ಶಿವಮೊಗ್ಗ | ಪಾಸ್‌ಪೋರ್ಟ್‌ ಅರ್ಜಿ ತಿರಸ್ಕಾರ; ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ

Date:

Advertisements

ಪಾಸ್‌ಪೋರ್ಟ್‌ ನೀಡುವ ವಿಚಾರವಾಗಿ ಏರ್‌ಪೋರ್ಟ್‌ ವಿಭಾಗದ ಅಧಿಕಾರಿಗಳು ಅನಗತ್ಯ ಗೊಂದಲ ಮಾಡುತ್ತಿದ್ದು, ತಮಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿಯ ಪ್ರಖ್ಯಾತ ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ ನಡೆಸುತ್ತಿದ್ದಾರೆ.

ಶಿವಮೊಗ್ಗ ನಗರದ ಪೋಸ್ಟ್‌ ಆಫೀಸ್‌ ಕಚೇರಿ ಆವರಣದಲ್ಲಿನ ಪಾಸ್‌ಪೋರ್ಟ್‌ ಕಚೇರಿ ಮುಂದೆ ಶ್ರೀಧರ್‌ ಧರಣಿ ಕುಳಿತಿದ್ದಾರೆ. ಕೈಯಲ್ಲಿ “ನಾನು ಸಲ್ಲಿಸಿದ ಪಾಸ್‌ಪೋರ್ಟ್‌ ಅರ್ಜಿಯನ್ನು ನಿರಾಕರಿಸುವಾಗ ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್‌ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ ಎಂಬಂತಹ ನಿಯಮ ಇರುವುದನ್ನು ಏರ್‌ಪೋರ್ಟ್‌ ವಿಭಾಗದ ಅಧಿಕಾರಿಗಳು ನನಗೆ ಬರೆದುಕೊಡಬೇಕು” ಎಂದು ಆಗ್ರಹಿಸಿ ಪೋಸ್ಟರ್‌ವೊಂದನ್ನು ಹಿಡಿದಿದ್ದಾರೆ.

ಧರಣಿ ಕುಳಿತ ಶ್ರೀಧರ್‌ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಾಸ್‌ ಪೋರ್ಟ್‌ ಮತ್ತು ಆಧಾರ್‌ ಕಾರ್ಡ್‌ನಲ್ಲಿ ಹೆಸರು ಬದಲಾಗಿದೆಯೆಂದು ಪಾಸ್‌ಪೋರ್ಟ್‌ ತಿರಸ್ಕರಿಸಿದ್ದರು. ಹಾಗಾಗಿ ನಾನು ಹೊಸ ಪಾಸ್‌ಪೋರ್ಟ್‌ ಮಾಡಿಸುವ ಸಲುವಾಗಿ ನನ್ನ ಹೆಸರನ್ನು ಲಾಯರ್‌ ಅಫಿಡವಿಟ್‌ ಮಾಡಿ ಆಧಾರ್‌ನಲ್ಲಿರುವಂತೆಯೇ ಹೆಸರು ಸರಿಪಡಿಸಿಕೊಂಡಿದ್ದೇನೆ. ಈಗ ಬಂದು ಕೇಳಿದರೆ, ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್‌ ಪತ್ರಿಕೆಯಲ್ಲಿ ಪ್ರಕಟಿಸಿರಬೇಕೆಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.

Advertisements
ಪಾಸ್‌ಪೋರ್ಟ್‌ ತಿರಸ್ಕೃತ ಕೆ ಜಿ ಶ್ರೀಧರ್

“ಪ್ರತಿ ಬಾರಿ ಬಂದು ಕೇಳುವಾಗಲೂ ಒಂದೊಂದು ಕಾರಣ ಹೇಳುತ್ತಾರೆ. ಅವರ ಹತ್ತಿರ ಹೋಗಿ, ಇವರ ಹತ್ತಿರ ಹೋಗಿ ಸರಿಮಾಡಿಸಿಕೊಂಡು ಬನ್ನಿ ಅಂತ ಹೇಳುತ್ತಾರೆ. ಯಾರೂ ಮಾಡುವುದಿಲ್ಲ. ಇವರೆಲ್ಲ ಒಂದು ನೆಟ್ವರ್ಕ್‌ ಮಾಡಿಕೊಂಡಿದ್ದಾರೆ ಅನ್ನಿಸುತ್ತಿದೆ. ಗ್ರಾಹಕರ ಸಂಪರ್ಕಕ್ಕೆಂದು ಒಂದು ನಂಬರ್‌ ಹಾಕಿದ್ದಾರೆ. ಅದಕ್ಕೆ ಕಾಲ್‌ ಮಾಡಿದರೆ ನಂಬರ್‌ ಚಾಲ್ತಿಯಲ್ಲಿ ಇಲ್ಲ ಎಂದು ಬರುತ್ತಿದೆ. ಇವರು ಜನಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ” ಎಂದು ದೂರಿದರು.

“ಇವರು ಜನರ ಸೇವೆ ಮಾಡುತ್ತಿಲ್ಲ, ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಹಣ ಖರ್ಚು ಮಾಡಿ, ಸಮಯ ಮೀಸಲಿಟ್ಟಿರುತ್ತಾರೆಂಬ ಯಾವುದೇ ಗೋಜಿಲ್ಲ. ಅಧಿಕಾರಿಗಳು ತುಂಬಾ ಉದಾಸೀನ ತೋರುತ್ತಾರೆ. ಸುಮ್ಮನೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಿಸುತ್ತಿದ್ದಾರೆ. ಹೆಸರು ಬದಲಾವಣೆ ಕುರಿತು ಇಂಗ್ಲಿಷ್‌ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬುದನ್ನು ನನಗೆ ಅಕ್ಷರಗಳಲ್ಲಿ ಬರೆದು ಕೊಡಬೇಕು, ನನಗೆ ಇವರು ಕ್ಲಾರಿಟಿ ಕೊಡಬೇಕು. ಹಾಗಾಗಿ ನಾನು ಧರಣಿ ಕೂತಿದ್ದೀನಿ” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

“ಇದು ಕೇಂದ್ರ ಸರ್ಕಾರದ ಕಾನೂನು ಅಲ್ಲವೇ, ಎಂಪಿಯವರೇ ಬಂದು ಇಲ್ಲಿಯ ವ್ಯವಸ್ಥೆಯನ್ನೊಮ್ಮೆ ಪರಿಶೀಲಿಸಲಿ. ಅವರೇ ನನಗೆ ಈ ಕಾನೂನಿನ ಕುರಿತು ನ್ಯಾಯ ನೀಡಲಿ” ಎಂದು ಕೆ ಜಿ ಶ್ರೀಧರ್ ಪಟ್ಟುಹಿಡಿದಿದ್ದಾರೆ.

ಈ ದಿನ.ಕಾಮ್‌ ಸ್ಥಳದಲ್ಲಿರುವುದನ್ನು ಕಂಡ ಮಹೇಶ್ ಎಂಬ ಅಧಿಕಾರಿಯೊಬ್ಬರು, “ಯಾರು ಸುದ್ದಿ ಮಾಧ್ಯಮದವರು, ಇಲ್ಲಿ ಬರುವಂತಿಲ್ಲ. ನೀವು ಪೊಲೀಸರನ್ನು ಕರೆತಂದು ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದು ವರದಿಗಾರರ ಮೇಲೆ ದರ್ಪದ ಮಾತುಗಳನ್ನು ಆಡಿದರು.

ಭಾರದ್ವಾಜ್
ರಾಘವೇಂದ್ರ, ಶಿವಮೊಗ್ಗ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X