ಗುಬ್ಬಿ | ತೋಟದ ಮನೆಗೆ ಇರುವ ನಕಾಶೆ ರಸ್ತೆ ಬಿಡಿಸಿಕೊಡಲು ತಾಲೂಕು ಆಡಳಿತ ವಿಳಂಬ : ವಕೀಲ ನವೀನ್ ಕುಮಾರ್ ಆರೋಪ

Date:

Advertisements

ನನ್ನ ಜಮೀನಿಗೆ ಹಾಗೂ ಮನೆಗೆ ಹೋಗಲು ದುರುದ್ದೇಶದಿಂದ ರಸ್ತೆ ತಡೆದು ತೊಂದರೆ ನೀಡುತ್ತಿದ್ದು, ನಕಾಶೆಯಲ್ಲಿರುವ ರಸ್ತೆ ಬಿಡಿಸಿಕೊಡಲು ಅರ್ಜಿ ಸಲ್ಲಿಸಿ ಕೇಳಿದಾಗ ತಾಲ್ಲೂಕು ಆಡಳಿತ ವಿಳಂಬ ಅನುಸರಿಸುತ್ತಿದ್ದು ಸಿನಿಯಾರಿಟಿ ಕಾರಣ ನೀಡಿ ನಮ್ಮ ಮನೆಗೆ ಹೋಗಲು ಅಡ್ಡಿಪಡಿಸಿದವರ ಪರ ಪರೋಕ್ಷವಾಗಿ ನಿಂತಂತೆ ಕಾಣುತ್ತಿದೆ ಎಂದು ವಕೀಲ ಎಚ್.ಜಿ.ನವೀನ್ ಕುಮಾರ್ ನೇರ ಆರೋಪ ಮಾಡಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂಬರ್ 88/2, 105/2, 41/2 ರ ಜಮೀನು ಖರೀದಿ ಮಾಡಿದ ನನಗೆ ಸುಖಾಸುಮ್ಮನೆ ಕೆಲ ಪ್ರಭಾವಿಗಳು ತಮಗೆ ಸಿಗದ ಈ ಜಮೀನು ಬೆಂಗಳೂರಿನಿಂದ ಖರೀದಿ ಮಾಡಿದ್ದಾರೆ ಎಂದು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ನಕಾಶೆಯಲ್ಲಿ ಸರ್ವೇ ನಂಬರ್ 47/2 ರಲ್ಲಿ ಇರುವ ನನ್ನ ಮನೆಗೆ ರಸ್ತೆ ಓಡಾಡಲು ಅಡ್ಡಿಪಡಿಸಿದ್ದಾರೆ. ನಕಾಶೆಯಲ್ಲಿ ಇರುವ ರಸ್ತೆಯನ್ನು ಹಳ್ಳ ತೆಗೆದು ಮುಚ್ಚಿದ್ದಾರೆ. ಮತ್ತೊಂದು ರಸ್ತೆ ನರೇಗಾ ಯೋಜನೆಯಲ್ಲಿ ನಿರ್ಮಿಸಿದ್ದರೂ ಅದನ್ನು ಮಣ್ಣು ಜಲ್ಲಿ ಸುರಿದು ಅಡ್ಡಿಪಡಿಸಿದ್ದಾರೆ. ಎರಡು ಬಾರಿ ಅರ್ಜಿ ನೀಡಿದರೂ ತಹಶೀಲ್ದಾರ್ ಗಣನೆಗೆ ತೆಗೆದುಕೊಂಡಿಲ್ಲ. ಸಿನಿಯಾರ್ಟಿ ಪ್ರಕಾರ ಒಂದು ಅಥವಾ ಎರಡು ತಿಂಗಳು ಕಳೆದರೂ ನನ್ನ ಮನೆಗೆ ರಸ್ತೆ ಇಲ್ಲವಾಗುತ್ತದೆ. ಊರಿನಲ್ಲಿ ಸಂಘರ್ಷ ಬೆಳೆಯದಂತೆ ತಾಲ್ಲೂಕು ಆಡಳಿತ ಮಾಡಬೇಕಾದ ಕೆಲಸ ಮಾಡದೆ ಪ್ರಭಾವಿಗಳ ಪರ ವಹಿಸಿ ನಮ್ಮ ಅರ್ಜಿ ನಿರ್ಲಕ್ಷ್ಯ ತೋರುತ್ತಾ ಹೀಗೆ ಮುಂದುವರೆದಲ್ಲಿ ತಾಲ್ಲೂಕು ಕಚೇರಿ ಮುಂದೆ ನಾನು ನನ್ನ ಬಾಣಂತಿ ಪತ್ನಿ, ಸಣ್ಣ ಮಗುವಿನ ಜೊತೆ ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X