ಕಲಬುರಗಿ | ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ʼಹಂಗಿನ ಕಿರೀಟಕ್ಕೆ ಜೋತುಬಿದ್ದ ನಾಲಿಗೆʼ ಕವನ ಸಂಕಲನ ಆಯ್ಕೆ

Date:

Advertisements

ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಕವಿ ಡಾ. ಪಿ ನಂದಕುಮಾರ್ ಅವರ “ಹಂಗಿನ ಕಿರೀಟಕ್ಕೆ ಜೋತುಬಿದ್ದ ನಾಲಿಗೆ” ಎಂಬ ಕವನ ಸಂಕಲನ ಆಯ್ಕೆಯಾಗಿದೆ ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಪಿ ಎಂ ನರಸಿಂಹಮೂರ್ತಿ ತಿಳಿಸಿದ್ದಾರೆ.

ಚಾಮರಾಜನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯು ಖ್ಯಾತ ಸಾಹಿತಿ-ಕವಿ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಪ್ರಸ್ತುತ ಹದಿನಾಲ್ಕನೇ ವರ್ಷದ ಕಾವ್ಯ ಪ್ರಶಸ್ತಿಗೆ ಡಾ. ಪಿ ನಂದಕುಮಾರ ಅವರ ಕವನ ಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ಹತ್ತು ಸಾವಿರ ನಗದು. ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.

ಪುಸ್ತಕದ ಕುರಿತು ವಿಮರ್ಶಕ ವಿಕ್ರಮ ವಿಸಾಜಿಯವರು, “ಹೊಸ ತಲೆಮಾರಿನ ನುಡಿಗಟ್ಟಿನ ಪ್ರತಿಬಿಂಬಗಳು, ಅಂದರೆ ರೂಪಕಾತ್ಮಕತೆ, ಪ್ರಭುತ್ವದ ಕುಟಿಲತೆಯ ಅನಾವರಣ, ಸಮುದಾಯಗಳ ಅವಮಾನದ ಅಭಿವ್ಯಕ್ತಿ ಮತ್ತು ಪ್ರೇಮದ ಉನ್ಮಾದ ಎಲ್ಲವೂ ಒಟ್ಟಿಗೆ ಒಂದೇ ತೊರೆಯಲ್ಲಿ ಹರಿಯುತ್ತಿರುವ ವಿಭಿನ್ನ ಅಲೆಗಳು” ಎಂದು ಅಭಿಪ್ರಾಯಪಟ್ಟರು.

Advertisements

ಈ ಸುದ್ದಿ ಓದಿದ್ದೀರಾ? ಉಡುಪಿ | ಮುಸ್ಲಿಮ್ ಒಕ್ಕೂಟದ 25ನೇ ವರ್ಷದ ವಾರ್ತಾ ಸಂಚಯ ಬಿಡುಗಡೆ

“ಅಲೆಗಳು ಬೇರೆಬೇರೆಯಾದರೂ ಒಂದನ್ನೊಂದು ಪ್ರಭಾವಿಸಿವೆ. ಹಾಗೆ ಪ್ರಭಾವಿಸದೇ ಇರಲು ಸಾಧ್ಯವೇ ಇಲ್ಲದಂಥ ವ್ಯಕ್ತಿ ಮತ್ತು ಪರಿಸರ ಪರಸ್ಪರ ಎದುರುಬದುರಾಗಿದ್ದಾರೆ. ಕವಿತೆಯಲ್ಲಿ ಹಲವು ಸಂವೇದನೆಗಳು ಕಲೆತು ಹೋದಾಗ ಏನಾಗುತ್ತದೆ? ಅವು ಪ್ರೇಮವನ್ನು ಹೇಳುತ್ತಲೇ ತನ್ನ ಸಮುದಾಯದ ಆತಂಕಗಳನ್ನೂ ಹೇಳುತ್ತವೆ. ಫ್ರಭುತ್ವದ ಬಲತ್ಕಾರವನ್ನು ತೋರಿಸುತ್ತಲೇ ತನ್ನು ಅಸ್ತಿತ್ವದ ದುಗುಡಗಳನ್ನೂ ಕಾಣಿಸುತ್ತವೆ” ಎಂದು ವಿಮರ್ಶಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X