‌ ಮನೆಯಲ್ಲಿಯೇ ಮಗ, ಸೊಸೆ, ಮೊಮ್ಮಕ್ಕಳು ಸೇರಿ ಒಟ್ಟು 5 ಜನ ವಾಸವಾಗಿದ್ದಾರೆ.

WhatsApp Image 2024 09 06 at 8.06.32 PM 1 1

ನವಲಗುಂದ ತಾಲೂಕು ಮೊರಬ ಗ್ರಾಮದ ಅಂಬೇಡ್ಕರ್ ನಗರದಲ್ಲಿ ವಾಸವಿರುವ ಇವರ ಮನೆ ಪಕ್ಕದಲ್ಲೇ ದೊಡ್ಡ ಚರಂಡಿ ಹೊಂದಿಕೊಂಡಿರುವ ಕಾರಣ, ನೆರೆ ಬಂದಾಗ ನೀರು ಮನೆಯೊಳಗೆ ಬರುತ್ತದೆ. ಪರಿಣಾಮ ಕೊಳಚೆ ನೀರು ಈ ಪ್ರದೇಶವನ್ನೆಲ್ಲಾ ತುಂಬಿಕೊಳ್ಳುತ್ತದೆ.

Advertisements

ಜೋತು ಬಿದ್ದಿರುವ ಮೇಲ್ಛಾವಣಿ. ಕುಸಿಯುವ ಸ್ಥಿತಿಯಲ್ಲಿರುವ ಗೋಡೆಗಳು. ಒಡೆದುಹೋದ ಹಂಚುಗಳು. ಮನೆಯಲ್ಲಿ‌ ಕಾಲಿಟ್ಟರೆ ಬೇಸಿಗೆಯಲ್ಲೂ ಝುಣು ಝುಣು ಎನ್ನುವಂತಿರುವ, ಸಗಣಿ ಸಾರಿಸಿರುವ ನೆಲ. ಭಯದ ವಾತಾವರಣದಲ್ಲೇ ಮನೆಯಲ್ಲಿ ಬದುಕುವ ಪರಿಸ್ಥಿತಿ ಈ ಕುಟುಂಬಸ್ಥರಿಗೆ ಎದುರಾಗಿದೆ.

“ಕಳೆದ ವರ್ಷ ನಮ್ಮ ಮನೆಯ ಸಮಸ್ಯೆಯ ಕುರಿತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಓ ಅವರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಸತತ ಮೂರು ವರ್ಷಗಳ ಕಾಲ ಮಳೆಗಾಲದಲ್ಲಿ ನೆರೆ ಬಂದಾಗಲೂ ಒಂದು ರೂಪಾಯಿ ಸಹಿತ ನಮಗೆ ಪರಿಹಾರ ಸಿಕ್ಕಿಲ್ಲ. ಮನೆ ಇವತ್ತೊ-ನಾಳೆ ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಶಿವಾ ಎಂದು ಸಾಯುವುದೊಂದೇ ದಾರಿ” ಎನ್ನುತ್ತಿದ್ದಾರೆ ಹಿರಿಯ ಜೀವ ಮಹಾದೇವಿ ಕಾಳೆ.

WhatsApp Image 2024 09 06 at 8.06.32 PM 1

ಈ ಬಗ್ಗೆ ಡಿಎಸ್ಎಸ್ ಸಂಚಾಲಕ ನಾಗರಾಜ ಕಾಳೆ ಮಾತನಾಡಿ, ಪದೇ ಪದೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಬಹುತೇಕವಾಗಿ ಶಿಥಿಲಗೊಳ್ಳದ ಮನೆಗಳಿಗೆ ಪರಿಹಾರ ದೊರಕಿದೆ. ಶಿಥಿಲಾವಸ್ಥೆಯಲ್ಲಿ ಇರುವ ಮನೆಗಳಿಗೆ ಯಾವ ಪರಿಹಾರವೂ ದೊರೆತಿಲ್ಲ. ಮನುಷ್ಯರು ಬದುಕಿದ್ದಾಗಲೇ ಗಮಹರಿಸಿ ಪರಿಹಾರ ಕೊಡಬೇಕೆ ಹೊರತು ಸತ್ತಮೇಲೆ ಕೊಡುವುದಲ್ಲ. ಈ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವಾಗಿದೆ” ಎಂದು ದೂರಿದರು.

ಪರಿಹಾರ ದೊರಕಿಸಿ ಕೊಡುವ ಭರವಸೆ ಕೊಡುತ್ತಾರೆ. ಪರಿಹಾರಕ್ಕಾಗಿ ಅಧಿಕಾರಿ, ರಾಜಕಾರಣಿಗಳ ಕಾಲು ಬೀಳುವುದೂ ಆಗಿದೆ. ಆದರೂ ನಮ್ಮನ್ನು ಯಾರೂ ಗಮನಿಸುತ್ತಿಲ್ಲ. ನಮಗೆ ಮನೆ ಕಟ್ಟಿಸಿಕೊಟ್ಟರೆ ಸರ್ಕಾರಕ್ಕೆ ಪುಣ್ಯ ಬರುತ್ತದೆ. ಒಂದು ವೇಳೆ ಯಾರೂ ಸ್ಪಂದಿಸದೆ ಹೋದರೆ, ಮನೆ ಬಿದ್ದರೆ ದೇವರೇ ಗತಿ ಎನ್ನುತ್ತಾರೆ ಮನೆ ಯಜಮಾನಿ ಲಕ್ಷ್ಮವ್ವ.

ಈ ಸುದ್ಧಿ ಓದಿದ್ದೀರಾ ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ

ಇವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿ ನೊಂದ ಕುಟುಂಬಸ್ಥರಿಗೆ ಸೂರುಕಲ್ಪಿಸಿ ಆಸರೆ ಆಗಬೇಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X