ಕಲಬುರಗಿ | ಕೇಂದ್ರೀಯ ವಿವಿ ವಿದ್ಯಾರ್ಥಿ ಆತ್ಮಹತ್ಯೆ ಕೇಸ್; ಪ್ರಾಧ್ಯಾಪಕರ ತನಿಖೆಗೆ ನಂದಕುಮಾರ್‌ ಆಗ್ರಹ

Date:

Advertisements

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಒಡಿಸ್ಸಾ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಾಧ್ಯಾಪಕರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಮುಖಂಡ ಡಾ. ನಂದಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ದಲಿತ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದಕ್ಕೆ ಅನೇಕ ಜೀವಂತ ಸಾಕ್ಷ್ಯಗಳೂ ಇವೆ. ನಿನ್ನೆ ಜಯಶ್ರೀ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಸಂಗತಿ ವಿಶ್ವವಿದ್ಯಾಲಯದ ಸ್ಥಿತಿ-ಗತಿಯ ಬಗ್ಗೆ ಮತ್ತಷ್ಟೂ ಆತಂಕ ಹುಟ್ಟಿಸುತ್ತಿದೆ. ಇದೆಲ್ಲದರ ಕುರಿತು ವಿಚಾರ ಮಾಡಬೇಕಾದ ಸಂದರ್ಭ ಇದಾಗಿದೆ”

“ಈ ಹಿಂದೆ ಇದೆ ವಿಶ್ವವಿದ್ಯಾಲಯದ ಆರ್ ಎಸ್ ಎಸ್ ಹಿನ್ನಲೆಯ ಪ್ರಾಧ್ಯಾಪಕ ಮಲ್ಲಿಕಾರ್ಜುನ ಹೂಗಾರ ಅವರು ವಿಶ್ವವಿದ್ಯಾಲಯದ ಒಳಗಡೆ ನಂದಿನಿ ಹಾಲಿನ ಉತ್ಪನ್ನಗಳ ಅಂಗಡಿ ನಡೆಸುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಈ ಬಗ್ಗೆ ವಿದ್ಯಾರ್ಥಿನಿಯರು ಕುಲಪತಿಗಳಿಗೆ ಮತ್ತು ಕುಲಸಚಿವರಿಗೆ ಹಾಗೂ ವಿದ್ಯಾರ್ಥಿಗಳ ಡೀನ್ ಡಾ. ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನೂ ನೀಡಿದ್ದರು. ಆದರೆ, ಈ ಎಲ್ಲ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಆರೋಪಿತನ ಅಣ್ಣನಾದ ಡಾ. ಮಲ್ಲಿಕಾರ್ಜುನ ಹೂಗಾರ ಒಳಗೊಂಡು ಆ ವಿದ್ಯಾರ್ಥಿಗಳನಿಯರನ್ನು ಆಫೀಸ್ ಚೇಂಬರ್ ಗೆ ಕರೆಸಿ ಸಂಧಾನ ಮಾಡಿಸಿದ್ದರು.
ಸಂಧಾನಗಳ ಕಾರಣದಿಂದ ಮತ್ತೊಮ್ಮೆ ವಿಶ್ವವಿದ್ಯಾಲಯದ ಕ್ಯಾಂಟೀನ್ ಗುತ್ತಿಗೆ ಪಡೆದ ತೆಲಂಗಾಣ ಮೂಲದ ಬಿಜೆಪಿ ನಾಯಕ ದಲಿತ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿರುವ ಕುರಿತು ಸ್ವತಃ ವಿದ್ಯಾರ್ಥಿನಿ ಮೇಲ್ ಮುಖಾಂತರ ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನು ನೀಡಿದ್ದಳು”

