ಸಭಾಧ್ಯಕ್ಷ ಸ್ಥಾನಕ್ಕೇರಲು ಟ್ರೋಲರ್‌ ಕಾರಣ, ಧೈರ್ಯದಿಂದ ಮಾತನಾಡಿ: ನೂತನ ಶಾಸಕರಿಗೆ ಖಾದರ್‌ ಕಿವಿಮಾತು

Date:

Advertisements
  • ‘ನಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂದು ಹಿಂಜರಿಕೆಯಲ್ಲಿ ಮಾತನಾಡಬೇಡಿ’
  • ‘ನಾವು ದೊಡ್ಡ ಸ್ಥಾನಕ್ಕೆ ಏರಲು ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ’

ಯಾರೋ ನಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂಬ ಹಿಂಜರಿಕೆಯಲ್ಲಿ ಮಾತನಾಡಬೇಡಿ. ಟ್ರೋಲ್‌ ಮಾಡುವವರ ಬಗ್ಗೆ ಯಾವತ್ತೂ ಹೆದರಬೇಡಿ. ನಾನು ಈ ಸಭಾಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಬಂದು ಕುಳಿತುಕೊಳ್ಳಲು ಈ ಟ್ರೋಲ್‌ ಮಾಡಿದವರು ಕೂಡ ಕಾರಣ. ನಾವು ದೊಡ್ಡ ಸ್ಥಾನಕ್ಕೆ ತಲುಪಬೇಕಾದರೆ ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಹೇಳಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಶಾಸಕರಿಗೆ ಮಾತನಾಡಲು ಸಭಾಧ್ಯಕ್ಷರು ಬುಧವಾರ ನಡೆದ ಎಂಟನೇ ದಿನದ ಕಲಾಪದಲ್ಲಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕ ಪ್ರದೀಪ್‌ ಈಶ್ವರ್‌ ಭಾಷಣ ಆರಂಭಿಸಿದರು. ಅವರ ಭಾಷಣದಲ್ಲಿನ ಹಿಂಜರಿಕೆ ಕಂಡ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ನೂತನ ಶಾಸಕರಿಗೆ ಮಾತನಾಡುವ ಬಗ್ಗೆ ಧೈರ್ಯತುಂಬಿ ಪ್ರೋತ್ಸಾಹಿಸಿದರು.

“ಹೊಸದಾಗಿ ಶಾಸಕರಾದವರು ಆತ್ಮವಿಶ್ವಾಸದಿಂದ ಮಾತನಾಡಬೇಕು. ಮಾತಿನಲ್ಲಿ ಹೆಚ್ಚು ಕಡಿಮೆ ಆದರೆ ತೊಂದರೆ ಇಲ್ಲ. ಇದೇನು ಪರೀಕ್ಷೆ ಅಥವಾ ಕೋರ್ಟ್‌ ಅಲ್ಲ. ಮುಕ್ತ ಮನಸ್ಸಿನಿಂದ, ಆರಾಮವಾಗಿ ಸಂವಿಧಾನಬದ್ಧವಾಗಿ ಮಾತನಾಡಿ” ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ಖಾದರ್, ಕನ್ನಡ ಮತ್ತು ಬೆತ್ತಲಾದ ಬಿಜೆಪಿ

“ಎಲ್ಲ ನೂತನ ಶಾಸಕರು ತಮಗೇನು ಹೇಳಬೇಕು ಅನ್ನಿಸುತ್ತದೆಯೋ ಅದನ್ನು ಮುಕ್ತವಾಗಿ ಹೇಳಿ. ಸಕಾರಾತ್ಮಕ ವಿಚಾರಗಳನ್ನು ಸದನದಲ್ಲಿ ಧೈರ್ಯವಾಗಿ ಹೇಳಿ. ಯಾವುದಕ್ಕೂ ಹಿಂಜರಿಯಬೇಡಿ” ಎಂದು ಕಿವಿಮಾತು ಹೇಳಿದರು.

“ಬಡಕುಟುಂಬದ ಹುಡಗ ಕೂಡ ವಿಧಾನಸೌಧ ತಲುಪುವುದಕ್ಕೆ ಪ್ರೇರಣೆಯಾದ ಅಂಬೇಡ್ಕರ್‌, ಅನಾಥ ಹುಡುಗರಿಗೆ ಅನ್ನವಿಟ್ಟು ಬೆಳೆಸಿದಂತಹ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸುತ್ತ ನನ್ನ ಭಾಷಣ ಪ್ರಾರಂಭಿಸಿರುವೆ” ಎಂದು ಪ್ರದೀಪ್‌ ಈಶ್ವರ್‌ ಮಾತು ಪ್ರಾರಂಭಿಸಿ ಅನ್ನಭಾಗ್ಯ ಯೋಜನೆ ಮತ್ತು ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಸದನದ ಗಮನ ಸೆಳೆದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X