ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಕಲಬುರಗಿ ದಲಿತ ಸಂಘರ್ಷ ಸಮಿತಿ ಸಂಯೋಜಿತದಲ್ಲಿ ಬಿಸಿಯೂಟ ನೌಕರರ ವತಿಯಿಂದ ಉಪ ನಿರ್ದೇಶಕರು ಆಡಳಿತ ಶಾಲಾ ಶಿಕ್ಷಣ ಇಲಾಖೆ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷೆ ಮುಕ್ತಾ ಸಿ ಚಂದಾ ಮಾತನಾಡಿ, “ಹಲವಾರು ವರ್ಷಗಳಿಂದ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕೆಡಿಮೆ ಸಂಬಳದಲ್ಲಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶಾಲೆಗಳಲ್ಲಿ ಮುಖ್ಯಗುರುಗಳ ಹಾಗೂ ಎಸ್ಡಿಎಂಸಿ ಅಧ್ಯಕ್ಷರ ಕಿರುಕುಳ್ಳ ನಿರಂತರವಾಗಿ ಬಿಸಿಯೂಟದ ಸಿಬ್ಬಂದಿಗಳ ಮೇಲೆ ನಡೆಯುತ್ತಿದೆ” ಎಂದು ಆರೋಪಿಸಿದರು.
“ಈ ಹಿಂದೆ ಕಲಬುರಗಿ ಜಗತ್ ವೃತ್ತದಿಂದ ಡಿಡಿಪಿಐ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ್ದೇವೆ. ತಾವುಗಳು ಜಿಲ್ಲೆಯ ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಆದೇಶ ನೀಡಿದರೂ ಕೂಡಾ ಬಿಸಿಯೂಟ ನೌಕರರಿಗೆ ತೊಂದರೆಗಳು ಕಡಿಮೆ ಆಗಿಲ್ಲವೆಂದು” ತಮ್ಮ ಅಳಲನ್ನು ತೊಡಗಿಕೊಂಡರು. ಆದ್ದರಿಂದ, ಸಮಸ್ಯೆ ಬಗ್ಗೆಹರಿಸಿ ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾದಾಗ ಅವರನ್ನು ಕೆಲಸದಿಂದ ತೆಗೆದು ಹಾಕದೆ ಸಮೀಪವಿರುವ ಶಾಲೆಗಳಿಗೆ ಅಥವಾ ಬೇರೆ ಶಾಲೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಆಹಾರ ಸಾಮಾಗ್ರಿಗಳನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಶಾಲಾ ಮುಖ್ಯಗುರುಗಳಿಂದ ಖರೀದಿಸುವುದು ಹಿಂಪಡೆಯಬೇಕು., ಆಹಾರ ಸಾಮಾಗ್ರಿಗಳನ್ನು ಖರೀದಿ ಮಾಡುವುದನ್ನು ಮುಖ್ಯ ಅಡುಗೆ ನೌಕರರಿಗೆ ಜವಾಬ್ದಾರಿಯನ್ನು ನೀಡಬೇಕು. ದಿನನಿತ್ಯ ನಡೆಯುತ್ತಿರುವ ಶಾಲಾ ಮುಖ್ಯಗುರುಗಳ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಮಾನಸಿಕ ಕಿರುಕುಳ ತಡೆಗಟ್ಟಬೇಕು ಎಂಬಿತ್ಯಾದಿ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಯೂಟ್ಯೂಬರ್ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಬಂಧನ
ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ಜಯಕುಮಾರ ನೂಲಕರ್, ಸಂತೋಷ ತೆಗನೂರ್, ರೇಷ್ಮಾ, ಉದಯಕುಮಾರ ಸಾಗರ್, ಮುಕ್ತಾ ಸಿ ಚಂದಾ, ಮಹಾದೇವಿ ನಿಂಬಾಳ, ಸುವರ್ಣಾ ಶಾಂಪೂರಹಳ್ಳಿ, ಬಸಮ್ಮ ಮರ್ಗಮಗುಡಿ, ವೈಶಾಲಿ ಕೊಂಕನಳ್ಳಿ, ಸುನೀತಾ ಎಂ ಕುಂಬಾರ್ ಇನ್ನಿತರರು ಇದ್ದರು.