ಗುಬ್ಬಿ | ಪ್ರವಾಸಿಗರ ತನ್ನತ್ತ ಸೆಳೆದ ವಾಸುದೇವ ಅಣೆ : ಮಳೆಗಾಲದಲ್ಲಿ ಧುಮ್ಮಿಕ್ಕುವ ಶಿಂಷಾ ನದಿ

Date:

Advertisements

 ಕಾವೇರಿಯ ಉಪ ನದಿ ಶಿಂಷಾ ದೇವರಾಯನದುರ್ಗದಲ್ಲಿ ಹುಟ್ಟಿ ದಕ್ಷಿಣ ಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಮೂಲಕ ಕಾವೇರಿ ಸೇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಬಹುಭಾಗ ಹರಿಯುವ ಈ ಶಿಂಷಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಮಾರ್ಗ ಮಧ್ಯೆ ಗುಬ್ಬಿ ತಾಲ್ಲೂಕು ಕಡಬ ಹೋಬಳಿ ವರಹಸಂದ್ರ ಬಳಿಯ ವಾಸುದೇವ ಅಣೆಯಲ್ಲಿ ಮೈದುಂಬಿ ಹರಿಯುವ ಶಿಂಷಾ ನದಿ ನೋಡುವುದೇ ಒಂದು ಆನಂದ. 

ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಸಿಗರನ್ನು ಸೆಳೆದ ವಾಸುದೇವ ಅಣೆ ಎರಡು ಗ್ರಾಮ ಸಂದಿಸುತ್ತದೆ. ಹರಿದೇವನಹಳ್ಳಿ ಬೋಚಿಹಳ್ಳಿ ಗ್ರಾಮದ ನಡುವಿನ ಅಣೆ ಸುಮಾರು 100 ಮೀಟರ್ ಉದ್ದ 10 ಅಡಿ ಎತ್ತರದ ತಡೆಗೋಡೆಯಿಂದ ಧುಮ್ಮಿಕ್ಕುವ ನದಿ ನೀರು ಪ್ರವಾಸಿಗರ ಮೈಮನ ತುಂಬುತ್ತದೆ.

ಮಳೆಗಾಲದ ನಾಲ್ಕು ತಿಂಗಳು ತುಂಬಿ ಹರಿಯುವ ಶಿಂಷಾ ನೋಡಲು ಜಿಲ್ಲೆಯ ಹಲವು ಭಾಗದ ಪ್ರವಾಸಿಗರು ಆಗಮಿಸುತ್ತಾರೆ. ವರ್ಷವಿಡಿ ಈ ಅವಕಾಶ ಸಿಗದ ಹಿನ್ನಲೆ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಾಗಿಲ್ಲ. ಸುತ್ತಲಿನ ಗ್ರಾಮಸ್ಥರು ಮಳೆಗಾಲದ ಅಣೆಯಿಂದ ಧುಮಕ್ಕುವ ಸೊಬಗು ಸವಿದಿದ್ದಾರೆ. ತುಮಕೂರು ಮೈಸೂರು ರಸ್ತೆಗೆ ಪಕ್ಕದಲ್ಲಿ ಕಾಣಸಿಗುತ್ತದೆ. ಗುಬ್ಬಿ ತಾಲ್ಲೂಕಿನ ಕಡಬ ಕಲ್ಲೂರು ಕ್ರಾಸ್ ಮೂಲಕ ನಾಲ್ಕು ಕಿಮೀ ಕ್ರಮಿಸಿದರೆ ಈ ಜಲಪಾತ ಕಾಣುತ್ತದೆ. ನೈಸರ್ಗಿಕ ಅಲ್ಲವಾದರೂ ಮಾನವ ನಿರ್ಮಿತ ಆಕರ್ಷಣೀಯ ಎನಿಸಿದೆ.

Advertisements
1000652807

ಗುಬ್ಬಿ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳೇ ಕಡಿಮೆ. ಇಂತಹ ಸಂದರ್ಭದಲ್ಲಿ ವಾಸುದೇವ ಅಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಅಣೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ನಿರ್ಮಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಬೇಕಿದೆ. ಸುಂದರವಾಗಿ ಕಾಣಲು ಮೊದಲು ಅಲ್ಲಿನ ಒತ್ತುವರಿ ತೆರವು, ನದಿ ಹರಿಯುವ ಕೊಳ್ಳ ಅಚ್ಚುಕಟ್ಟು, ಹೂಳು ತೆಗೆಯುವುದು ಹೀಗೆ ಅನೇಕ ಕೆಲಸ ನಡೆಸಿ ಪ್ರವಾಸಿ ತಾಣವೆಂದು ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಕೂಲ ಮಾಡಬೇಕು ಎಂಬುದು ಸ್ಥಳೀಯ ಪರಿಸರವಾದಿಗಳ ಒತ್ತಾಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ

 ನಾಗಸಂದ್ರ ವಿಜಯಕುಮಾರ್ ವಿವರಿಸಿದರು.

ವರದಿ – ಎಸ್. ಕೆ. ರಾಘವೇಂದ್ರ 

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X