ಹುಬ್ಬಳ್ಳಿ | ಜನಸಾಮಾನ್ಯರಿಂದ ವೃತ್ತಿ ರಂಗಭೂಮಿ ದೂರವಾಗುತ್ತಿದೆ: ಸುಭಾಷ್ ನರೇಂದ್ರ

Date:

Advertisements

ಸಿನೆಮಾ, ದೂರದರ್ಶನ, ಮೊಬೈಲ್‌ಗಳ ಹಾವಳಿಯಿಂದ ಮತ್ತು ಆಧುನಿಕತೆಗೆ ಮಾರುಹೋಗಿ ರಂಗ ಭೂಮಿಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಪ್ರದರ್ಶನ ನೀಡಲು ನಟರು ತೊಡಗಿದ್ದರಿಂದ ವೃತ್ತಿ ರಂಗಭೂಮಿ ಜನಸಾಮಾನ್ಯರಿಂದ ದೂರಾಗುತ್ತಿದೆ ಎಂದು ಮಾಜಿ ರಂಗಾಯಣದ ನಿರ್ದೇಶಕ ಸುಭಾಷ್ ನರೇಂದ್ರ ಹೇಳಿದರು.

ಹುಬ್ಬಳ್ಳಿ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ರಂಗ ಕಲಾವಿದೆ ವೀಣಾ ಅಠವಲೆ ದತ್ತಿ ಕಾರ್ಯಕ್ರಮದಲ್ಲಿ ರಂಗಭೂಮಿಯ ಏಳು-ಬೀಳು ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವೀಣಾ ಅಠವಲೆಯವರು ಕಲಾವಿದೆಯಾಗಿ, ಬಡ ಮಕ್ಕಳ ತಾಯಿಯಾಗಿ ಮಾಡಿದ ಸೇವೆ ಅಪಾರ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪದ್ಮಿನಿ ಓಕ್, ರಂಗ ಕಲಾವಿದ ಗೋಪಾಲ ಉಣಕಲ್, ನೃತ್ಯ ವಿಧುಷಿ ಹೇಮಾ ವಾಘ್ಮೋಡೆ ಅವರನ್ನು ಸನ್ಮಾನಿಸಿದರು.

Advertisements

ದನ್ನೂ ಓದಿ: ಹುಬ್ಬಳ್ಳಿ | ಪ್ರಲ್ಹಾದ್ ಜೋಶಿ ಎಲ್ಲಿದ್ದಾರೆಂದು ಪತ್ತೆ ಹಚ್ಚಬೇಕಿದೆ: ವಿಜಯಕುಮಾರ ಗುಂಜಾಳ ಟೀಕೆ

ಕಾರ್ಯಕ್ರಮದಲ್ಲಿ ರಂಗ ಕಲಾವಿದ ಬಸವರಾಜ ಚಕ್ರಸಾಲಿ, ಡಾ. ಲಿಂಗರಾಜ ಅಂಗಡಿ, ಲಕ್ಷ್ಮಣ್ ರಾವ್ ಓಕ್, ಪ್ರೊ ಕೆ ಎಸ್ ಕೌಜಲಗಿ, ಪದ್ಮಿನಿ ಓಕ್, ಜೋಶನಾ ಕಡಕೋಳ, ಸುನಿಲ್ ಪತ್ರಿ, ವಿ ಎನ್ ಕೀರ್ತಿವತಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಸಿದ್ದಮ್ಮ ಅಡವೆನ್ನವರ, ಎಸ್ ಕೆ ಆದಪ್ಪನವರ, ಸಂಧ್ಯಾ ದಿಕ್ಷೀತ, ಅನಸೂಯಾ ಪಾಟೀಲ, ರೇಖಾ ಹೆಗಡೆ, ರೇಣುಕಾ ದೆಸಾಯಿ, ರೂಪಾ ಜೋಶಿ, ಈರಣ್ಣ ಕಾಡಪ್ಪನವರ, ಬ್ಯಾಸಿಲ್ ಡಿಸೋಜಾ, ಭಾರತಿ ವಾಲಿ, ನೀಲಾ ಕುಬಸದ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X