ತುಮಕೂರು | ಕೆ. ಎನ್ ರಾಜಣ್ಣ ಬಡವರ ಮನುಷ್ಯ : ಬರಗೂರು ರಾಮಚಂದ್ರಪ್ಪ

Date:

Advertisements

  ರಾಜಣ್ಣ ಬಡವರ ಮನುಷ್ಯ. ಬಡವರಿಗಾಗಿ ದುಡಿದ ವ್ಯಕ್ತಿತ್ವ ಅವರದ್ದು‌. ಹಾಗಾಗಿ ಇಷ್ಟು ಜನ ಸೇರಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು

ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ 75 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತುಮಕೂರು ನಗರದ ಜೂನಿಯರ್ ಕಾಲೇಜು ಮೖದಾನದಲ್ಲಿ ಆಯೋಜಿಸಿದ್ದ ರಾಜಣ್ಣ @75 ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 

ಕೆ.ಎಸ್. ನಿಸಾರ್ ಅಹಮದ್ ನಿಮ್ಮೊಳಗಿದ್ದು, ನಿಮ್ಮಂತಾಗದೆ ಎಂಬ ಕವಿತೆಯಿದೆಲ್ಲ ಅದು ರಾಜಣ್ಣ ಅವರ ವ್ಯಕ್ತಿತ್ವ. ಏಕಶಿಲಾ ಬೆಟ್ಟ ಎಷ್ಟು ಗಟ್ಟಿಯೋ ರಾಜಣ್ಣ ಅವರ ವ್ಯಕ್ತಿತ್ವವೂ ಅಷ್ಟೇ ಗಟ್ಟಿಯಾಗಿದೆ. ಯಾರದರೂ ಎದುರುಬಿದ್ದರೆ ಎದುರು ಬೀಳ್ತಾರೆ. ಪ್ರೀತಿಯಿಂದ್ದರೆ, ಪ್ರೀತಿಯಿಂದ ಕಾಣುತ್ತಾರೆ. ಏಕಾಂಗಿಯಾಗಿ ಹೋರಾಟ ಮಾಡುವ ನಾಯಕ. ರಾಜಣ್ಣ ಜಾತ್ಯಾತೀತ ಸೇವಾ ನಾಯಕ. ಮೀಸಲಾತಿ ಕ್ಷೇತ್ರದಲ್ಲಿ ನನಗೆ ಟಿಕೆಟ್ ಬೇಡ. ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೊಡಿ ಎಂದಿದ್ದರು. ಮೀಸಲಾತಿ ಬಿಟ್ಟು ಸಾಮಾನ್ಯ ಕ್ಷೇತ್ರಸಲ್ಲಿ ಗೆದ್ದದ್ದು ಇದು ಕರ್ನಾಟಕದ ಇತಿಹಾಸದಲ್ಲೇ ವಿರಳ. ದೇವರಾಜು ಅರಸು ಅವರ ಪ್ರೇರಣೆಯಿಂದ ರಾಜಕಾರಣಕ್ಕೆ ಬಂದಿದ್ದಾರೆ. ಸಹಕಾರ ಸಾರ್ವಭೌಮ ಎಂಬ ಬಿರುದನ್ನು ಕಟ್ಟಿಕೊಟ್ಟಿದ್ದಾರೆ. ಅಭಿನಂದನಾ ಗ್ರಂಥದಲ್ಲಿ ಸಹಕಾರ ಸಾರ್ವಭೌಮನ ಸಾರವನ್ನು ಕಟ್ಟಿಕೊಟ್ಟಿದೆ. ರಾಜಣ್ಣ ಅಂದರೆ ಏನು ?  ಎನ್ನುವುದನ್ನು ಅರ್ಥಯಿಸಿದೆ ಎಂದರು.

Advertisements

ರಾಜಣ್ಣ ಕೂಗು ವೀರ ಅಲ್ಲ. ಕೆಲಸಗಾರ‌. ಅವರು ಮಾಡಿದ ಸೇವಾ ಕಾರ್ಯಕ್ಕೆ  ಜನರು ಮೆಚ್ಚಿದ್ದಾರೆ. ಸರ್ಕಾರಿ ಶಾಲೆಗಳು ಸಂಭ್ರಮದಲ್ಲಿ ನಲಿಯುವಂತೆ ಮಾಡಬೇಕು. ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಅಭಿವೃದ್ಧಿಪಡಿಸಬೇಕು ಎಂದು ರಾಜಣ್ಣ ಅವರಿಗೆ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.

ರಾಷ್ಟ್ರದ ರಾಜಕಾರಣವನ್ನು ಸೈದ್ಧಾಂತಿಕ ಹಾಗೂ ಸಮಯ ಸಾಧಕ ರಾಜಕಾರಣ ಎಂದು ವಿಂಗಡಿಸಬಹುದು. ಆದರೆ, ರಾಜಣ್ಣ ಅವರದ್ದು ಸಮಯೋಚಿತ ರಾಜಕಾರಣ. ಯಾರನ್ನಾದರೂ ಗೆಲ್ಲಿಸಿ ಅಂದರೆ ಗೆಲ್ಲಿಸುತ್ತಾರೆ. ಅದು ಅವರ ವ್ಯಕ್ಯಿತ್ವ ಎಂದರು.

ತುಮಕೂರು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಸಮೃದ್ಧವಾಗಿ ನಲಿಯುತ್ತಿರುವ ಜಿಲ್ಲೆಯಾಗಿದ್ದು ಶಿಕ್ಷಣದ ಹೆಬ್ಬಾಗಿಲಾದೆ. ಅಭಿವೃದ್ದಿ ಅಂದರೆ ಬಂಡವಾಳಿಗರನ್ನು ಕರೆಸುವುದು ಅಷ್ಟೇ ಅಲ್ಲ. ಬಂಡವಾಳ ಭಗವಂತನಾಗಿ ಬರುವುದು ಬೇಡ, ಭಕ್ತನಾಗಿ ಬರಲಿ.ಶೖಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಮಕೂರಿನ ಆಸ್ಮಿತೆ ಉಳಿಸಲು ಇಬ್ಬರು ಸಚಿವರು ಸಂಕಲ್ಪ ಮಾಡಬೇಕು ಎಂದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X