ಕಲಬುರಗಿ | ರಾಧಾಕೃಷ್ಣ ದೊಡ್ಮನಿ ಅಭಿನಂದನಾ ಸಮಾರಂಭ: ಮೆರವಣಿಗೆಗೆ ರಂಗು ತಂದ ಬುಡಗ ಜಂಗಮರು

Date:

Advertisements

ಬಡವರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಕೊಂಚ ಹಣ ಗಳಿಸಿ ಹೊಟ್ಟೆ ಪಾಡು ನಡೆಸುವ ಕಾಲದಲ್ಲಿ ಅಭಿಮಾನಿ ಒಬ್ಬರು ತಮ್ಮ ಸ್ವಂತ ಹಣದಲ್ಲಿ ಕಲಾವಿದರನ್ನು ಕರೆಸಿ ಮೆರವಣಿಗೆಗೆ ರಂಗು ತಂದು, ಅಪಾರ ಅಭಿಮಾನ ಮೆರೆದಿದ್ದಾರೆ.

ಚಿತ್ತಾಪುರ ಪಟ್ಟಣದಲ್ಲಿ ಕಳೆದ 25ನೇ ತಾರೀಕಿನಂದು ಸಂಸದ ರಾಧಾಕೃಷ್ಣ ದೊಡ್ಮನಿ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಿಯಾಂಕ್ ಖರ್ಗೆ ಮತ್ತು ರಾಧಾಕೃಷ್ಣ ದೊಡ್ಮನಿ ಅವರ ಅಪ್ಪಟ ಅಭಿಮಾನಿ ಬುಡಗ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಪಂಡಿತ್ ಶಿರವಾಟಿ ಅವರು, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕಿನಲ್ಲಿರುವ ಅಲೆಮಾರಿ ಜನಾಂಗದವರಾದ ಬುಡಗ ಜಂಗಮರು, ಸುಡುಗಾಡು ಸಿದ್ದರನ್ನು ಅಭಿಮಾನಕ್ಕಾಗಿ ತಮ್ಮ ಸ್ವಂತ ಹಣದಲ್ಲಿ ಕರೆಯಿಸಿ ವಿವಿಧ ವೇಷ ಭೂಷಣಗಳನ್ನು ಧರಿಸಿ ಕುಣಿದು ಅದ್ದೂರಿ ಮೆರವಣಿಗೆಯಲ್ಲಿ ರಂಗು ತಂದಿದ್ದಾರೆ.

ಕಲಬುರ್ಗಿ, ರಾಯಚೂರು, ಯಾದಗಿರಿ, ಸೇಡಂ, ಶಹಾಬಾದ ಚಿತ್ತಾಪುರ ಸೇರಿದಂತೆ ವಿವಿಧ ಕಡೆಗಳಿಂದ ಬಂದ ಸುಮಾರು 50ಕ್ಕೂ ಹೆಚ್ಚು ಕಲಾವಿಧರು ಮೆರವಣಿಗೆಯಲ್ಲಿ ರಾಮಾಯಣದ ರಾಮ, ಸೀತೆ, ಲಕ್ಷಣ, ಆಂಜನೇಯ, ರಾವಣ, ಕುಂಭಕರ್ಣ, ಶೂರ್ಪನಖಿ ಅವರ ಛದ್ಮವೇಷ ಧರಿಸಿದ ಬುಡ್ಗ ಜಂಗಮ ಕಲಾವಿದರು ಮೆರವಣಿಗೆ ಸಾಗುತ್ತಿದ್ದ ರಸ್ತೆಯಲ್ಲಿ ಅಲ್ಲಲ್ಲಿ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಆಕರ್ಷಕವಾಗಿ ಅಭಿನಯಿಸಿ ನೆರೆದ ಜನರನ್ನು ಮನರಂಜಿಸಿದರು.

Advertisements
WhatsApp Image 2024 10 30 at 5.25.12 PM

ಕಲಾವಿದರಾದ ಭೀಮಾಶಂಕರ ಕಟ್ಟಿಮನಿ ಯಡ್ರಾಮಿ, ಸಿದ್ರಾಮ ಶಿರವಾಟಿ, ಚೆನ್ನು ಪ್ಯಾರಲ್, ಸಾಯಪ್ಪ ಬೈಲಪಾಟಿ ಸೇಡಂ, ಲಕ್ಷ್ಮಣ ಸಿರಿಗಿರಿ ಸೇಡಂ, ನಿಂಗಣ್ಣ ಪಾಮತೀರ್ಥ, ರಮೇಶ ಕವಿತಾಳ, ಬುರ್ರಾಕತೆ ಕಲಾವಿದರಾದ ಶಾಂತಮ್ಮ ಪಾಮತೀರ್ಥ, ಬಸಮ್ಮ ರಾಮತೀರ್ಥ, ಅಂಜಮ್ಮ ಚಿತ್ತಾಪುರ, ಶರಣಮ್ಮ ಚಿತ್ತಾಪುರ, ಯಲ್ಲಮ್ಮ ಕಲಬುರಗಿ,ಶಿವಮ್ಮ ಕಲಬುರಗಿ, ನಿರ್ಮಲಾ. ಶಿರವಾಟಿ, ಮೋನಮ್ಮ ಶಿರವಾಟಿ, ಭೀಮಬಾಯಿ ಚಿತ್ತಾಪುರ, ಮಲ್ಲಮ್ಮ ಚಿತ್ತಾಪುರ, ಶಿವು ಶಹಾಬಾದ್, ಮಾರುತಿ ಶಹಾಬಾದ್‌, ಉದಯಕುಮಾರ ಮಾರುತಿ, ಪ್ರಶಾಂತ ಶಿರವಾಟಿ ಸೇರಿದಂತೆ ಅನೇಕ ಕಲಾವಿದರು ಮೆರವಣಿಗೆಯಲ್ಲಿ ಕಲೆ ಪ್ರದರ್ಶನ ಮಾಡಿದರು.
200ರಕ್ಕೂ ಹೆಚ್ಚು ಜನರು ಭಾಗಿಯಾಗಿ ಮೆರಗು ತಂದರು.

ಇವರ ಅಭಿಮಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ರಾಧಾಕೃಷ್ಣ ದೊಡ್ಮನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ: ಅನಂತ್ ದೇಶಪಾಂಡೆ, ವಾಲೆಂಟಿಯರ್

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X