ಗದಗ | ಹಳ್ಳಿರಂಗ ಶಾಲೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ

Date:

Advertisements

ದೇಶದ ಕಟ್ಟ ಕಡೆಯ ಪ್ರತಿ ಪ್ರಜೆಯ ಹಿತಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆದು, ಮರಳಿ ತನ್ನ ಜನಗಳ ಹತ್ತಿರ ಬಂದು ಅವರಿಗೆ ಸಮಾನತೆ, ಹಕ್ಕುಗಳು, ಶಿಕ್ಷಣ ಸಿಗಲೆಂದು ಹಗಲಿರುಳು ಶ್ರಮಿಸಿದವರು ಡಾ. ಬಿ ಆರ್ ಅಂಬೇಡ್ಕರ್ ಎಂದು ಉಪನ್ಯಾಸಕ ಸೋಮಶೇಖರ್ ಕನಕಾಚಲ ಹೇಳಿದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಹಳ್ಳಿರಂಗ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಉಪನ್ಯಾಸಕರು ಸೋಮಶೇಖರ್ ಕನಕಾಚಲ ಮಾತನಾಡಿ, “ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು, ಅವರು ಸಂಕಟ, ಕಷ್ಟ, ನೋವುಗಳನ್ನೆಲ್ಲವನ್ನು ಓದಬೇಕು. ಅಂಬೇಡ್ಕರ್ ಅವರು ಶಿಕ್ಷಣ ಸಾಕಷ್ಟು ಮಹತ್ವವನ್ನು ಕೊಟ್ಟಿದ್ದರು, ಅದಕ್ಕಾಗಿಯೇ ಓದಿನ ಮೂಲಕವೇ ನಾವೆಲ್ಲರೂ ಜ್ಞಾನವನ್ನು ಕಟ್ಟಿಕೊಳ್ಳಬೇಕ” ಎಂದರು

Advertisements

ಅಂಬೇಡ್ಕರ್ ಅವರ ಪರಿನಿಬ್ಬಾಣದ ನಂತರ ಅವರ ಪುಸ್ತಕಗಳು ಮೂಲೆ ಗುಂಪುಗಳಾಗಿ ಸೇರಿದ್ದವು. ಎಷ್ಟೋ ವರ್ಷಗಳ ವರೆಗೆ ಅವುಗಳು ಪ್ರಕಟಣೆ ಕಾಣದೆ, ಓದುಗರಿಂದ ದೂರ ಉಳಿದಿದ್ದವು. ಅಂಬೇಡ್ಕರ್ ಅವರ ಪುಸ್ತಕಗಳನ್ನು ಪ್ರಕಟಿಸಬೇಕೆಂದು ಅನೇಕ ಹೋರಾಟಗಳು ನಡೆದ ನಂತರದಲ್ಲಿ ಅಂಬೇಡ್ಕರ್ ‌ಅವರ ಪುಸ್ತಕಗಳನ್ನು ಪ್ರಕಟಿಸಿದರು. ಬಳಿಕ ಅಂಬೇಡ್ಕರ್ ಅವರ ಜ್ಞಾನವನ್ನು ಎಲ್ಲರೂ ಅರಿಯುವಂತಾಯಿತು. ಅಂದರೆ, ಎಲ್ಲರಿಗೂ ಓದವ ಅವಕಾಶ ಸಿಕ್ಕಿತು. ಅಂಬೇಡ್ಕರ್ ಅವರ ವಿಚಾರಗಳು, ಚಿಂತನೆಗಳನ್ನು ತಿಳಿಯಲು ಸಾಧ್ಯವಾಯಿತು. ಹಾಗಾಗಿ ನೀವು ಅವರ ಬರಹಗಳನ್ನು ಓದಿ ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದು ಸೋಮಶೇಖರ್ ಕನಕಾಚಲ ಹೇಳಿದರು.

ಕವಿಗಾರ್ತಿ ಪೂಜಾ ಶಿಂಗೆ ಮಾತನಾಡಿ, “ಅಂಬೇಡ್ಕರ್ ವಿಚಾರಗಳನ್ನು ಯಾರು ಪ್ರಭುದ್ದವಾಗಿ ಜಾರಿಗೆ ತರುತ್ತಾರೋ ಅವರು ನಿಜವಾದ ಅನುಯಾಯಿಗಳು. ಅಂತಹ ಕೆಲಸವನ್ನು ಈ ಹಳ್ಳಿರಂಗ ಶಾಲೆ ಮಾಡುತ್ತಿದೆ. ಒಂದು‌ ಕಾಲದಲ್ಲಿ ಮನು ಗ್ರಂಥದಲ್ಲಿ ಮಹಿಳೆ ಸ್ವತಂತ್ರವಾಗಿರಲು ಅನರ್ಹಳೆಂದು ಹೇಳಿದೆ. ಆದರೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆ ಸ್ವತಂತ್ರಳು, ಸ್ವತಂತ್ರವಾಗಿ ಬದುಕಲು ಹಕ್ಕು ಕೊಟ್ಟಿದೆ” ಎಂದು ಹೇಳಿದರು.

ರಾಘವೇಂದ್ರ ಬಿನ್ನಾಳ ಅಥಿತಿ ಭಾಷಣ ಮಾಡಿ, “ಹಳ್ಳಿರಂಗ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳ ಜತೆಗೆ ಇಂತಹ ಒಳ್ಳೆಯ ವಾತಾವರಣದಲ್ಲಿ ಬೆಳೆಯುತ್ತಿದ್ದು, ಈ ಸಮಾಜದ ಬಗ್ಗೆ ದುಡಿದ ಜ್ಯೋತಿ ಬಾ ಫುಲೆ, ಅಂಬೇಡ್ಕರ್ ಅವರಂತಹ ಅನೇಕ ಮಹಿನೀಯರ ಜೀವನ ಮೌಲ್ಯಗಳನ್ನು ಸಶಕ್ತವಾಗಿ ಹೇಳುವಂತ ಸಾಮರ್ಥ್ಯವನ್ನು ನಿಮ್ಮಲ್ಲಿ ನಾನು ಕಂಡಿರುವೆ. ಶಿಕ್ಷಣ ವಂಚಿತರಾಗದಂತೆ ಮಕ್ಕಳ ಶಿಕ್ಷಣವನ್ನು ಹಳ್ಳಿರಂಗ ಶಾಲೆ ಮಾಡುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಹೊಳೆ ಮಣ್ಣೂರಲ್ಲಿ ಮನರೇಗಾ ಕೂಲಿ ಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ 

ಕಾರ್ಯಕ್ರಮದಲ್ಲಿ ಅಜರುದ್ದೀನ ಕುಸುಗಲ್, ಬಿ ಎಮ್ ಮುಳ್ಳೂರ, ರೂಪಾ ಅಗಸಿಮನಿ,  ಶಿಕ್ಷರು, ಹಿರಿಯರು ಗದಿಗೆಪ್ಪ ಕಡಿಯವರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X