ಹುಬ್ಬಳ್ಳಿ | ಭಾರತ್ ಜೋಡೊ ದೇಶ ರಕ್ಷಣೆಯ ಒಂದು ಪ್ರಯತ್ನ‌: ಗಂಗಾಧರ ದೊಡವಾಡ

Date:

Advertisements

ಭಾರತ್ ಜೋಡೊ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷದ ಯುವನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮೂಲಕ ಜನರೊಂದಿಗೆ ʼನಾನು ಮತ್ತು ನನ್ನ ಪಕ್ಷದವರೆಲ್ಲೆರೂ ನಿಮ್ಮೊಂದಿಗೆ ಇದ್ದೇವೆʼ ಎಂಬ ಸಂದೇಶ ಸಾರುವ ಒಂದು ಮಹಾ ಆಂದೋಲನವಾಗಿದೆ. ಸಂಪೂರ್ಣ ದೇಶದ ಜನತೆಯ ಭರವಸೆಯ ಬೆಳಕಾಗಿ ರಾಹುಲ್ ಅವರ ಮೇಲೆ ದೇಶ ಬಾಂಧವರ ಬೆಂಬಲ, ಆಶೀರ್ವಾದ ಮೂಡಿತು ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಹೇಳಿದರು.

ರಾಹುಲ್ ಪಾದಯಾತ್ರೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬರಗಾಲ ಘೋಷಿಸಿ, ರೈತರನ್ನು ರಕ್ಷಿಸಿ; ಮಾಜಿ ಶಾಸಕ ಸೋಮಶೇಖರ ರೆಡ್ಡಿ

Advertisements

“ಪ್ರತಿ ಭಾಗದ ಜನತೆಯ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬಿಜೆಪಿ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ, ಬಡತನಕ್ಕೆ ಅಂಜದೆ ಧೈರ್ಯವಾಗಿ ಮುನ್ನಡೆಯಲು ಕಾಂಗ್ರೆಸ್ ಮೂಲಕ ತಮ್ಮ ಸೇವೆ ಗೈಯ್ಯುವೆಯಂದು ಜನತೆಗೆ ಅಭಯವನ್ನು ನೀಡಿದ್ದರಿಂದಲೇ ಜೋಡೊ ಯಾತ್ರೆ ಇತಿಹಾಸ ಸೇರಿತು” ಎಂದು ಗಂಗಾಧರ ದೊಡ್ಡವಾಡ ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರುಗಳಾದ ಪ್ರಕಾಶ ಕುರಹಟ್ಟಿ, ಸುಪ್ರೀತ್ ಶೆಟ್ಟಿ ವಿ ಜಿ, ಕೊಂಗವಾಡ ನೂರಮ್ಮದ್ ನದಾಫ್, ಈಶ್ವರ ಶಿರಸಂಗಿ, ಶಾರುಖ್ ಮುಲ್ಲಾ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಗೃಹಿಣಿ ಅಸಹಜ ಸಾವು: ಕೊಲೆ ಶಂಕೆ

ಇತ್ತೀಚಿಗಷ್ಟೇ ವಿವಾಹವಾಗಿದ್ದ ಗೃಹಿಣಿಯೊಬ್ಬರ ಅಸಹಜ ಸಾವು ಸಂಭವಿಸಿರುವ ಘಟನೆ ಹುಬ್ಬಳ್ಳಿ ನಗರದ...

ಧಾರವಾಡ | ಆ. 15 ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ಏಕತೆ ರೂಢಿಸಿಕೊಳ್ಳುವ ದಿನ: ಸಚಿವ ಸಂತೋಷ್ ಲಾಡ್

ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ...

ಹುಬ್ಬಳ್ಳಿ | ಜಾತಿ ನಿಂದನೆ; ಸೂಕ್ತ ಕಾನೂನು‌ ಕ್ರಮಕ್ಕೆ ಕುರುಬ ಸಮಾಜ ಒತ್ತಾಯ

ಸಾರ್ವಜನಿಕವಾಗಿ ಕುರುಬ ಸಮಾಜವನ್ನು ನಿಂದನೆ ಮಾಡಿ ಹಾಗೂ ಕುರುಬ ಸಮುದಾಯದ ಮುಖ್ಯಮಂತ್ರಿ...

Download Eedina App Android / iOS

X