ಕೊಪ್ಪಳ | ಒಂದು ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮೀಯರು ಗೌರವಿಸುವುದೇ ಸೌಹಾರ್ದತೆ: ಎಸ್ ಎ ಗಫಾರ್

Date:

Advertisements

ಒಂದು ಧರ್ಮದ ಆಚರಣೆಗಳನ್ನು ಇತರೆ ಧರ್ಮದವರು ಗೌರವಿಸುವುದೇ ಸೌಹಾರ್ದತೆ ಎಂದು ಭ್ರಾತೃತ್ವ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಹೇಳಿದರು.

ಕೊಪ್ಪಳ ಭಾಗ್ಯನಗರ ಬಳಿಯ ನವನಗರದ ಇರುವಾತನು ಚರ್ಚಿನಲ್ಲಿ ಭ್ರಾತೃತ್ವ ಸಮಿತಿ ಹಾಗೂ ಇರುವಾತನು ಚರ್ಚ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕ್ರಿಶ್ಚಿಯನ್ ಸಮುದಾಯದವರು ಯೇಸುಕ್ರಿಸ್ತನು ಶಿಲುಬೆಗೇರಿದ ದಿನವನ್ನು ಶುಭ ಶುಕ್ರವಾರವೆಂದು ಸ್ಮರಿಸುತ್ತಾರೆ. ಒಂದು ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮದವರನ್ನು ಗೌರವಿಸುವಂತೆ ನಮ್ಮ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ, ಇನ್ನೊಂದು ಧರ್ಮವನ್ನು ಕೀಳಾಗಿ ಕಾಣುವುದು, ಟೀಕಿಸುವುದು ಆಗಬಾರದು. ಎಲ್ಲ ಧರ್ಮದವರೂ ಒಂದಾಗಿರಬೇಕಾದರೆ ಒಂದು ಧರ್ಮದವರು ಇನ್ನೊಂದು ಧರ್ಮ ಆಚರಿಸುವಂತೆ ಹೇಳುತ್ತಿಲ್ಲ. ಸಂವಿಧಾನದ ಆಶಯದಂತೆ ಅನ್ಯ ಧರ್ಮಗಳನ್ನೂ ಗೌರವಿಸುತ್ತ ಎಲ್ಲರೂ ಕೂಡಿಕೊಂಡು ಬಾಳಬೇಕು” ಎಂದರು.

Advertisements

ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮಾತನಾಡಿ, “ಕ್ರಿಶ್ಚಿಯನ್ ಧರ್ಮದವರು ಶಾಂತಿ ಪ್ರಿಯರು. ಅವರಿಗೆ ಗುಡ್ ಫ್ರೈಡೆ ಅಂದರೆ ಕಪ್ಪು ಶುಕ್ರವಾರವೆಂದು ಹೇಳಬಹುದು. ಜಗತ್ತಿಗೆ ಒಳ್ಳೆಯದನ್ನು ಸಾರಿರುವ ಯೇಸು ಕ್ರಿಸ್ತನನ್ನು ಇಂದು ನಾವೆಲ್ಲ ನೆನಪಿಸುತ್ತಿದ್ದೇವೆ” ಎಂದು ಹೇಳಿದರು.

ಭ್ರಾತೃತ್ವ ಸಮಿತಿ

ಎಸ್‌ಸಿ/ಎಸ್‌ಟಿ, ಅಲೆಮಾರಿ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ ಮಾತನಾಡಿ, “ಮಾನವನಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ ಹಾಗೆ ನಮ್ಮ ದೇಶದಲ್ಲಿ ಧರ್ಮ ಹಾಗೂ ಸಂವಿಧಾನವೂ ಎರಡೂ ಕಣ್ಣುಗಳಿದ್ದಂತೆ. ಯಾವುದೇ ಒಂದು ಕಣ್ಣಿಗೆ ನೋವಾದರೂ ಕೂಡ ಅಷ್ಟೇ ಸಮಸ್ಯೆಯಾಗುತ್ತದೆ. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರ್ಸಿ ಹಾಗೂ ಸಿಖ್‌ ಸಮುದಾಯದವರು ಸೇರಿದಂತೆ ಅನೇಕ ಧರ್ಮೀಯರಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡುವುದಾದರೆ ಪರ ಧರ್ಮಗಳನ್ನೂ ಗೌರವಿಸುವ ಮೂಲಕ ಐಕ್ಯತೆಯಿಂದ ಬದುಕಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹವಾಮಾನ ವೈಪರೀತ್ಯ | ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಂಗಾಲಾದ ರೈತರು

ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ, ಯೇಸು ಸ್ವಾಮಿ ಈ ಭೂಮಿಗೆ ಮನುಷ್ಯ ಕುಮಾರನಾಗಿ ಜನಿಸಿ ಬಂದು ಮೂವತ್ತ ಮೂರೂವರೆ ವರ್ಷಗಳಲ್ಲಿ 30 ವರ್ಷ ಕುಟುಂಬದ ಜವಾಬ್ದಾರಿ ನಿಭಾಯಿಸಿದರು. ತಂದೆ ತಾಯಿಯೊಂದಿಗೆ ವಿಧೇಯರಾಗಿ ನಡೆದುಕೊಂಡರು, ಮೂರುವರೆ ವರ್ಷಗಳವರೆಗೆ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸಮುದ್ರದ ತೀರಗಳಲ್ಲಿ ಪ್ರಯಾಣ ಮಾಡಿ ದೇವರ ಸುವಾರ್ತೆಗಳನ್ನು ಸಾರಿದರು. ಈ ಭೂಮಿ ಮೇಲಿನ ಎಲ್ಲ ಮನುಷ್ಯರ ಪಾಪ ಪರಿಹಾರಕ್ಕಾಗಿ ಯಜ್ಞ ಬಲಿಯಾಗಬೇಕೆಂಬುದು ದೇವರ ಸಂಕಲ್ಪವಾಗಿತ್ತು. ಹಾಗಾಗಿ ಯೇಸು ಸ್ವಾಮಿ, ʼಈ ಭೂಮಿ ಮೇಲಿರುವ ಎಲ್ಲ ಮನುಷ್ಯರ ಪಾಪವನ್ನು ಮನ್ನಿಸುʼ ಎಂದು ಪ್ರಾರ್ಥಿಸುತ್ತ ಶಿಲುಬೆಗೆ ಏರಿದರು” ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭ್ರಾತೃತ್ವ ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ, ರಘು ಮಾಧಕಟ್ಟಿ, ಮೈಲಪ್ಪ ಮಾದಿನೂರ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X