ಗುಬ್ಬಿ | ಮಾರಕ ಎನಿಸಿದ ರಸ್ತೆಬದಿಯ ಜಂಗಲ್ : ಮಾರ್ಗವನ್ನೇ ಆವರಿಸಿದ ಗಿಡಬಳ್ಳಿ ತೆರವಿಗೆ ಆಗ್ರಹ

Date:

Advertisements

ಗುಬ್ಬಿ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಯಲ್ಲಿ ಬೆಳೆದು ನಿಂತ ಜಂಗಲ್ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಮೂಡಿಸಿದೆ. ಏಕಕಾಲದಲ್ಲಿ ಎರಡು ವಾಹನ ಸಂಚಾರ ಕಷ್ಟವಾದ ಈ ಜಂಗಲ್ ಮಳೆಗಾಲದಲ್ಲಿ ಆರೇಳು ಅಡಿಗಳ ಎತ್ತರದ ಬೆಳೆದು ರಸ್ತೆಯ ಅಂಚಿನ ಎರಡು ಅಡಿ ಕಬಳಿಸಿದೆ. ಈ ಜಂಗಲ್ ತೆರವು ಕೂಡಲೇ ಮಾಡದಿದ್ದರೆ ಆಗುವ ಅಪಘಾತ, ಜೀವ ಹಾನಿಗೆ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ಹೊರಬೇಕಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮೀಣ ರಸ್ತೆಯಲ್ಲಿ ಬೆಳೆದ ಗಿಡಮರಗಳ ನಡುವೆ ರೈತರು ತಮ್ಮ ಜಾನುವಾರು ಕಟ್ಟುತ್ತಿದ್ದು ವಾಹನ ಸವಾರರಿಗೆ ಕಣ್ಣಿಗೆ ಕಾಣದ ದನಕರುಗಳು ವಾಹನ ಶಬ್ದಕ್ಕೆ ಏಕಾಏಕಿ ರಸ್ತೆಗೆ ಬಂದು ವಾಹನ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಬಿದ್ದು ಮೂಳೆ ಮುರಿದುಕೊಂಡ ನಿದರ್ಶನ ಸಾಕಷ್ಟಿದೆ. ಕೆಲ ಗ್ರಾಮದಲ್ಲಿ ರಸ್ತೆ ಬದಿ ಮುಂಜಾನೆ ಮತ್ತು ಸಂಜೆ ವೇಳೆ ವಾಯುವಿಹಾರ ಮಾಡುವ ಸಾಕಷ್ಟು ಮಂದಿಗೆ ಜಂಗಲ್ ಕಿರಿಕಿರಿ ಉಂಟು ಮಾಡಿದೆ. ವಾಹನಗಳು ಬಂದರೆ ಪಾದಚಾರಿಗೆ ರಸ್ತೆಯೇ ಇಲ್ಲ. ಎಲ್ಲವೂ ಗಿಡ ಬಳ್ಳಿಗಳೇ ಆವರಿಸಿಕೊಂಡಿದೆ. ಈ ನಿತ್ಯ ಸಂಕಟವನ್ನು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.

WhatsApp Image 2024 09 19 at 15.15.19 f20c80f2 1

ಹೆಬ್ಬೂರು ರಸ್ತೆ, ಕಕ್ಕೇನಹಳ್ಳಿ ರಸ್ತೆ, ಸಿ.ಎಸ್.ಪುರ ರಸ್ತೆ, ಸೇರಿದಂತೆ ಚೇಳೂರು, ಹಾಗಲವಾಡಿ ಹೋಬಳಿಯ ಗ್ರಾಮೀಣ ರಸ್ತೆಗಳ ಜಂಗಲ್ ತೆರವು ಕಾರ್ಯಾಚರಣೆ ತುರ್ತು ನಡೆಯಬೇಕಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದಾಗ ಒಂದು ತಿಂಗಳಲ್ಲಿ ಕೆಲಸ ಮಾಡುವ ಮಾತುಗಳಾಡಿದರು. ಆದರೆ ತಿಂಗಳಾದರೂ ಕೆಲಸ ಮಾಡುವ ಲಕ್ಷಣವೇ ಕಾಣುತ್ತಿಲ್ಲ ಎಂದು ದೂರಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ರಸ್ತೆಯ ಪಕ್ಕ ಜಂಗಲ್ ತೆರವಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಾ ಜವಾಬ್ದಾರಿ ವಹಿಸಬೇಕಿದೆ. ನಮ್ಮಿಂದ ಪಡೆಯುವ ತೆರಿಗೆ ಹಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆ ಜಂಗಲ್ ತೆರವು ಮಾಡಬೇಕು. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಇಂದಿಗೂ ಜಂಗಲ್ ತೆಗೆಯದ ಹಿನ್ನಲೆ ಸೊಳ್ಳೆಗಳ ಕಾಟ ಉಪಟಳವಾಗಿದೆ. ಮಾರಕ ರೋಗಕ್ಕೆ ಈ ಜಂಗಲ್ ಕೂಡಾ ನೇರ ಕಾರಣವಾಗಿದೆ ಎಂದು ಆರೋಪಿಸಿದರು.

Advertisements


ಮಳೆಗಾಲದಲ್ಲಿ ರಸ್ತೆ ಬದಿ ಜಂಗಲ್ ಬೆಳೆದಿದೆ. ಪ್ರತಿ ವರ್ಷದಂತೆ ಮಳೆಗಾಲದ ಎರಡು ತಿಂಗಳ ಸಮಯದಲ್ಲಿ ಜಂಗಲ್ ತೆರವು ಮಾಡುತ್ತೇವೆ. ಅದೇ ರೀತಿ ಸರ್ಕಾರ ಅನುದಾನ ನೀಡಿದ್ದು ಗುತ್ತಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹದಿನೈದು ದಿನದಲ್ಲಿ ಜಂಗಲ್ ತೆರವು ತಾಲ್ಲೂಕಿನ ರಸ್ತೆಗಳಲ್ಲಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್ ಹೇಳಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X