ಕೊಪ್ಪಳ | ಪ್ಯಾಕೇಜ್ ಟೆಂಡರ್ ರದ್ದಾಗುವವರೆಗೂ ಅರೆಬೆತ್ತಲೆ ಧರಣಿ; ಪಟ್ಟುಹಿಡಿದ ಸಿವಿಲ್ ಗುತ್ತಿಗೆದಾರರ ಸಂಘ

Date:

Advertisements

ಪ್ಯಾಕೇಜ್ ಟೆಂಡರ್ ರದ್ದಾಗುವವರೆಗೂ ಅರೆಬೆತ್ತಲೆ ಧರಣಿ ನಡೆಸುತ್ತೇವೆಂದು ಕೊಪ್ಪಳ ಜಿಲ್ಲಾ ಪ.ಜಾತಿ/ಪ.ಪಂಗಡ ಸಿವಿಲ್ ಗುತ್ತಿಗೆದಾರರ ಸಂಘದ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.

ಕೊಪ್ಪಳ ಲೋಕೋಪಯೋಗಿ ಇಲಾಖೆಯ ಪ್ಯಾಕೇಜ್ ಟೆಂಡರ್ ವಿರೋಧಿಸಿ ಕಳೆದ ಒಂದು‌ ವಾರದಿಂದಲೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಧರಣಿ ನಿರತರ ಅಹವಾಲಿಗೆ ಸ್ಪಂದನೆ ನೀಡದೆ, ಅವರ ಬೇಡಿಕೆಗೆ‌ ಅಧಿಕಾರಗಳ ಮನ ಕರಗದಿರುವದನ್ನು ಕಂಡ ಹೋರಾಟಗಾರರು ನಿನ್ನೆಯಿಂದ ಸತ್ಯಾಗ್ರಹದ ಪ್ರತಿರೋಧದ ಧರಣಿ ಸ್ವರೂಪ ಬದಲಾಗಿ ಅರೆಬೆತ್ತೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಸಿದ್ದು ಮಣ್ಣಿನವರು ಮಾತನಾಡಿ, “ನಮ್ಮ ಬೇಡಿಕೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ನಾವು ನಮ್ಮ ಮನೆಯ ಕುಟುಂಬ ಸಮೇತರಾಗಿ ಉಪವಾಸ ಸತ್ಯಾಗ್ರಹ ಕೂರುತ್ತೇವೆ. ಅದಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದರೇ ನಾವು ಲೋಕೋಪಯೋಗಿ ಕಚೇರಿ ಎದುರು ಕುಟುಂಬ ಸಹಿತ ವಿಷ ಸೇವಿಸುತ್ತೇವೆ” ಎಂದು ಎಚ್ವರಿಕೆ ನೀಡಿದರು.

Advertisements

ಗುತ್ತಿಗೆದಾರ ಪ್ರಕಾಶ ಹೊಳೆಪ್ಪನವರ ಮಾತನಾಡಿ, “ಟೆಂಡರ್ ಪ್ಯಾಕೇಜ್ ಸುಮಾರು ₹495 ಲಕ್ಷ, ₹305 ಲಕ್ಷ, ₹360 ಲಕ್ಷ, ಮೂರರಿಂದ ಆರು ಕೋಟಿಯವರೆಗೂ ಟೆಂಡರ್ ಹೊರಡಿಸಿದರೆ ಈ ಬಡ, ದಲಿತ ಮತ್ತು ಹಿಂದುಳಿದ ಗುತ್ತಿಗೆದಾರರು ಯಾವ ರೀತಿ ಕಾರ್ಯನಿರ್ವಹಿಸಬೇಕು?. ಇದರ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು‌ಕೇಳಿದರೆ ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಸಾದ್ಯವಿಲ್ಲ, ನೀವು ಏನು ಮಾಡಿಕೊಳ್ಳತ್ತೀರೋ ಮಾಡಿಕೊಳ್ಳಿ ಹೋಗಿ’ ಎಂದು ತಾತ್ಸಾರ ಮಾಡಿದ್ದಲ್ಲದೆ ಉಢಾಪೆಯ ಉತ್ತರ ಕೊಡುತ್ತಾರೆ. ಅಧಿಕಾರಿಗಳು ಸಂವಿಧಾನ ಕಾನೂನು ಚೌಕಟ್ಟಿನಲ್ಲಿ ಅಧಿಕಾರ ನಿರ್ವಹಿಸುವರೋ ಅಥವಾ ರಾಜಾಧಿಕಾರದ ಆಡಳಿತದಲ್ಲಿ ಅಧಿಕಾರ ನಡೆಸುತ್ತಿರುವರೋ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ| ಪ್ರತಿಭಟನಾನಿರತ ರೈತರನ್ನು ರಾತ್ರೋರಾತ್ರಿ ವಶಕ್ಕೆ ಪಡೆದ ಪೊಲೀಸರು

“ಯಾವ ಹೋರಾಟದ ಮುಖಾಂತರ ಎಚ್ಚರಿಸಲು ಹೋದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮ್ಮ ಕರೆಗೆ ಕಿವಿಗೊಡುತ್ತಿಲ್ಲ. ಹೀಗೇ ಮುಂದುವರೆದರೆ ನಮ್ಮ ಹೋರಾಟದ ಹೆಜ್ಜೆ ತೀವ್ರವಾಗುತ್ತದೆ” ಎಂದು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X