ಗದಗ | ಕೃಷಿ ಮಹಿಳೆಯರಿಗೆ ಉದ್ಯೋಗವಾದ ಬೇವಿನ ಬೀಜ

Date:

Advertisements

ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಹಿಳೆಯರು ಮಳೆಗಾಲದಲ್ಲಿ ಕೂಲಿ ಕೆಲಸ ಕಡಿಮೆಯಾದಾಗ ನೈಸರ್ಗಿಕವಾಗಿ ಬೆಳೆಯುವ ಬೇವಿನ ಬೀಜ ಹೆಕ್ಕುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ. ಹೊಲದ ಬದುವುಗಳಲ್ಲಿ, ಕಿನಾಲು ದಂಡೆಗಳ ಮೇಲೆ, ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೇವಿನ ಮರಗಳು ಬೆಳೆದಿರುತ್ತವೆ. ಯುಗಾದಿ ಸಮಯದಲ್ಲಿ ಬೇವಿನ ಮರಗಳು ಹೂವುಗಳನ್ನು ಬಿಟ್ಟು, ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತವೆ. ಹಣ್ಣುಗಳನ್ನು ಪಕ್ಷಿಗಳು ತಿಂದು, ಬರಿ ಬೀಜಗಳು ಗಿಡಗಳಲ್ಲಿ ಉಳಿದಿರುತ್ತವೆ.  ಬೀಜಗಳು ತೊಟ್ಟು ಉದುರಿ ಕೆಳಗೆ ಬೀಳುತ್ತವೆ.

ಇದೇ ಜೂನ್ ಸಮಯದಲ್ಲಿ ಮಳೆಗಾಲ ಆರಂಭವಾಗಿ ಮುಂಗಾರು ಬಿತ್ತನೆ ಕಾರ್ಯ ಆಗತಾನೆ ಆರಂಭವಾಗಿರುತ್ತದೆ. ಈ ಸಂದರ್ಭದಲ್ಲಿ ಕೃಷಿ ಮಹಿಳೆಯರಿಗೆ ಹೊಲಗಳಲ್ಲ ಕೃಷಿ ಕೆಲಸ ಕಡಿಮೆ ಇರುವುದರಿಂದ, ಹೊಲದ ಬದುವುಗಳಲ್ಲಿ, ಕೆರೆಯ ದಂಡೆಗಳ ಮೇಲೆ ಬೆಳೆದಿರುವ ಬೇವಿನ ಮರಗಳನ್ನು ಹುಡುಕಿ ಬೀಜಗಳನ್ನು ಒಂದೊಂದಾಗಿ ಆರಿಸಿ, ಸಂಗ್ರಹಿಸಿ, ಅವುಗಳನ್ನು ಮಾರಾಟ ಮಾಡಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಆರು ಡಂಬಿ ಸೇರಿ ಒಂದು ಚೀಲಕ್ಕೆ ಬೇವಿನ ಬೀಜಕ್ಕೆ 650 ರೂ.ಗಳಿಂದ 700 ರೂ. ಇರುತ್ತದೆ. ಕೃಷಿ ಮಹಿಳೆಯರು ಅಡವಿಗಳಲ್ಲಿ ಅಲೆದಾಡಿ ದಿನಕ್ಕೆ ನಾಲ್ಕರಿಂದ ಐದು ಡಂಬಿಗಳಷ್ಟು ಬೀಜಗಳನ್ನು ಸಂಗ್ರಹಿಸುತ್ತಾರೆ. ಕೃಷಿ ಮಹಿಳೆಯರು ದಿನಕ್ಕೆ ನಾಲ್ಕುನೂರರಿಂದ ಐದುನೂರು ರೂಪಾಯಿಗಳಷ್ಟು ಆದಾಯ ಗಳಿಸುತ್ತಾರೆ. ಹೀಗೆ ಹದಿನೈದರಿಂದ ಒಂದು ತಿಂಗಳುಗಳ ಕಾಲ ಬೇವಿನ ಬೀಜ ಹೆಕ್ಕುವ ಉದ್ಯೋಗವನ್ನು ಅವಲಂಬಿಸಿರುತ್ತಾರೆ.

Advertisements

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಎಪಿಎಂಸಿಯಲ್ಲಿ ಬೇವಿನ ಬೀಜದ ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆಯ ಖರೀದಿದಾರರು, ರೋಣ, ಗಜೇಂದ್ರಗಡ, ಹುನಗುಂದ, ಲಿಂಗಸೂರು, ಯಲಬುರ್ಗಾ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಹೋಗಿ, ಕೃಷಿ ಮಹಿಳೆಯರು ಸಂಗ್ರಹಿಸಿದ ಬೀಜಗಳನ್ನು ಖರೀದಿ ಮಾಡ್ಕೊಂಡು ಹೋಗುತ್ತಾರೆ.

ಬೇವಿನ ಬೀಜದಿಂದ ಆದಾಯ ಕಳಿಸುವ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಕುಷ್ಟಗಿ ತಾಲೂಕಿನ ರೈತ ವೀರೇಶ್ ಕಟ್ಟಿಮನಿ, “ಬೇವಿನ ಬೀಜಗಳಿಂದ ಕೂದಲು ಎಣ್ಣೆ, ಔಷಧಿಗಳನ್ನು ತಯಾರಿಸುತ್ತಾರೆ. ಬೀಜದ ಹಿಂಡಿಯನ್ನು ಮರ, ಗಿಡ, ಬೆಳೆಗಳ ಬುಡಕ್ಕೆ ಹಾಕಿದರೆ ಹೆಚ್ಚು ಆರೋಗ್ಯವಾಗಿ, ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ” ಎಂದು ಹೇಳಿದರು.

ಈದಿನ.ಕಾಮ್ ಜೊತೆಗೆ ಮಾತನಾಡಿದ ರೋಣ ತಾಲೂಕಿನ ಚಿಕ್ಕಮನ್ನೂರು ಗ್ರಾಮದ ಕೃಷಿ ಮಹಿಳೆ ಮುತ್ತವ್ವ, “ಮುಂಜಾನೆಯಿಂದ ಸಂಜೆವರೆಗೂ ಆರಿಸಿದ್ರು ಮೂರರಿಂದ ನಾಲ್ಕು ಡಬ್ಬಿ ಅರಿಸ್ತೀವಿ. ದಿನಕ್ಕೆ ನಾಲ್ಕುನೂರು ದುಡಿತೀವಿ” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X