ಹುಬ್ಬಳ್ಳಿ | ಲಿಂಗಾಯತರು ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಬೇಕಿದೆ: ಗಂಗಾಧರ ದೊಡವಾಡ

Date:

Advertisements

ಬಸವಣ್ಣನವರ ಬಾಲ್ಯದ ಸಂದರ್ಭದಲ್ಲಿ ತಾಂಡವವಾಡುತ್ತಿದ್ದ ವರ್ಗ, ವರ್ಣ, ಜಾತೀಯತೆ ಮೇಲು-ಕೀಳುಗಳ ಆಚರಣೆಗಳನ್ನು ಬದಿಗೆ ಸೇರಿಸಿ ಸರ್ವ ಸಮಾನತೆ ಸಾರುವ ಇಷ್ಟಲಿಂಗವನ್ನು ಪ್ರಧಾನ ಮಾಡಿ ಹೆಮ್ಮೆಯಿಂದ ಲಿಂಗಾಯತರೆಂದು ಹೇಳಿಕೊಳ್ಳುವ ನವಸಮಾಜವೊಂದನ್ನು ಹುಟ್ಟು ಹಾಕಿದರು. ಹೀಗಾಗಿ ಲಿಂಗಾಯತರು ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಬೇಕಿದೆ ಎಂದು ರಾಷ್ಟ್ರೀಯ ಬಸವದಳದ ಸಂಘಟನಾ ಕಾರ್ಯದರ್ಶಿ ಗಂಗಾಧರ ದೊಡ್ಡವಾಡ ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಬಸವ ಜಯಂತಿ ಉತ್ಸವದ ಅಂಗವಾಗಿ ಬಸವ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೆಯ ಶತಮಾನದಲ್ಲಿ ಕೆಲವು ಕಿಡಿಗೇಡಿಗಳು ಬಸವಣ್ಣನವರ ಸಮಾಜಮುಖಿ ಚಿಂತನೆಗಳನ್ನು ವಿರೋಧಿಸಿದ್ದರು. ಅಂದಿನಂತೆ ಇಂದಿಗೂ ಬಸವತತ್ವ ವಿರೋಧಿಸುವ ಕೆಲವು ಅವಿಚಾರಿಗಳು ಬಸವಣ್ಣನವರ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಲಿಂಗಾಯತರು ಜಾಗೃತರಾಗಿ, ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಿ ಐಕ್ಯತೆ ಸ್ಥಾಪಿಸಿಕೊಂಡರೆ ವಿಶ್ವಮಟ್ಟದಲ್ಲಿ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿ ಮಾನ್ಯತೆ ಪಡೆಯಬಹುದು ಎಂದರು.

ಇದನ್ನು ಓದಿದ್ದೀರಾ? ಧಾರವಾಡ | ಏ. 30 ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ

Advertisements

ಸಮಾರಂಭದ ಸಾನಿಧ್ಯವನ್ನು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ವಹಿಸಿದ್ದರು. ವೀರಣ್ಣಾ ಕಲ್ಲೂರ, ತಾರಾದೇವಿ ವಾಲಿ, ಬಸವ ಸಮಿತಿ ಅಧ್ಯಕ್ಷೆ ಸರೋಜಾ ಹೂಗಾರ, ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಬಸದ, ಎಂ ಎಸ್ ಶಿರಗಣ್ಣವರ, ನವೀನ ಕುದರಿ, ಚನ್ನಬಸು ಧಾರವಾಡಶೆಟ್ಟರ, ಅಂದಪ್ಪ ಹರ್ದಾರಿ, ಪುರಣ್ಣಾ ನೀರಲಗ, ನೀಲಕಂಠ ತಡಸದಮಠ, ಶಕುಂತಲಾ ಮುಗಳಿ, ಮಂಜುಳಾ ಮೇಟಿ, ಅಕ್ಕನ ಬಳಗದ ಗೀತಾ ಮುಳ್ಳಳ್ಳಿ, ಪ್ರಮೀಳಾದೇವಿ ಪಾಟೀಲ್, ವೀರೇಶ್ ಸಂಗಳದ, ಅನಿಲ್ ಕವಿಶೆಟ್ಟಿ, ಸುರೇಶ ಹೊರಕೇರಿ, ಜಯಲಕ್ಷ್ಮಿ ಉಮಚಗಿ, ರತ್ನಾ ಗಂಗಣ್ಣವರ, ರಾಜು ಕೋರ್ಯಾನಮಠ, ನಿರ್ಮಲಾ ಹಿರೇಮಠ, ನಿರ್ಮಲ ಅಂಗಡಿ, ಶಶಿಕಲಾ ಶಾಸ್ತ್ರಿಮಠ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X