ಶಿವಮೊಗ್ಗ | ದೇಶದ ಶೇ. 80ರಷ್ಟು ಸಂಪತ್ತು ಮೇಲ್ವರ್ಗಗಳ ಕೈಯಲ್ಲಿದೆ: ಎಸ್ ಮೂರ್ತಿ

Date:

Advertisements

ದೇಶದ ಶೇ. 80ರಷ್ಟು ಸಂಪತ್ತು ಕೇವಲ ಶೇ. 20ರಷ್ಟಿರುವ ಮೇಲ್ವರ್ಗದವರ ಬಳಿ ಶೇಖರಣೆಗೊಂಡಿದೆ. ಶೇ. 80ರಷ್ಟಿರುವ ಅಹಿಂದ ವರ್ಗಗಳ ಜನರು ಇನ್ನೂ ಬಡತನ ರೇಖೆಯಲ್ಲಿಯೇ ಇದ್ದಾರೆ. ಇದು ದೇಶದ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ರಾಜ್ಯ ವಿಧಾನಸಭೆ ಮಾಜಿ ಕಾಯ೯ದಶಿ೯ ಹಾಗೂ ಅಹಿಂದ ಚಳವಳಿ ರಾಜ್ಯ ಪ್ರಧಾನ ಸಂಚಾಲಕ ಎಸ್ ಮೂತಿ೯ ಹೇಳಿದರು.

ಶಿವಮೊಗ್ಗದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ʼಅಹಿಂದ ಸಮ್ಮಿಲನ-ಚಿಂತನ ಮಂಥನʼ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಹಿಂದ ವರ್ಗಗಳ ಬಡವರು ಮೇಲ್ವರ್ಗಗಳ ಬಳಿ ಇರುವ ಸಂಪತ್ತನ್ನು ನಿರ್ವಹಣೆ ಮಾಡುವ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ ಸ್ವತಂತ್ರಗೊಂಡು 76 ವರ್ಷ ಪೂರೈಸಿದ್ದರೂ ದೇಶದ ಬಹುಸಂಖ್ಯಾತ ಜನರ ಸ್ಥಿತಿ ಇದೇ ಆಗಿದೆ. ಆದರೆ ಯಾರೂ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ದೇಶದ ಕಾರ್ಯಾಂಗ, ಉದ್ಯೋಗ ಕ್ಷೇತ್ರದಲ್ಲಂತೂ ಕೇವಲ 3 ಪಸೆಂ೯ಟ್ ಇರುವ ಬ್ರಾಹ್ಮಣರೇ ತುಂಬಿಹೋಗಿದ್ದಾರೆ. ಹಾಲಿ 650 ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳ ಪೈಕಿ 500 ಹುದ್ದೆಗಳು ಬ್ರಿಟಿಷ್ ಕಾಲದಲ್ಲೇ ಬುದ್ಧಿವಂತರಾಗಿದ್ದವರ ಪಾಲಾಗಿವೆ” ಎಂದು ಅಂಕಿ-ಅಂಶ ನೀಡಿದರು.

1001196960

ರಾಜ್ಯದ 2011ರ ಜನಗಣತಿ ಪ್ರಕಾರ ಎರಡೂ ಮುಕ್ಕಾಲು ಕೋಟಿ ಇರುವ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಸಿಕ್ಕ ಶಾಸಕರ ಸ್ಥಾನ ಕೇವಲ 30 ರಿಂದ 40 ಮಾತ್ರ. ಆದರೆ ತಲಾ 60 ಲಕ್ಷ ಜನಸಂಖ್ಯೆ ಹೊಂದಿರುವ ಎರಡು ಮೇಲ್ವಗ೯ಗಳ ಶಾಸಕರು 140ಕ್ಕೂ ಹೆಚ್ಚು. ರಾಜ್ಯದ ಉತ್ತರ ಭಾಗವನ್ನು ಒಂದು ಜಾತಿಯವರು ಆಳಿದರೆ ದಕ್ಷಿಣ ಭಾಗವನ್ನು ಇನ್ನೊಂದು ಜಾತಿಯವರು ಆಳುತ್ತಿದ್ದಾರೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸಾಂಸ್ಕೃತಿಕ ಅವನತಿಯು ಯುವ ಪೀಳಿಗೆಯನ್ನು ವಿಕೃತಗೊಳಿಸುತ್ತಿದೆ: ಸುಬ್ಬರಾಜು

ಕಾರ್ಯಕ್ರಮದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ ನ ಶ್ರೀನಿವಾಸ್, ಅಹಿಂದ ಚಳವಳಿಯ ಮೊಹಮ್ಮದ್ ಸನಾವುಲ್ಲಾ, ಜಿ ಪರಮೇಶ್ವರಪ್ಪ, ಮಿಲಿಂದ ಸಂಘಟನೆಯ ಅಣ್ಣಪ್ಪ ಆಯನೂರು ಕೋಟೆ, ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರೊ. ಹೆಚ್ ರಾಚಪ್ಪ, ಸಂಚಾಲಕ ಎ ಕೆ ಚಂದ್ರಪ್ಪ, ಕಲ್ಲಪ್ಪ, ಉಮೇಶ್ ಯಾದವ್ ಸೇರಿದಂತೆ ಹಲವರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X