ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

Date:

Advertisements

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಪೂರ್ಣಚಂದ್ರ ತೇಜಸ್ವಿ-86’ ರ ಅಂಗವಾಗಿ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮ’ವನ್ನು ಸೆಪ್ಟೆಂಬರ್ 8ರಂದು ಮಂಡ್ಯದ ಅಂತರಂಗ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ನಗರದ ವಿ.ವಿ.ರಸ್ತೆಯ ಜನತಾ ಬಜಾ‌ರ್ ಕಾಂಪ್ಲೆಕ್ಸ್‌ನ ಅಂತರಂಗ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ವಿಜ್ಞಾನ ವಿಸ್ಮಯಗಳಿಂದ ಪರಿಸರ ಫೋಟೋಗ್ರಫಿಯ ತನಕ ಮಾತುಕತೆ’ ಎಂಬ ಹೊಸ ಬಗೆಯ ಸಂವಾದ ಕೂಡ ಆಯೋಜಿಸಲಾಗಿದೆ. ಲೀಲಾ ಅಪ್ಪಾಜಿ ಸಂಗ್ರಹಿಸಿರುವ ತೇಜಸ್ವಿ ಫೋಟೋ ಪ್ರದರ್ಶನದ ಉದ್ಘಾಟನೆಯನ್ನು ರವೀಂದ್ರ ಭಟ್ ನೆರವೇರಿಸಲಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು, ಎಚ್‌.ಎಸ್.ರೋಹಿಣಿ ಅವರ ಹೊಸ ಕೃತಿ ‘ವಿಸ್ಮಯ ತೇಜಸ್ವಿ’ ಪುಸ್ತಕ ಬಿಡುಗಡೆ ಮಾಡಲಿದ್ದು, ಜಿಲ್ಲಾಧಿಕಾರಿ ಕುಮಾರ್, ಕಸಾಪದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರಕಾಶ ಮೂರ್ತಿ ಪಾಲ್ಗೊಳ್ಳಲಿದ್ದಾರೆ.

Advertisements
WhatsApp Image 2024 09 07 at 3.05.56 PM

‘ತೇಜಸ್ವಿ ಮತ್ತು ತಂತ್ರಾಂಶ’ ಕನ್ನಡ ಕಟ್ಟುವ ಹೊಸ ಬಗೆಯ ಮೊದಲ ಸಂವಾದದ ವಿಷಯವನ್ನು ಮಧ್ಯಾಹ್ನ 2.30 ರಿಂದ 3.20 ರವರೆಗೆ ಭಾಷಾ ವಿಜ್ಞಾನಿ ಮಿಥುನ್ ಮಂಡಿಸುವರು. ಶಿಕ್ಷಕಿ ಸಿ.ಎಚ್.ಮೇಘನಾ ಮತ್ತು ತಂತ್ರಾಂಶ ತಜ್ಞ ಹೆಗ್ಗೆರೆ ರಾಜ್ ಸಂವಾದ ನಡೆಸಿಕೊಡಲಿದ್ದಾರೆ.

‘ಕೃಷಿ: ಇಂದಿನ ಸಂಘರ್ಷ ನಾಳೆಯ ಭರವಸೆ’ ಎಂಬ ವಿಷಯವನ್ನು ಮಧ್ಯಾಹ್ನ 3.30 ರಿಂದ ಸಂಜೆ 4.20 ರವರೆಗೆ ಸಹಜ ಕೃಷಿಕ ಪ್ರಶಾಂತ್ ಜಯರಾಮ್ ಮಂಡಿಸಲಿದ್ದಾರೆ. ‘ಪರಿಸರದ ಕತೆ ನಾಗೇಶ ಹೆಗಡೆ ಜೊತೆ’ ಜೀವಸಂಕುಲದ ಉಳಿವಿಗೆ ಬೇಕು ವಿವೇಕ ಮಾರ್ಗ ವಿಷಯದಲ್ಲಿ ಸಂಜೆ 4.30 ರಿಂದ 5.30 ರವರೆಗೆ ಸಂವಾದಕರಾಗಿ ಕತ್ತರಘಟ್ಟ ವಾಸು, ಸೋಮವರದ ಹಾಗೂ ರೋಹಿತ್ ಅಗಸರಹಳ್ಳಿ ಭಾಗವಹಿಸುತ್ತಾರೆ.

ಈ ಸುದ್ಧಿ ಓದಿದ್ದೀರಾ? ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ – ಈ ದಿನ.ಕಾಮ್

ಸಂಜೆ 5.45ರಿಂದ 6.30 ರವರೆಗೆ ‘ತಬರನ ಕಥೆ ಅಂದು-ಇಂದು’ ರವೀಂದ್ರ ಭಟ್ ಒಳನೋಟಗಳು ಹಾಗೂ ಸಂಜೆ 6.30 ರಿಂದ 7 ರವರೆಗೆ ಪೂಚಂತೇ ನಾನು ಕಂಡಂತೆ- ಬಿ.ಚಂದ್ರೇಗೌಡರೊಂದಿಗೆ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಲೇಖಕ ಎಂ.ವಿ.ಕೃಷ್ಣ, ಹರವು ದೇವೇಗೌಡ, ಪತ್ರಕರ್ತ ಭುಜವಳ್ಳಿ ರಾಮಚಂದ್ರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X