ಬೆಂಗಳೂರು | ಜಿಐಓ ಸದಸ್ಯರ ರಾಜ್ಯ ಸಮಾವೇಶ ಸಮಾರೋಪ

Date:

Advertisements

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್‌ನ(ಜಿ ಐ ಓ)ರಾಜ್ಯಮಟ್ಟದ ಸಮಾವೇಶವು ಬೆಂಗಳೂರು ನಗರದಲ್ಲಿರುವ ಸಿಎಂಎ ಗ್ರಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚಿಗೆ ಸಮಾರೋಪಗೊಂಡಿತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 1200 ಸದಸ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷೆ ಸೀಮಾ ತಾಜ್ ಹುಮನಬಾದ್, ಒಮ್ಮೆ ಕಂಡ ಕನಸಿನ ಅಭಿವ್ಯಕ್ತಿ ಜಿ ಐ ಓ ಆಗಿದೆ. ಜಿ ಐ ಓ ಯುವತಿಯರು ಮಾದರಿಯಾದ ಮುಸ್ಲಿಮ್ ಮಹಿಳೆಯರಾಗಿ ಹೇಗೆ ಬೆಳೆಯಬೇಕು. ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಯಾವ ರೀತಿಯಲ್ಲಿ ತಮ್ಮ ಸೇವೆಗಳನ್ನು ಕೊಡಬೇಕು ಎಂದು ತಿಳಿಸಿದರು.

1002292409

ಜಿ ಐ ಓ ಕರ್ನಾಟಕವು ತನ್ನ ಪ್ರಯಾಣವನ್ನು ನೆನೆಸುವ ಸಲುಗಾಗಿ ಜಿ ಐ ಓ ವಿಶೇಷಾಂಕವನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮೊಹಮ್ಮದ್ ಸಾದ್ ಬೆಳಗಾಮಿ ಅವರು ಬಿಡುಗಡೆ ಮಾಡಿದರು.

Advertisements

ಶಬ್ಬೀರ್ ಅಹಮದ್ ಖಾನ್ ಅವರು ತಮ್ಮ ಭಾಷಣದಲ್ಲಿ, ಸಮಾಜದ ಪುನರ್ ನಿರ್ಮಾಣ ಎಂಬ ವಿಷಯದಡಿ ಮಾತನಾಡಿ, ನಾವು ಇತಿಹಾಸದ ಯುಗವನ್ನು ಅಧ್ಯಯನ ಮಾಡಬೇಕೆಂದು ಮತ್ತು ಆ ಕಾಲದಲ್ಲಿ ಸಮಾಜ ಹೇಗಿತ್ತು ಎಂಬುದನ್ನು ಗಮನಿಸಬೇಕೆಂದು ಹೇಳಿದರು.

“ಮುಸ್ಲಿಂ ಮಹಿಳೆಯರು ಮತ್ತು ಭಾರತೀಯ ಸಮಾಜದಲ್ಲಿ ಅವರ ಪ್ರಾತಿನಿಧ್ಯ” ಎಂಬ ವಿಷಯದಡಿಯಲ್ಲಿ ಸಂವಾದ ನಡೆಯಿತು.

1002292410

NFGIO ರಾಷ್ಟ್ರೀಯ ಅಧ್ಯಕ್ಷೆ ಸುಮಯ್ಯಾ ರೋಷನ್, ಜಿಐಒ ಮಾಜಿ ರಾಜ್ಯ ಸಲಹಾ ಸಮಿತಿಯ ಸದಸ್ಯೆಯರಾದ ಉಬೈದಾ, ಫರ್ಹಾ ಖಾಲಿದ್, ಫಾರ್ವರ್ಡ್ ಟ್ರಸ್ಟ್, ಕರ್ನಾಟಕದ ಜಂಟಿ ಕಾರ್ಯದರ್ಶಿ ನುಝತ್ ರಜ್ವಿಯವರು ಪ್ಯಾನೆಲಿಸ್ಟರಾಗಿ ಭಾಗವಹಿಸಿದರು ಮತ್ತು ಚರ್ಚೆಯನ್ನು ನೌಶಾಬಾ ಸುಲ್ತಾನಾ ಅವರು ನಿರ್ವಹಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕಿಲಾ ಖಾನಂ, ಅತಿಥಿಯಾಗಿದ್ದ ಖಾನ್ ಮುಬಶಿರಾ ಫಿರ್ದೌಸ್ ಅವರು ಮಾತನಾಡಿದರು. ಆ ನಂತರ ಜಿಐಓ ಕರ್ನಾಟಕದ ವತಿಯಿಂದ ಸಮಾವೇಶದ ರಾಜ್ಯ ತಂಡವನ್ನು ಗೌರವಿಸಲಾಯಿತು.

1002292408

ಬೆಂಗಳೂರು ನಗರದ ಖ್ಯಾತ ವೈದ್ಯರಾದ ಡಾ. ತಾಹಾ ಮತೀನ್ ಅವರು “Small things big Impact” ಎಂಬ ವಿಷಯದಡಿ ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಜಮಾಅತ್ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮೊಹಮ್ಮದ್ ಸಾದ್ ಮಾತನಾಡಿ, ಯುವಜನತೆ ವ್ಯಕ್ತಿತ್ವ, ನೈತಿಕತೆ ಮತ್ತು ವ್ಯಕ್ತಿ ಸ್ವಭಾವವನ್ನು ಇಸ್ಲಾಮಿನ ಅನುಸಾರ ರೂಪಿಸಬೇಕು. ತನ್ನ ಸ್ವಭಾವವನ್ನು ಬದಲಾಯಿಸಬೇಕು ಎಂದರು.

ಸಿಸ್ಟರ್ ಝೈನಬಾ ಗಝಾಲಿ ಧನ್ಯವಾದ ಕಾರ್ಯಕ್ರಮವನ್ನು ಮಾಡಿದರು. ಮರಿಯಂ ಉಡುಪಿ, ಜುಫಿಷಾ ನಿಖಾತ್ ಖಾಜಿ, ಆಮಿನಾ ಮುಷೀರಾ, ಆಯೇಶಾ ಸ್ವಾಲೆಹಾ ಕಾರ್ಯಕ್ರಮವನ್ನು ನಿರೂಪಿಸಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X