ಮಂಡ್ಯ | ನ.17ರಂದು ಕನ್ನಡಹಬ್ಬ; ಕವಿಗೋಷ್ಠಿ ಕಾರ್ಯಕ್ರಮ

Date:

Advertisements

ಮಂಡ್ಯ ನಗರದ ಗಾಂಧಿ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ವತಿಯಿಂದ ನವೆಂಬರ್ 17ರ ಭಾನುವಾರ ಬೆಳಿಗ್ಗೆ 10-30ಕ್ಕೆ ಕನ್ನಡಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಡಾ.ಜೀಶಂಪ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದು, “ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಈ ಸಿ ನಿಂಗರಾಜೇಗೌಡ ಕನ್ನಡಹಬ್ಬ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಹೆಚ್ ಎಸ್ ಮುದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಬಿ ಪಿ ಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಕರ್ನಾಟಕ ರಾಜ್ಯ ಸಾಫ್ಟ್‌ಬಾಲ್‌ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಗಂಗಾಧರ ರಾಜು ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡುವರು” ಎಂದರು.

“ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್ ಕೃಷ್ಣಸ್ವರ್ಣಸಂದ್ರ ಪ್ರದಾನ ಮಾಡುವರು. ಡಾ. ಜೀಶಂಪ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾದ ಮಾಡ್ಲ ಅರಸಯ್ಯ ಕವಿಗಳಿಗೆ ನೆನಪಿನ ಕಾಣಿಕೆ ನೀಡುವರು. ಬೆಂಗಳೂರಿನ ಸಮಾಜಸೇವಕಿ ಡಾ.ಹೇಮಾ ರೆಡ್ಡಿ ಪ್ರಮಾಣ ಪತ್ರ ವಿತರಣೆ ಮಾಡುವರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ಅಧ್ಯಕ್ಷ ಮಂಗಲ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡುವರು” ಎಂದು ತಿಳಿಸಿದರು.

Advertisements

ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತರು: ಡಾ.ಹೇಮಾ ರೆಡ್ಡಿ(ಸಮಾಜಸೇವೆ), ಡಿ ಜಯರಾಮು(ಸಮಾಜಸೇವೆ), ಡಾ ಗಂಗಾಧರರಾಜು(ಕ್ರೀಡೆ), ಸುರೇಶ್ ಕಂಠಿ(ಜನಪರ), ಬನ್ನಂಗಾಡಿ ಸಿದ್ದಲಿಂಗಯ್ಯ(ಸಂಘಟನೆ), ಹೆಚ್ ಎಂ ಸಿದ್ದೇಗೌಡ(ಉದ್ಯಮಿ), ಹೆಚ್ ಎಂ ವೆಂಕಟೇಶ್(ಸಮಾಜಸೇವೆ), ಡಾ ಹೊನ್ನೇಗೌಡ(ಸಾಹಿತ್ಯ), ಕೀಲಾರ ಕೃಷ್ಣ(ಸಹಕಾರ), ಬಿ ಜಿ ಶಿವರಾಮ್(ಸಮಾಜಸೇವೆ).

ಕನ್ನಡಹಬ್ಬ ಪುರಸ್ಕೃತರು: ಕಿಕ್ಕೇರಿ ನಾಗರಾಜು(ಶಿಕ್ಷಣ), ಹೆಚ್ ಆರ್ ಧನಂಜಯ(ಶಿಕ್ಷಣ), ಕೆ ವಿಜಯಕುಮಾರ್(ಮುದ್ರಣ), ಡಾ.ಸಿ ವಾರಯ್ಯ(ಶಿಕ್ಷಣ, ಸಾಹಿತ್ಯ), ಮಂಡ್ಯ ಯಶು(ಭರತನಾಟ್ಯ), ಮಂಜುಳಾ ಆಲದಹಳ್ಳಿ(ಗಾಯಕಿ-ಜನಪದ ಕಲಾವಿದೆ), ಎ ವಿ ಕುಮಾರ್(ಜನಪದ ಕಲೆ), ವಿಶ್ವನಾಥ್‌ಗೌಡ(ಸಾಹಿತ್ಯ), ಎನ್ ಶ್ರೀಕಂಠೇಶ್ವರ ಶರ್ಮ(ಸಂಕೀರ್ಣ), ಆರ್ ಮಂಗಳ(ಸಂಘಟನೆ, ಸಮಾಜಸೇವೆ), ಡಾ. ಶಿವರುದ್ರಪ್ಪ(ಶಿಕ್ಷಣ), ಜನಾರ್ಧನ ಹೂತಗೆರೆ(ಹೋರಾಟ), ಪ್ರಮಿಳಾ ಕುಮಾರಿ(ಹವ್ಯಾಸಿ ರಂಗಭೂಮಿ), ಶಿವಮಾದೇಗೌಡ(ಶಿಕ್ಷಣ), ಎಂ ಎಂ ಶಿವನಂಜಯ್ಯ(ರಂಗಕರ್ಮಿ).

ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಬ್ರಾಹ್ಮಣನ ದಾಂಧಲೆ

ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕೃತರು: ಸೀತಾಲಕ್ಷ್ಮಿವರ್ಮ(ಮಂಗಳೂರು), ಬಿ ಎನ್ ರವಿ(ಬೆಂಗಳೂರು), ಮುತ್ತುರಾಜು ಚಿನ್ನಹಳ್ಳಿ(ತುಮಕೂರು), ಹರವು ಶ್ರೀನಿವಾಸ್(ರಂಗಭೂಮಿ), ಸುವರ್ಣ ಮಾಳಗಿಮನಿ(ಬಂಕಾಪುರ), ಶ್ವೇತ ಡಿ ಪ್ರಕಾಶ್(ಪಾಂಡವಪುರ), ವಸಂತಕುಮಾರಿ(ಬೆಂಗಳೂರು), ಬಸಪ್ಪ(ಬೆಂಗಳೂರು), ಚಂದ್ರು(ಬೆಸಗರಹಳ್ಳಿ), ಮಂಜುನಾಥ್ ಹಿರೀಬಿಳತಿ(ಹಾಸನ).

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 66 ಮಂದಿ ಕವನ ವಾಚಿಸುವರು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X