ಧಾರವಾಡ | ರುದ್ರಭೂಮಿಯಲ್ಲಿ ಶರಣರ ವಚನಗಳ ಅನಾವರಣ

Date:

Advertisements

ಧಾರವಾಡ ಮುರುಘಾ ಮಠದ ವ್ಯಾಪ್ತಿಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಬಸವ ಕೇಂದ್ರದ ವತಿಯಿಂದ ಬುಧವಾರ (ಜುಲೈ 2) ಶರಣರ ವಚನ ಬೋರ್ಡ್‌ಗಳನ್ನು ಇಳಕಲ್ ಮಠದ ಗುರುಮಹಾಂತ ಸ್ವಾಮಿ ಅನಾವರಣ ಮಾಡಿದ್ದಾರೆ.

“ವಚನ ಫಲಕಗಳನ್ನು ಎಲ್ಲ ರುದ್ರಭೂಮಿಗಳಲ್ಲಿಲೂ ಹಾಕಿಸುವ ವ್ಯವಸ್ಥೆ ಆಗಬೇಕು. ವಚನಗಳಲ್ಲಿ ನಮ್ಮ ಜೀವನದುದ್ದಕ್ಕೂ ಬೇಕಾಗುವ ಅಂಶಗಳು ಸಿಗುತ್ತವೆ. ನಾವು ಹಾದಿತಪ್ಪಿದಾಗ ಎಚ್ಚರಿಸಲು, ತಿದ್ದಿಕೊಂಡು ನಡೆಯಲು, ನಡೆ ನುಡಿ ಒಂದಾಗಲು, ಹುಟ್ಟಿನಿಂದ ಸಾವಿನವರೆಗೂ ಅತ್ಯವಶ್ಯಕ ಬೇಕಾಗುವ ವಚನಗಳನ್ನು ದಿನಂಪ್ರತಿ ಓದುತ್ತ ಹೋದಾಗ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.

ರುದ್ರಭೂಮಿಗಳಲ್ಲಿ ವಚನಗಳ ಫಲಕಗಳನ್ನು ಹಾಕಿಸುವ ಪರಿಕಲ್ಪನೆಯನ್ನು ತಂದ ಸಿದ್ಧರಾಮಣ್ಣ ನಡಕಟ್ಟಿ ಮಾತನಾಡಿ, “ಈಗ ನಗರದ ಒಂದು ರುದ್ರಭೂಮಿಯಲ್ಲಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದೇವೆ. ಇನ್ನುಳಿದ ಎಲ್ಲ ರುದ್ರಭೂಮಿಗಳಲ್ಲೂ ಈ ಫಲಕಗಳನ್ನು ಹಾಕಿಸಲು ಮುಂದಾಗುತ್ತೇವೆ. ವಚನಗಳಿಗೆ ಯಾವುದೇ ಜಾತಿ, ಧರ್ಮ, ವರ್ಗ, ಲಿಂಗಭೇದ ಇರುವುದಿಲ್ಲ. ವಚನಗಳು ಸಕಲ ಜೀವಾತ್ಮರಿಗೂ ಲೇಸನ್ನು ಬಯಸಲು ಕಲಿಸುತ್ತವೆ” ಎಂದು ತಿಳಿಸಿದರು.

Advertisements

ಬಸವಂತಪ್ಪ ತೋಟದ ಮಾತನಾಡಿ, “ಮಣ್ಣು ಕೊಡಲು ಬಂದ ಜನರು ಅಂತ್ಯಸಂಸ್ಕಾರದ ಎಲ್ಲ ಕಾರ್ಯಗಳು‌ ಮುಗಿಯುವತನಕ ಅಲ್ಲಲ್ಲಿ ಸಾವಿನ ಬಗ್ಗೆಯೆ ಮಾತನಾಡಿಕೊಳ್ಳುತ್ತ ಕುಳಿತುಕೊಳ್ಳುವ ಬದಲು ಒಂದೆರಡು ವಚನಗಳನ್ನು ಓದಿ ಮನಸ್ಸನ್ನು ಅರಳಿಸಿಕೊಳ್ಳಬಹುದು. ಜಿಗುಪ್ಸೆಗೆ ಒಳಗಾದ ಮನುಷ್ಯನು ಸಾವು ಎಲ್ಲರಿಗೂ ಬರುತ್ತದೆ ಎಂಬ ಸತ್ಯವನ್ನಿರಿತು, ಅಂತ್ಯಸಂಸ್ಕಾರದ ಕುರಿತು ಶರಣರು ಹಲವಾರು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಒಂದು ವಚನ ಓದಿದರೂ ಸಾಕು. ಅದರಲ್ಲೂ ವಿಶೇಷವಾಗಿ ಸ್ಮಶಾನವೆಂಬ ಪವಿತ್ರ ಸ್ಥಳದಲ್ಲಿ ಓದಿದಾಗ ಶಾಸ್ವತ ನೆನಪಿಟ್ಟುಕೊಳ್ಳಬಹುದು” ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ಧರಾಮ ನಡಕಟ್ಟಿ, ರಾಜು ಮರಳಪ್ಪಣವರ, ಅನುಸೂಯಾ ಸೋಮಣ್ಣ ನಡಕಟ್ಟಿ, ಗಂಗಾಂಬಿಕಾ ಹಂಪ್ಪಣವರ, ಬಸವಂತಪ್ಪ ತೋಟದ, ವಿಶ್ವನಾಥ ನಡಕಟ್ಟಿ ಇನ್ನಿತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X