ಧರ್ಮಸ್ಥಳ ಸಂಘದಲ್ಲಿ ಸಾಲ ಮನ್ನಾಗೆ ಆಗ್ರಹಿಸಿ ಬಹಿರಂಗ ಪತ್ರ

Date:

Advertisements

ಈ ವರ್ಷ ರಾಜ್ಯದಲ್ಲಿ ಮುಂಗಾಳೆ ಮಳೆ ಸುರಿಯದೆ ಬರ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಧರ್ಮಸ್ಥಳ ಸಹಕಾರ ಸಂಘಗಳಲ್ಲಿ ಜನರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಅಥವಾ ಸಾಲ ಪಾವತಿ ಮುಂದೂಡಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಸಂಘದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ಅವರಿಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಎಂ.ಎಲ್ ಬಹಿರಂಗ ಪತ್ರ ಬಡೆದಿದ್ದಾರೆ.

“ಕರ್ನಾಟಕದಲ್ಲಿ ಎಲ್ಲಿಯೂ ಕಾಲ ಕಾಲಕ್ಕೆ ಸಮರ್ಥವಾಗಿ ಮಳೆಯಾಗದೇ, ಬರ ಕಾಣಿಸಿಕೊಳ್ಳ ತೊಡಗಿದೆ. ಗ್ರಾಮೀಣ ಜನರ ದಿನನಿತ್ಯದ ಬದುಕು ಹೈರಾಣವಾಗುತ್ತಿದ್ದು, ಗ್ರಾಮಮಟ್ಟದಲ್ಲಿ ಉಳಿದು ಬದುಕುವುದೇ ಕಷ್ಟವಾಗಿದೆ. ಮೇವು ನೀರಿಗೆ, ಪರದಾಡುವಂತಹಾಗಿದೆ. ತಾವು ಕಷ್ಟ ಸುಖಗಳನ್ನು ಆಲೈಸಿ, ಜನರ ದುಃಖ ದುಮ್ಮಾನ ಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ರಾಜ್ಯಸಭಾ ಸದಸ್ಯರಾಗಿರುತ್ತೀರಿ. ಈಗ ಎದುರಾಗಿರುವ ಬರದ ಸಂದರ್ಭದಲ್ಲಿ ಧರ್ಮಸ್ಥಳದ ಸಹಕಾರ ಸಂಘಗಳಿಂದ ಪಡೆದ ಸಾಲರೂಪದ ಹಣವನ್ನು, ಎಷ್ಟು ಕುಟುಂಬಗಳು ಕಂತುಗಳನ್ನು ಕಟ್ಟಲಾಗದೇ ನರಳುವಂಥಾಗಿದೆ. ಹಾಗಾಗಿ, ಈ ವರ್ಷ ಸಾಲವನ್ನು ಗ್ರಾಮ ಮಟ್ಟದಲ್ಲಿ ಮನ್ನಾ ಮಾಡಲು ವಿನಂತಿಸುತ್ತೇನೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

“ಸಾಲದ ಮರುಪಾವತಿಯ ಆಗಲೇಬೇಕು ಎಂದರೆ, ಈ ವರ್ಷದ ಬದಲು ಮುಂದಿನ ವರ್ಷ ಮುಂದೂಡಬೇಕೆಂದು ವಿನಂತಿಸುತ್ತೇನೆ. ಅದು ಸಾಧ್ಯವಿಲ್ಲವೆಂದರೆ, ಬಡ್ಡಿ ಆದರೂ ಮನ್ನಾ ಮಾಡಲು ನಿಮ್ಮ ಧರ್ಮಸ್ಥಳದ ಸಹಕಾರ ಸಂಘಗಳ ಬಗ್ಗೆ ವಿನಂತಿಸುತ್ತೇನೆ. ಈ ಬಾರಿ ಮಳೆಯಾಗದೆ ಬಹಳಷ್ಟು ಜನ ನೊಂದಿದ್ದಾರೆ. ದಯಮಾಡಿ ತೊಂದರೆಗೊಳಗಾದ ಗ್ರಾಮೀಣ ಜನರ ಸಮಸ್ಯೆಗಳನ್ನು ಧರ್ಮಾಧಿಕಾರಿಗಳಾದ ತಾವು ‌ಬಗೆಹರಿಸಬೇಕೆಂದು ಕೋರಿಕೊಳ್ಳುತ್ತೇನೆ. ಧರ್ಮಾಧಿಕಾರಿಗಳ ಮುಂದೆ ಮತ್ತೊಮ್ಮೆ ಕಳಕಳಿಯ ಪ್ರಾರ್ಥನೆ. ಬಡ್ಡಿ ಮತ್ತು ಸಾಲವನ್ನು ಮನ್ನಾ ಮಾಡಿ, ಈ ವರ್ಷದ ಮಟ್ಟಕ್ಕೆ ಆದರ್ಶವನ್ನು ಮೆರೆಯಬೇಕೆಂದು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

Advertisements

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಸರಕಾರ ಮಾಡಬೇಕಾದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರನ್ನು ಸಾಲಮಣ್ಣಕ್ಕೆ ಕೇಳುವ ಬದಲು ತಾವು ಸರಕಾರ ಅವರಿಗೆ ಸಾಲದ ಹಣ ಪಾವತಿಸಲು ಕೇಳಿ. ಸಮಾಜಕ್ಕಾಗಿ ಸೇವೆ ಮಾಡುತ್ತಿರುವ ಅವರನ್ನು ತೊಳೆಯುವ ಯೋಚನೆಯೇ ಸ್ವಾಮಿ ತಮಗೆ.

    • ಧರ್ಮಧಿಕಾರಿಯವರು ಸಾಲ ಕೊಡುತ್ತಿಲ್ಲ ಬ್ಯಾಂಕ್ ನಿಂದ ಕೊಡಿಸುತಿದ್ದಾರೆ ಬ್ಯಾಂಕ್ ನವರಿಗೆ ಮನವಿ ಕೊಡಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X