“ರಾಜ್ಯದ ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಆದ್ದತೆ ನೀಡಬೇಕು. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಕೂಡಾ ಮನುಷ್ಯರೇ ಸರ್ಕಾರಗಳು ನಾಗರಿಕ ಸಮಾಜದಲ್ಲಿ ಸ್ಲಂ ನಿವಾಸಿಗಳಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡುವ ಮೂಲಕ ಸಮಾನ ಅವಕಾಶಗಳನ್ನು ದೊರಕಿಸಿಕೊಡುವ ವಾತಾವರಣ ನಿರ್ಮಾಣ ಮಾಡಬೇಕು” ಎಂದು ಸ್ಲಂ ಸಮಾವೇಶ ಉದ್ಘಾಟಿಸಿ ವಿ.ಪ ಸದಸ್ಯ ಪ್ರೊ. ಎಸ್ ವಿ ಸಂಕನೂರು ಮಾತನಾಡಿದರು.
ಗದಗ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ ಸಹಕಾರದಲ್ಲಿ, ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಸ್ಪಂ ಸಮಿತಿ ಅಧ್ಯಕ್ಷ ಇಮ್ಮಿಯಾಜ ಆರ್.ಮಾನ್ವಿ ಪಾಸ್ತಾವಿಕವಾಗಿ ಮಾತನಾಡಿ, “ನಮ್ಮ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕಲಾವಿದರನ್ನು ನಮ್ಮ ವೇದಿಕೆಯ ಮುಖಾಂತರ ಹೊರ ಜಗತ್ತಿಗೆ ಪರಿಚಯಸುವ ಕೆಲಸ ಈ ಸ್ಲಂ ಹಬ್ಬದ ಮೂಲಕ ಮಾಡಲಾಗುತ್ತಿದೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ವಿಭಾಗ ಮಟ್ಟದಲ್ಲಿ ಬರುವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೊಳಗೇರಿಗಳ ಸಾಮಾಜಿಕ ನ್ಯಾಯ ಮತ್ತು ಸಮಾನ ಹಕ್ಕುಗಳಿಗೆ ನಿರಂತರ ಹೋರಾಟಗಳನ್ನು ನಡೆಸುವ ಮುಖಾಂತರ ಕೊಳಗೇರಿ ಪ್ರದೇಶದ ಜನರು ಘನತೆಯಿಂದ ಬದುಕು ನಡೆಸಲು ವಾತಾವರಣ ನಿರ್ಮಾನ ಮಾಡಲಾಗುತ್ತಿದೆ” ಎಂದು ಹೇಳಿದರು.
ಸಮಾವೇಶದಲ್ಲಿ ವಿವಿಧ ಕಲಾ ತಂಡಗಳಾದ ಯಲ್ಲಪ್ಪ ಡೊಕ್ಕನವರ ಅವರಿಂದ ಸುಡಗಾಡ ಸಿದ್ದರ ವೇಷ, ದುರ್ಗಮುರ್ಗಿ ಕಲಾ ತಂಡ, ಮಂಗಳಮುಖಿಯರ ತಂಡ, ಗೋಸಾವಿ ತಂಡ, ಹುಬ್ಬಳ್ಳಿಯ ದರವೇಶ ತಂಡ ಹಾಗೂ ಹೊಸಪೇಟೆಯ ತಮಟೆ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಾಮೂಹಿಕ ಅತ್ಯಾಚಾರ ಪ್ರಕರಣ : ಮೂವರ ಬಂಧನ
ಹಿರಿಯ ಪತ್ರಕರ್ತೆ ಶಿವಕುಮಾರ ಕುಷ್ಟಗಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶಯ್ಯ, ಪ್ರಗತಿಪರ ಚಿಂತಕರು ಪ್ರೊ ಸತೀಶ ಪಾಸಿ, ಬಸವರಾಜ ಪೂಜಾರ, ಪ್ರಮುಖರಾದ ಶೋಭಾ ಕಮತರ, ವೆಂಕಮ್ಮ, ಸ್ಪಂ ಸಮಿತಿ ಉಪಾಧ್ಯಕ್ಷ ಆಶೋಕ ಕುಡತಿನ್ನಿ, ಕಾರ್ಯದರ್ಶಿ ಆರೋಕ ಕುಸು ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ, ಉಮರಫಾರು ಹುಬ್ಬಳ್ಳಿ ಅನ್ನರ ತಿರಪಟ್ಟಿ, ಎಂ.ಪಿ. ಮುಳಗುಂದ ವೇದಿಕೆ ಮೇಲೆ ಉಪಸ್ಥಿತರಿದ್ದರು.