Advertisements

ಈ ಪ್ರಕರಣದಲ್ಲಿಯೂ ಹಿಂದೆ ನಡೆಸಿದ ಸಂಧಾನದ ರೀತಿಯಲ್ಲಿ ಸಂಧಾನ ನಡೆಸಿ ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿತು. ಹೀಗಾಗಿಯೇ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ, ಮುಖ್ಯವಾಗಿ ವಿದ್ಯಾರ್ಥಿಗಳ ಡೀನ್ ಅವರು ದಲಿತ ವಿದ್ಯಾರ್ಥಿಳಿಗೆ ಆದಂತಹ ಅನ್ಯಾಯವನ್ನು ನಿರ್ಲಕ್ಷಿಸಿ ಆರೋಪಿಗಳ ಪರ ವಕಾಲತ್ತು ವಹಿಸಿರುವ ಸಂಗತಿ ನಮ್ಮ ಮುಂದಿರುವ ವಾಸ್ತವಾಗಿದೆ. ಹಾಗಾಗಿ ಈಗ ಆತ್ಮಹತ್ಯೆಗೆ ಶರಣಾಗಿರುವ ದಲಿತ ವಿದ್ಯಾರ್ಥಿನಿ ಕೂಡ ಇದೆ ಬಸವರಾಜ ಕುಬಕಡ್ಡಿ ಜೊತೆ ಮಾತನಾಡಿದ ತರುವಾಯ ನೇಣಿಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ವಿದ್ಯಾರ್ಥಿನಿಯು ಅವರನ್ನು ಯಾವ ಸ್ಥಿತಿಯಲ್ಲಿ ಭೇಟಿ ಮಾಡಿದ್ದಾಳೆ? ಯಾವ ಸಂಗತಿಗಳನ್ನು ಅವರೊಟ್ಟಿಗೆ ಚರ್ಚೆ ಮಾಡಿದ್ದಾಳೆ? ಆ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸುವಷ್ಟು ಸಾಮಾನ್ಯ ತಿಳಿವಳಿಕೆ ಆ ಪ್ರಾಧ್ಯಾಪಕರಿಗೆ ಇರಲಿಲ್ವೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ | ರಸ್ತೆ ಗುಂಡಿ ಮುಚ್ಚಲು ಜಯ ಕರ್ನಾಟಕ ಸಂಘಟನೆ ಆಗ್ರಹ

“ವಿದ್ಯಾರ್ಥಿನಿಯೊಟ್ಟಿಗೆ ಮಾತನಾಡಿದ ತರುವಾಯದಲ್ಲಿ ವಸತಿ ಪಾಲಕರಿಗೆ ಅಥವಾ ವಿಭಾಗದ ಮುಖ್ಯಸ್ಥರಿಗೆ ಇಲ್ಲ ಅವರ ಸಹಪಾಠಿಗಳಿಗೆ ಅವರುಗಳಿಗೆ ಅವಳಿರುವ ಸ್ಥಿತಿ ತಿಳಿಸಿ ಜಾಗ್ರತೆ ವಹಿಸಬಹುದಿತ್ತು. ಆದರೆ ಇದ್ಯಾವುದನ್ನು ಬಸವರಾಜ ಕುಬಕಡ್ಡಿ ಮಾಡಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಕೊಠಡಿಯ ಒಳಗಡೆ ಏನೆಲ್ಲಾ ಆಗಿದೆ ಎಂಬ ಸಂಗತಿಯನ್ನು ಹೊರಗಡೆ ಕಿಟಕಿಯಿಂದ ನೋಡಬಹುದು. ಆದ್ರೆ ಅಷ್ಟು ಆತುರವಾಗಿ ಕೊಠಡಿಯ ಬಾಗಿಲನ್ನು ಮುರಿದು ಪೊಲೀಸರು ಬರುವ ಮುಂಚಿತವಾಗಿ ಕೋಣೆ ಪ್ರವೇಶ ಮಾಡಿದ್ದು ಯಾಕೆ? ಅದು ಕೂಡ ಕುಲಪತಿಗಳ ಅನುಪಸ್ಥಿತಿಯಲ್ಲಿ. ಹೀಗಾಗಿಯೇ ಈ ಆತ್ಮಹತ್ಯೆಯ ಕುರಿತಾಗಿ ವಿದ್ಯಾರ್ಥಿಗಳ ಡೀನ್ ಬಸವರಾಜ ಕುಬಕಡ್ಡಿ ಅವರ ಮೇಲೆ ಅನೇಕ ಅನುಮಾನ ಬರುತ್ತಿವೆ. ಹೀಗಾಗಿ ಪ್ರಾಧ್ಯಾಪಕರ ಮೇಲೆ ಕೂಡ ತನಿಖೆಯಾಗಬೇಕು. ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಈ ದಲಿತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು” ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X