ಹಾವೇರಿ | ದಲಿತ ಸಮುದಾಯಕ್ಕೆ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡುವಂತೆ ದಸಂಸ ಒತ್ತಾಯ

Date:

Advertisements

ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜಾತಿಗಳಿಂದ ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರಗೊಂಡ ಜನರಿಗೆ ಮೀಸಲಾತಿ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಒತ್ತಾಯಿಸಿದೆ.

ಹಾವೇರಿಯಲ್ಲಿ ದಸಂಸ ಮತ್ತು ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ “ದಲಿತ ಸಮುದಾಯಕ್ಕೆ ಮತಾಂತರ ಹೊಂದಿದವರಿಗೆ ಮೀಸಲಾತಿ ನೀಡಲೇಬೇಕು” ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ದಸಂಸ ಮುಖಂಡ ಉಡಚಪ್ಪ ಮಾಳಗಿ, “ದಲಿತ ಸಮುದಾಯಕ್ಕೆ ಸ್ವಯಂ ಇಚ್ಛೆಯಿಂದ ಮತಾಂತರ ಹೊಂದಿರುವ ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜನರಿಗೆ ಇವರಿಗೆ ಮೀಸಲಾತಿ ವಿಸ್ತರಣೆ ಕೋರಿರುವ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ವ್ಯಾಪಕ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಆಯೋಗ ರಚಿಸಿದೆ. ಈ ಸಮಯದಲ್ಲಿ, ದಲಿತ ಸಂಘಟನೆಗಳು ಮೀಸಲಾತಿ ವಿಸ್ತರಣೆ ಕುರಿತು ಸಮಗ್ರ ವರದಿಯನ್ನು ಆಯೋಗಕ್ಕೆ ನೀಡಬೇಕಿದೆ” ಎಂದರು.

Advertisements

ಸಭೆಯಲ್ಲಿ ದಸಂಸ ಮುಖಂಡ ಮಂಜಪ್ಪ ಮರೋಳ, ಎನ್.ಟಿ ಮಂಜುನಾಥ, ಮಂಜಪ್ಪ ಹರಪನಹಳ್ಳಿ, ಅಕ್ಕಮ್ಮ ಮರೋಳ, ಮಂಜಪ್ಪ ದೊಡ್ಡ ಕರಿಯಮ್ಮನವರ, ಮಹೇಶಣ್ಣಾ ಹರಿಜನ, ಹನುಮಂತ ಹೌಸಿ,ವಿಭೂತಿ ಶೆಟ್ಟಿ, ಹನುಮಂತಪ್ಪ ಸಿ.ಡಿ,ಅಡೆವೆಪ್ಪ ಬಿದರಕೊಪ್ಪ,ಮಾಲತೇಶ ಕರ್ಜಗಿ,ಮಲ್ಲೇಶ ಕರ್ಜಗಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಕಟ್ಟಡ ಕಾರ್ಮಿಕರ ಸೌಲಭ್ಯ ಸಿಗುವಲ್ಲಿ  ಮದ್ಯವರ್ತಿಗಳ ಹಾವಳಿ ತಡೆಗಟ್ಟಲು ಕರವೇ ಸ್ವಾಭಿಮಾನಿ ಬಣ ಒತ್ತಾಯ

"ಹಾವೇರಿ ಜಿಲ್ಲಾದ್ಯಂತ ಸರ್ಕಾರದಿಂದ ಪರವಾನಿಗೆ ಪಡೆದ ಕಲವೊಂದು ಕಟ್ಟಡ ಮತ್ತು ಇತರೆ...

ಹಾವೇರಿ | ಆ.16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲೇಬೇಕು: ಉಡಚಪ್ಪ ಮಾಳಗಿ

ರಾಜ್ಯ ಸರ್ಕಾರವು ಆಗಸ್ಟ್ 16ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಲೇಬೇಕು. ಈ...

ಹಾವೇರಿ | ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಿಗಬೇಕು: ಕರವೇ ಸ್ವಾಭಿಮಾನಿ ಬಣ

ಹಾವೇರಿ ಜಿಲ್ಲಾದ್ಯಂತ ಅಧಿಕೃತ ಕಟ್ಟಡ ಕಾರ್ಮಿಕರಿಗೆ ಸರರ್ಕಾರದ ಸೌಲಭ್ಯಗಳು‌ ಸಮರ್ಪಕವಾಗಿ ಸಿಗಬೇಕಾದಲ್ಲಿ...

ಮಳೆ | ಹಾವೇರಿ ಗದಗ ಸೇರಿದಂತೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಗದಗ ಹಾವೇರಿ ಸೇರಿದಂತೆ ರಾಜ್ಯದ ೧೭ ಜಿಲ್ಲೆಗಳಲ್ಲಿ ಆಗಸ್ಟ್? ೧೭ರ ವರೆಗೂ...

Download Eedina App Android / iOS

X