ಮಂಡ್ಯ | ಸತ್ತ ಮೇಲೆ ದೇಹವನ್ನು ಮಣ್ಣು ಮಾಡುವ ಬದಲು ದಾನ ಮಾಡಿ: ಶ್ರೀಧರ್

Date:

Advertisements

“ಮನುಷ್ಯನ ದೇಹವನ್ನು ಸತ್ತ ನಂತರ ಬೆಂಕಿಯಲ್ಲಿ ಸುಟ್ಟು ಇಲ್ಲವೇ ತನ್ನ ದೇಹವನ್ನು ಮಣ್ಣಿನಲ್ಲಿ ಹೂತು ನಾಶ ಮಾಡಬೇಡಿ. ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ಸಲುವಾಗಿ ವೈದ್ಯಕೀಯ ಸಂಸ್ಥೆಗಳಿಗೆ ತಮ್ಮ ದೇಹವನ್ನು ಸತ್ತ ನಂತರದಲ್ಲಿ ದಾನ ಮಾಡಿ” ಎಂದು ಶ್ರೀಧರ್ ಹಳೆಬೀಡು ತಿಳಿಸಿದರು.

ಅವರು ಶ್ರೀರಂಗಪಟ್ಟಣದ ರಾಂಪಾಲ್ ರಸ್ತೆಯಲ್ಲಿರುವ ಶ್ರೀರಂಗ ಡಯಾಗ್ನೋಸ್ಟಿಕ್ ವತಿಯಿಂದ ವಿಶ್ವ ಅಂಗಾಂಗ ದಾನ ದಿನವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಶ್ರೀಧರ್ ಮಾತನಾಡಿ, “ಅನ್ನ ದಾನದಂತೆ ದೇಹ ದಾನ ಮಾಡುವುದು ಕೂಡ ಶ್ರೇಷ್ಠದಾನ” ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ತಮ್ಮ ದೇಹವನ್ನು ದಾನ ಮಾಡಲು ನೋಂದಣಿ ಮಾಡಿರುವ ಯೋಗ ಶಿಕ್ಷಕರಾದ ಕೆ ಶೆಟ್ಟಹಳ್ಳಿ ಅಪ್ಪಾಜಿಗೆ, ವೆಂಕಟೇಗೌಡ ಸೇವಾ ಸಮಿತಿಯ ಅಧ್ಯಕ್ಷರಾದಂತಹ ಡಾ.ಕೆ. ವೈ. ಶ್ರೀನಿವಾಸ್ ಹಾಗೂ ಸಮರ್ಪಣಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಜೈಶಂಕರ್ ಅವರಿಂದ ಸನ್ಮಾನಿಸಲಾಯಿತು.

Advertisements

ಸನ್ಮಾನಿಸಿ ಮಾತನಾಡಿದ ಡಾ.ಕೆ. ವೈ. ಶ್ರೀನಿವಾಸ್, “ನಮ್ಮ ಸ್ನೇಹಿತರಾದ ಅಪ್ಪಾಜಿ ತಮ್ಮ ಹಾಗೂ ಶ್ರೀಮತಿಯವರ ದೇಹವನ್ನು ದಾನ ಮಾಡಿದ್ದಾರೆ. ದೇಹದಾನ ಮಾಡುವುದು ಮುಖ್ಯ ಅಲ್ಲ. ನೋಂದಣಿ ಮಾಡಿರುತ್ತಾರೆ, ಆಸ್ಪತ್ರೆಯವರು ಪ್ರಮಾಣಪತ್ರ ಕೊಟ್ಟಿರುತ್ತಾರೆ. ವ್ಯಕ್ತಿ ತೀರಿ ಹೋದ ಮೇಲೆ ಮನೆಯವರು ಒಪ್ಪಿ, ದೇಹವನ್ನು ಆಸ್ಪತ್ರೆಗೆ ಕೊಡುವುದು ಮುಖ್ಯ. ಅವರ ಮಕ್ಕಳು ಇದಕ್ಕೆ ಒಪ್ಪಿರುತ್ತಾರೆ ಎಂದು ಭಾವಿಸುತ್ತೇನೆ” ಎಂದರು.

“ಮೆಡಿಕಲ್ ವಿದ್ಯಾರ್ಥಿಗಳಿಗೆ ಅಂಗಾಂಗಗಳ ಅಧ್ಯಯನ ಮಾಡಲು ದೇಹಗಳ ಅಲಭ್ಯತೆ ಇದೆ. ಚಿತ್ರಪಟಗಳನ್ನು ಮಾತ್ರ ತೋರಿಸಿ ಕಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ಕಲಿಕೆಗೆ ಹಿನ್ನಡೆ. ಅರೆಬರೆ ಕಲಿಯುವುದರಿಂದ ರೋಗಿಗಳ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ನಾವೆಲ್ಲರೂ ದೇಹ ದಾನ ಮಾಡಬೇಕು. ಇದಕ್ಕಾಗಿ ನಾನು ಕೂಡ ದೇಹ ದಾನ ಮಾಡಬೇಕೆಂದು ತೀರ್ಮಾನಿಸಿದ್ದೇನೆ” ಎಂದು ಚಿಕ್ಕತಮ್ಮೇಗೌಡ ತಿಳಿಸಿದರು.

ಸಾಹಿತಿಗಳಾದ ಶಿವಕುಮಾರ್, ಡಾ. ಕೆ. ವೈ. ಶ್ರೀನಿವಾಸ್, ಜೈ ಶಂಕರ್, ಪೂಜಾ ಶ್ರೀಧರ್ ಇತರರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X