ಮಂಡ್ಯ | ಸಾಹಿತ್ಯ ಸಮ್ಮೇಳನ ಪ್ರತಿನಿಧಿ ನೋಂದಣಿ ಅವಧಿ ವಿಸ್ತರಣೆಗೆ ಸಜಗೌ ಒತ್ತಾಯ

Date:

Advertisements

ಮಂಡ್ಯ ನಗರದಲ್ಲಿ ಡಿಸೆಂಬರ್‌ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರತಿನಿಧಿಗಳ ನೋಂದಣಿಯ ಅವಧಿಯನ್ನು ಡಿ.12ರವರೆಗೆ ವಿಸ್ತರಿಸುವಂತೆ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ ಸತೀಶ್ ಜವರೇಗೌಡ(ಸಜಗೌ) ಒತ್ತಾಯಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಇವರು, “ನಾಡಿನ ಹಲವು ಜಿಲ್ಲೆಗಳಿಂದ ತುಂಬಾ ಮಂದಿ ಸಾಹಿತ್ಯಾಸಕ್ತರು ತಮಗೆ ಕರೆ ಮಾಡಿ ‘ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರಾಗಿದ್ದೇವೆ. ಆದರೆ, ಆನ್‌ಲೈನ್‌ ನೋಂದಣಿಯಾದ್ದರಿಂದ, ಸಕಾಲಕ್ಕೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ನೋಂದಣಿಗೆ ಕಡೆಯ ದಿನಾಂಕ ವಿಸ್ತರಿಸಲು ಸ್ವಾಗತ ಸಮಿತಿ ಗಮನಕ್ಕೆ ತನ್ನಿ’ರೆಂದು ಕೋರಿದ್ದಾರೆ. ಹಾಗಾಗಿ ಅವಧಿ ವಿಸ್ತರಿಸಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನು ನೋಡಿದ್ದೀರಾ? ಚನ್ನಪಟ್ಟಣ | ‘ಯೋಗೇಶ್ವರ್‌ಗೆ ಜೈ ಎಂದ ಮತದಾರ!

Advertisements

“ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಇಚ್ಛಿಸುವವರು ‘ಆನ್‌ಲೈನ್’ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಿದೆ. ಎಲ್ಲರಿಗೂ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಬರುವುದಿಲ್ಲ. ಬರುವವರು ನೋಂದಣಿ ಮಾಡಿಕೊಳ್ಳಲು ಯತ್ನಿಸಿದಾಗ, ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೆಲವರು ನೋಂದಣಿ ಮಾಡಲಾಗದೆ ನಿರಾಶರಾಗಿದ್ದಾರೆ. ಆದ್ದರಿಂದ ಪ್ರತಿನಿಧಿ ನೋಂದಣಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವ್ಯವಸ್ಥೆ ಮಾಡಬೇಕು” ಎಂದು ಸಲಹೆ ನೀಡಿದ್ದಾರೆ.

“ನೋಂದಣಿ ಮಾಡಲಾಗದ ಸಾಹಿತ್ಯಾಸಕ್ತರು ಮತ್ತು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪ್ರತಿನಿಧಿಗಳು ಸಮ್ಮೇಳನ ಕುರಿತ ಅಗತ್ಯ ಮಾಹಿತಿಗಾಗಿ ನೋಂದಣಿ ಸಮಿತಿಯವರಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲವೆಂದು ತಮ್ಮ ಬಳಿ ದೂರವಾಣಿ ಮೂಲಕ ಅಲವತ್ತುಕೊಂಡಿದ್ದಾರೆ. ಆದ್ದರಿಂದ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಕೊಡಲು ‘ಸಹಾಯ ವಾಣಿ’ ಆರಂಭಿಸಬೇಕು” ಎಂದು ಸತೀಶ್ ಜವರೇಗೌಡ ಒತ್ತಾಯಿಸಿದ್ದಾರೆ.

ಇದನ್ನು ಓದಿದ್ದೀರಾ? ಬೆಂಗಳೂರು | ಮಾಹಿತಿ ಆಯುಕ್ತರ ಜರೂರು ನೇಮಕಕ್ಕೆ ಸಾರ್ವಜನಿಕರ ಆಗ್ರಹ

“ಪ್ರತಿನಿಧಿಗಳಾಗಿ ಭಾಗವಹಿಸುವ ನೋಂದಾಯಿತ ಸಾಹಿತ್ಯಾಸಕ್ತರಿಗೆ ‘ಬೆಲ್ಲ ಅಥವಾ ಸಕ್ಕರೆ’ಯ ಕೊಡುಗೆ ಕೊಡುವ ಬದಲು, ಮಂಡ್ಯ ಜಿಲ್ಲೆಯ ಸಾಹಿತಿಗಳ ಪರಿಚಯ, ಅವರ ಕೊಡುಗೆ, ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಸೇವೆ, ಮಂಡ್ಯದ ಸಾಧಕ ಗಣ್ಯರು, ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯೂ ಸೇರಿದಂತೆ ವಿವಿಧ ಕ್ಷೇತ್ರದ ಸಾಧನೆಯಗಳನ್ನು ಬಿಂಬಿಸುವ ಮತ್ತು ‘ಮಂಡ್ಯದ ಸಾಹಿತ್ಯ – ಸಾಂಸ್ಕೃತಿಕತನ’ವನ್ನು ಸಾರುವ ಕಿರುಹೊತ್ತಿಗೆ ಪ್ರಕಟಿಸಿ ಉಚಿತ ಕೊಡುಗೆಯಾಗಿ ನೀಡುವುದು ಸೂಕ್ತ” ಎಂದು ಸಲಹೆಯಿತ್ತಿದ್ದಾರೆ.

“ನೋಂದಣಿ ಉಪಸಮಿತಿ ರಚನೆಯಾದ ದಿನದಿಂದ ಈವರೆಗೆ ಎರಡು ಭಾರಿಯಷ್ಟೇ ಸಭೆ ನಡೆದಿದೆ. ಸಮಿತಿಯ ಸದಸ್ಯರಲ್ಲಿ ಹುರುಪು ಕಾಣುತ್ತಿಲ್ಲ. ಸಾಹಿತ್ಯ ಸಮ್ಮೇಳನದ ದಿನಾಂಕ ಹತ್ತಿರವಾಗುತ್ತಿರುವುದರಿಂದ, ಮತ್ತಷ್ಟು ಸಭೆಗಳು ನಡೆದು, ನೋಂದಾಯಿತ ಪ್ರತಿನಿಧಿಗಳ ಸಮಸ್ಯೆಗಳ ನಿವಾರಣೆಗೆ ಬಯಸುವ ಮಾಹಿತಿಗಳಿಗೆ ‘ತುರ್ತು ಸಹಾಯ ವಾಣಿ’ ಆರಂಭಿಸಬೇಕು” ಎಂದು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕುಡ್ ನಾಟ್ ಪಾಸಿಬಲ್ to ರಿಜಿಸ್ಟರ್ ಕನ್ನಡ sahithya ಸಮ್ಮೇಳನಸ್ ಸ್ಟೇಟಸ್ ಮಂಡ್ಯ ಪ್ಲೀಸ್ ಹೆಲ್ಪ್ ಯೋ ರಿಜಿಸ್ಟರ್ ಮೈ ಮಾಬ್ is 9141629583

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X