ಮಂಡ್ಯ | ಕಾವೇರಿ ಆರತಿ ಬದಲು ಬಸವಣ್ಣನ ವಚನಗಳ ಚರ್ಚೆ ನಡೆಸಿ: ದ್ರಾವಿಡ ಕನ್ನಡ ಚಳುವಳಿ ಒತ್ತಾಯ

Date:

Advertisements

ಮಂಡ್ಯದಲ್ಲಿ ಕಾವೇರಿ ಆರತಿ ಮಾದರಿಯ ಕಾರ್ಯಕ್ರಮ ಬೇಡ. ದಸರಾ ಉತ್ಸವದ ಸಂದರ್ಭದಲ್ಲಿ ಹಿಂದಿ ಭಾಷೆಗೆ ಅವಕಾಶ ನೀಡದಂತೆ ದ್ರಾವಿಡ ಕನ್ನಡ ಚಳುವಳಿಯ ಹನಕೆರೆ ಅಭಿಗೌಡ ಒತ್ತಾಯಿಸಿದ್ದಾರೆ.

ಸೋಮವಾರ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ ರೋಹಿಣಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟಿಸಿದರು.

ದ್ರಾವಿಡ ಕನ್ನಡ ಚಳುವಳಿಯ ಹನಕೆರೆ ಅಭಿಗೌಡ ಮಾತನಾಡಿ, “ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಉತ್ತರ ಭಾರತದ ಗಂಗಾ ಆರತಿಯನ್ನು ಅಧ್ಯಯನ ಮಾಡಿ ಅದೇ ಮಾದರಿಯಲ್ಲಿ ಕಾವೇರಿ ಆರತಿ ಮಾಡುವುದಾಗಿ ಯೋಜಿಸುತ್ತಿರುವುದು ನಿರಾಶಾದಾಯಕ. ಗಂಗಾ ಮಾತ್ರ ಪವಿತ್ರವಲ್ಲ, ನಮ್ಮ ತುಂಗಾ ನದಿಯೂ ಪವಿತ್ರ” ಎಂದು ಹೇಳಿದರು.

Advertisements

“ಈ ಹಿಂದಿ ಆಚಾರ-ಆಚರಣೆಗಳ ಹೇರಿಕೆ, ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಹಾನಿ ಉಂಟುಮಾಡುತ್ತಿದೆ. ಭಾರತ ಒಕ್ಕೂಟದಲ್ಲಿ ಹಿಂದಿ ಮತ್ತು ಸಂಸ್ಕೃತ ಆಚರಣೆಗಳಿಗೆ ಬೃಹತ್ ಮೊತ್ತದ ಹಣ ವ್ಯಯವಾಗುತ್ತಿದೆ. ಕರ್ನಾಟಕ ಸರ್ಕಾರವೂ ಈ ಮಾರ್ಗದಲ್ಲೇ ಹೋಗುವುದನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಒತ್ತಿ ಹೇಳಿದರು.

ಕಾವೇರಿ ನದಿತೀರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಬಾರದು, ಬದಲಿಗೆ ಪ್ರತೀ ದಸರಾ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕನ್ನಡ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಬಸವಣ್ಣನವರ ವಚನಗಳ ಚರ್ಚೆಯನ್ನು ಆಯೋಜಿಸಬೇಕು. ಈ ಮೂಲಕ ಅಸ್ಪೃಶ್ಯತೆ, ಜಾತಿ ಅಸಮಾನತೆ, ಮತ್ತು ನದಿಯ ನೀರನ್ನು ಕಲುಷಿತಗೊಳಿಸುವ ಕಾರ್ಯಕ್ರಮಗಳನ್ನು ತಡೆಯಲು ಸಾಧ್ಯ ಎಂದು ತಿಳಿಸಿದರು.

ಮಂಡ್ಯ

“ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಹಿಂದಿ ಕಲಾವಿದರಿಗೆ, ಗುತ್ತಿಗೆದಾರರಿಗೆ ಮತ್ತು ಕೆಲಸದವರಿಗೆ ಅವಕಾಶ ನೀಡಬಾರದು. ನಾವು ನಮ್ಮ ಕನ್ನಡ ನುಡಿ ಮತ್ತು ಸಂಸ್ಕೃತಿಯನ್ನೇ ಉತ್ತೇಜಿಸಬೇಕು. ಇದರಲ್ಲಿ ಯಾವುದೇ ರೀತಿಯ ಹಿಂದಿ ಭಾಷೆಯ ಮಿತಿಮೀರುವ ಆಕ್ರಮಣವನ್ನು ತಡೆಯಬೇಕು” ಎಂದು ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ, ನಮ್ಮ ಸ್ಥಳೀಯ ಸಂಸ್ಕೃತಿಗೆ, ನುಡಿಗೆ ಹಿನ್ನಡೆಯಾಗುವ ಕಾರ್ಯಗಳನ್ನು ಅನುಮತಿಸಬಾರದು. ಕರ್ನಾಟಕ ಸರ್ಕಾರವು ಈ ರೀತಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈ ಮನವಿ, ಮಂಡ್ಯ ಜಿಲ್ಲೆಯ ಜನರ ಭಾವನೆಗಳ ಪ್ರತಿಬಿಂಬಿವಾಗಿದೆ. ಜಿಲ್ಲಾಡಳಿತವು ಈ ಕುರಿತಾಗಿ ಸೂಕ್ತವಾದ ಕ್ರಮ ಕೈಗೊಂಡು, ಗಂಗಾ ಆರತಿ ರೀತಿಯ ಕಾರ್ಯಕ್ರಮ ತಡೆಗಟ್ಟಿ ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ಪತ್ತೆಯಾಗಿದ್ದ ಟಿಪ್ಪು ಕಾಲದ ಜೋಡಿ ನೆಲಮಾಳಿಗೆಯ ಸ್ವಚ್ಛತಾ ಕಾರ್ಯ

ಮನವಿ ಸಲ್ಲಿಸುವ ಸಂದರ್ಭದಲ್ಲಿ, ಪಾಂಡವಪುರದ ರಾಜೇಂದ್ರ ಸಿಂಗ್ ಬಾಬು, ಮದ್ದೂರಿನ ಧನುಷ್ ಗೌಡ, ಜಯರಾಂ ಹೊಸೂರು ಸೇರಿದಂತೆ ದ್ರಾವಿಡ ಕನ್ನಡ ಚಳುವಳಿ ಸದಸ್ಯರು ಉಪಸ್ಥಿತರಿದ್ದರು. ಈ ಕಾಳಜಿ ಮತ್ತು ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X