ನಿನ್ನೆ ಸುರಿದ ಧಾರಾಕಾರ ಮಳೆಗೆ ಗಬ್ಬೂರು ಸಿರವಾರ ಮುಖ್ಯರಸ್ತೆಯ ಮಾರ್ಗ ಮಧ್ಯೆ ಎನ್ ಗಣೇಕಲ್ ಹಳ್ಳದ ಮೇಲ್ಭಾಗಕ್ಕೆ ತುಂಬಿ ನೀರು ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಹಲವೆಡೆ ನಿನ್ನೆ ಮಳೆ ಸುರಿದ ಹಿನ್ನಲೆಯಲ್ಲಿ ದೇವದುರ್ಗ ತಾಲ್ಲೂಕಿನಲ್ಲಿಯು ಸಹ ಧಾರಾಕಾರ ಮಳೆ ಸುರಿದಿದೆ.ಗಬ್ಬೂರು ಗ್ರಾಮದಿಂದ ಸಿರವಾರ ತಾಲ್ಲೂಕಿಗೆ ತೆರಳುವ ಮುಖ್ಯ ರಸ್ತೆಗೆ ಎನ್ ಗಣೇಕಲ್ ಗ್ರಾಮದ ಬಳಿ ಸೇತುವೆ ಮುಳುಗಿ ಬಹುತೇಕ ಸಂಚಾರ ತೊಂದರೆ ಉಂಟಾಗಿದೆ.
ಈ ಬಗ್ಗೆ ಗ್ರಾಮದ ನಿವಾಸಿ ಶಾಂತಕುಮಾರ ಹೊನ್ನಟಗಿ ಮಾತನಾಡಿ ,ರಸ್ತೆಯು ಗಬ್ಬೂರು , ಮಸೀದಾಪುರ , ನಿಲೋಗಲ್ ,ಎನ್ ಗಣೇಕಲ್ ಮುಖಾಂತರ ಸಿರವಾರ ತಾಲ್ಲೂಕಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುತ್ತಾರೆ. ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡು ಜನರು ನೀರಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಮಾಜ ಕಲ್ಯಾಣ ವಸತಿ ನಿಲಯಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು : ಡಿವಿಪಿ ಒತ್ತಾಯ
ಪ್ರತಿ ವರ್ಷ ಈ ಹಳ್ಳ ಉಕ್ಕಿ ಬರುವ ಸಮಸ್ಯೆ ಎದುರಾಗುತ್ತಿದ್ದು, ಈ ಹಿಂದೆ ಘಟನೆಗಳು ಸಂಭವಿಸಿ ಸಾವು ನೋವಿನಲ್ಲಿ ಬದುಕುಳಿದಿದ್ದಾರೆ. ಸುತ್ತಮುತ್ತ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಷ್ಟ ಅನುಭವಿಸಿದ್ದಾರೆ.

ಸೇತುವೆ ಬಗ್ಗೆ ಹಲವು ಬಾರಿ ಗ್ರಾಮದ ಮುಖಂಡರು ಜಿಲ್ಲಾಧಿಕಾರಿಗೆ, ಶಾಸಕರಿಗೆ ಗಮನಕ್ಕೆ ತಂದರು ಕಣ್ಮುಚ್ಚಿಕೊಂಡು ಕುಳಿತಿದೆ. ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ ಕಟ್ಟಲು ಮುಂದಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
