ಬೀದರ್‌ | ಶರಣರ ವಚನಗಳು ಜನಮಾನಸಕ್ಕೆ ತಲುಪಲಿ : ವೀರಶೆಟ್ಟಿ ಕಾಗಾ

Date:

Advertisements

12ನೇ ಶತಮಾನದಲ್ಲಿ ಬಸವಾದಿ ಶರಣರ ಅನುಭಾವದ ನುಡಿಗಳು ವಚನಗಳಾಗಿ ಮಾರ್ಪಟ್ಟಿವೆ. ಇಂದಿನ ಜನಮಾನಸಕ್ಕೆ ವಚನ ಸಾಹಿತ್ಯ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ಸತ್ಸಂಗ ಧ್ಯಾನ ಮಂದಿರದ ಸಂಚಾಲಕ ವೀರಶೆಟ್ಟಿ ಕಾಗಾ ಹೇಳಿದರು.

ಬೀದರ್‌ ನಗರದ ರಾಂಪೂರೆ ಬ್ಯಾಂಕ್‌ ಕಾಲೋನಿಯಲ್ಲಿ ಪ್ರಾಧ್ಯಾಪಕ ಬಸವರಾಜ ಮೂಲಗೆ ಅವರ ನಿವಾಸದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ʼಮಾಸಿಕ ಶರಣ ಸಂಗಮ ಹಾಗೂ ಸತ್ಸಂಗʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,”ನಾಡು-ನುಡಿ, ಮಾತೃ ಭಾಷೆ, ಸಂಸ್ಕೃತಿ ಪರಂಪರೆ ಉಳಿವಿಗಾಗಿ ನಾವು ಶ್ರಮಿಸಬೇಕು. ಕನ್ನಡ ಭಾಷೆಯ ಮೇಲೆ ಹೆಚ್ಚಿನ ಪ್ರೀತಿ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, “ತಂತ್ರಜ್ಞಾನದ ಜಗತ್ತಿನಲ್ಲಿ ಮನುಷ್ಯನಿಗೆ ನೆಮ್ಮದಿ, ಶಾಂತಿಗಾಗಿ ಪ್ರಾರ್ಥನೆ, ಭಜನೆ, ಧ್ಯಾನ, ಸತ್ಸಂಗದ ಅವಶ್ಯಕತೆವಿದೆ. ಬುದ್ದ ಹಾಗೂ ಬಸವಾದಿ ಶರಣರು ನಿಷ್ಠೆಯ ಬದುಕು ರೂಪಿಸಿಕೊಂಡು ಜಗತ್ತಿಗೆ ಮಹಾಬೆಳಕು ನೀಡಿದ್ದಾರೆ. ಶರಣರ, ಮಾಹಾತ್ಮರ ಜೀವನ ಮೌಲ್ಯಗಳನ್ನು ಜೀವನದಲ್ಲಿಅಳವಡಿಸಿಕೊಂಡಾಗ ಬದುಕು ಭವ್ಯವಾಗುತ್ತದೆ” ಎಂದರು.

Advertisements

ಶಿಕ್ಷಕಿ ಪ್ರತಿಭಾ ಚಾಮಾ ಅವರು ಬುದ್ಧ, ಬಸವಣ್ಣನವರ ಕುರಿತು ಮಾತನಾಡಿ, “ನಾವು ಯಾವುದೇ ಪದವಿ, ಪ್ರಶಸ್ತಿ, ಬಿರುದುಗಳ ಹಿಂದೆ ಬೀಳದೆ ನಿಸ್ವಾರ್ಥ ಸೇವೆಗೈಯುವ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಸುಧಾರಕರು ಜಾತಿ, ಧರ್ಮ, ವರ್ಗ ತಾರತಮ್ಯ ಮಾಡಲಾರದೆ ಸಮಾಜದಲ್ಲಿ ಸಾಮರಸ್ಯ ಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಲು ಮುಂದಾಗಬೇಕು” ಎಂದು ನುಡಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷೆ ಸುನಿತಾ ದಾಡಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, “ಮನ ಮಾಸಿದಡೆ ಶರಣರ ಸಂಗವು ಮಾಡಬೇಕು ಎಂಬ ಶರಣರು ನುಡಿದಂತೆ ಭಕ್ತಿಯಿಂದ ಸತ್ಸಂಗ ಮಾಡಬೇಕು. ಶರಣರ ವಚನಗಳು ಬಂಗಾರದ ಖಣಿ ಇದ್ದಂತೆ, ಅವುಗಳನ್ನು ಆಚರಣೆಗೆ ತಂದಾಗ ಮನ ಶುದ್ಧಿಯಾಗುತ್ತದೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅವರ ಜೀವನ-ಸಾಧನೆ ಕುರಿತು ಸ್ಮರಿಸಿ, ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಜಾಗತಿಕ ಮಟ್ಟದಲ್ಲಿ ಬಸವ ಚಿಂತನೆ ತಲುಪಿಸುವುದು ಇಂದಿನ ತುರ್ತು : ಆರ್.ಕೆ.ಹುಡುಗಿ

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಶೋಕ ಬೂದಿಹಾಳ, ಶೈಲಜಾ ಚಳಕಾಪೂರೆ, ಹೆಮಲತಾ ವೀರಶೆಟ್ಟೆ, ಕಲ್ಯಾಣರಾವ ಚಳಕಾಪೂರೆ, ಬಸವರಾಜ ಮಳಚಾಪೂರೆ, ಧೂಳಪ್ಪಾ, ಬಂಡೆಪ್ಪಾ ಎಕಲಾರೆ, ಶೀತಲ ಅಮೃತ ಚೌವ್ಹಾಣ, ಮಲ್ಲಿಕಾರ್ಜುನ ಮಾಯಕೊಡ, ರಾಜಕುಮಾರ ವರದಾ, ಶಂಕರ, ಸ್ವಪ್ನಾ, ಶಿವಕುಮಾರ ಮಠ, ಸರಸ್ವತಿ ಚನ್ನಬಸಪ್ಪಾ ಧತ್ತರಗಿ, ಬಸವರಾಜ ಸ್ವಾಮಿ, ಅನಂತರೆಡ್ಡಿ, ಸುವರ್ಣಾ ರಾಜಶೇಖರ ಮೀಸೆ, ನಾಗನಾಥ, ಬಸವರಾಜ, ಗುರುನಾಥ, ಗೌರಮ್ಮಾ ಸೇರಿದಂತೆ ಅನೇಕರಿದ್ದರು. ಬಸವರಾಜ ಮೂಲಗೆ ಸ್ವಾಗತಿಸಿದರು, ಉಮಾಕಾಂತ ಮೀಸೆ ನಿರೂಪಿಸಿದರು, ಸುನಿತಾ ಮೂಲಗೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X