ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಪ್ಪು ಸುಲ್ತಾನ್ ಅಂಜುಮನ್ ಗ್ಯಾರೇಜ್ ಲೈನ್ ಮಾಲೀಕರು-ಕಾರ್ಮಿಕರ ಸಂಘ ಹಾಗೂ ಸಿಐಟಿಯು ಸಂಘಟನೆ ವತಿಯಿಂದ ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
ಆ ಬಳಿಕ ತಹಶೀಲ್ದಾರ್ ಮುಖಾಂರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಣ್ಣಾರಾಯ ಇಳಗೆರಿ ಮಾತನಾಡಿ, ಸಿಂದಗಿ ನಗರದಲ್ಲಿ ಇರುವ ಮುಸ್ಲಿಂ ಸಮಾಜ ಖಬರಸ್ಥಾನಕ್ಕೆ ಹೊಂದಿಕೊಂಡು ಅಂಜುಮನ ಜಾಗದಲ್ಲಿ ಕಳೆದ 35 ರಿಂದ 40 ವರ್ಷಗಳಿಂದ ಇದ್ದಾರೆ. ಬಡ ಮುಸ್ಲಿಂ ಹಾಗೂ ಹಿಂದು ಜನರು ಗುಡಿಸಲು, ಶೆಡ್ಡುಗಳು ಕಚ್ಚಾ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಕುಟುಂಬ ನಿರ್ವಹಣೆಗೆ ಸಣ್ಣಪುಟ್ಟ ಬೀಡಾ ಅಂಗಡಿ, ಚಹಾ ಅಂಗಡಿ, ಪಂಚರ್ ಅಂಗಡಿ, ಗ್ಯಾರೇಜ್ ಗಳು, ಫ್ಯಾಬ್ರಿಕೆಟಿಂಗ ಅಂಗಡಿಗಳು ಹೀಗೆ ಹಲವಾರ ರೀತಿಯ ಕಸಬುಗಳನ್ನು ಮಾಡುತ್ತಾ ತಮ್ಮ ಕುಟುಂಬ ನಿರ್ವಣೆ ಮಾಡಿಕೊಂಡು ಬಂದಿದ್ದಾರೆ. ಸದರಿ ನಿವೇಶನ ಬಿಟ್ಟರೆ ಬೇರೆ ಯಾವುದೆ ರೀತಿಯ ಆಸ್ತಿ ಇರುವುದಿಲ್ಲ. ಈಗ ಇರುವ ಜಾಗದಲ್ಲಿ ಕಷ್ಟಪಟ್ಟು ದುಡಿದು ಜೀವನ ಸಾಗಿಸುವ ಜನರಿದ್ದಾರೆ” ಎಂದು ತಿಳಿಸಿದರು.
ಅನೇಕ ಜನ ಯುವಕ ಯುವತಿಯರು ವಿದ್ಯಾವಂತರಾಗಿದ್ದಾರೆ. ಕಂಪನಿಗಳಲ್ಲಿ ಆಗಲಿ ಸರಕಾರದಲ್ಲಾಗಲಿ ಯಾವುದೆ ಕೆಲಸ ಸಿಗದೆ ಇದ್ದುದರಿಂದ ಆನಿವಾರ್ಯವಾಗಿ ಅಂಗಡಿಗಳು ಗ್ಯಾರೇಜ್ ಹಾಕಿಕೊಂಡು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಯಾರೋ ಕೆಲವರು ಬಂದು “ನಾವು ಮುಸ್ಲಿಂ ಕಬರಸ್ಥಾನ ಕಮಿಟಿಯವರು. ಈ ಜಾಗ ನಮ್ಮದು. ಈ ಜಾಗ ಖಾಲಿ ಮಾಡಬೇಕು. ಇಲ್ಲದೆ ಹೋದರೆ ಪೊಲೀಸರನ್ನು ಕರೆ ತಂದು ನಿಮ್ಮನ್ನು ಇಲ್ಲಿಂದ ಕಿತ್ತು ಹಾಕುತ್ತೇವೆ. ಕೋರ್ಟ್ ಆದೇಶವಿದೆ. ನಿಮ್ಮನಯ ಜೈಲಿಗೆ ಕಳಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ” ಎಂದರು.

ಹೀಗಾಗಿ ಸರಕಾರದ ಅಥವಾ ಸಂಬಂಧಪಟ್ಟವರು ಸರಕಾರಿ ಕಾನೂನ ಅನುಸಾರ ಸದರಿ ನಿವೇಶನವನ್ನು ಖಾಯಂ ಆಗಿ ಮಂಜೂರು ಮಾಡಬೇಕು. ಇಲ್ಲವೆ ಭೂ ಬಾಡಿಗೆ ಮಂಜೂರು ಮಾಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಈ ಹೋರಾಟಕ್ಕೆ ದಲಿತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್.ಎ.ಸಿಂದಗಿಕರ ಹಾಗೂ ಮುಸ್ಲಿಂ ಮುಖಂಡರಾದ ರಹೀಮ ದುದನಿಯವರು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಜಾಫರ್ ಇನಾಮಾದಾರ, ಇಬ್ರಾಹಿಂ ಸುತರಾ, ಬಶೀರ್ ಸಾಬ್ ಕಡಗಿ, ಸೈನಾಜಾ ಬಾಗವಾನ, ರಾಜು ಮುಲ್ಲಾ, ಪ್ರತಿಭಾ ಕೊರಡಗಿ, ಸರಸ್ವತಿ ಮಠ, ರಮೇಶ ತಳವಾರ ಇತರರು ಉಪಸ್ಥಿತರಿದ್ದರು.
