ತುಮಕೂರು | ಹಸುಗೂಸು, ಬಾಣಂತಿಯರನ್ನು ಮನೆಗೆ ಸೇರಿಸಿದ ನ್ಯಾಯಾಧೀಶೆ

Date:

Advertisements

ಗೊಲ್ಲರ ಹಟ್ಟಿಗಳಲ್ಲಿ ಬಾಣಂತಿ ಹಾಗೂ ಹಸುಗೂಸನ್ನು ಊರ ಹೊರಗಿನ ಗುಡಿಸಿಲಿನಲ್ಲಿರಿಸಿ, ಶಿಶು ಸಾವನ್ನಪ್ಪಿದ್ದ ಘಟನೆಯ ಬಳಿಕವೂ, ಮೌಢ್ಯಾಚರಣೆ ಮುಂದುವರೆದಿದೆ. ಇಂದಿಗೂ ತಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯವು ಬಾಣಂತಿ ಮತ್ತು ಶಿಶುಗಳನ್ನು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ, ಗೊಲ್ಲರಹಟ್ಟಿಗಳಿಗೆ ಪದೇ-ಪದೇ ಭೇಟಿ ನೀಡಿ, ಅಲ್ಲಿನ ಜನರನ್ನು ಅರಿವು ಮೂಡಿಸುತ್ತಿದ್ದಾರೆ. ಬಾಣಂತಿಯನ್ನು ಮನೆಗೆ ಸೇರಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗೌರಿಪುರ, ಬಿದರೆ, ನಲ್ಲೂರು ಭಾಗದ ಗೊಲ್ಲರಹಟ್ಟಿಗಳಿಗೆ ನ್ಯಾಯಾಧೀಶರ ನೇತೃತ್ವದ ತಂಡ ಭೇಟಿ ನೀಡಿದ್ದು, ಗೌರಿಪುರದಲ್ಲಿ ಊರ ಹೊರಗಿನ ಗುಡಿಸಲಿನಲ್ಲಿದ್ದ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಹಸುಗೂಸು ಹಾಗೂ ಬಾಣಂತಿಯರನ್ನು ಮನೆಗೆ ಕಳುಹಿಸಿದ್ದಾರೆ. ನಲ್ಲೂರು ಹಟ್ಟಿಯಲ್ಲಿ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಇಬ್ಬರು ಬಾಣಂತಿಯರ ಪೋಷಕರ ಮನವೊಲಿಸಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.

“ಆಧುನಿಕ ಕಾಲದಲ್ಲಿಯೂ ಜನರು ಮೂಢನಂಬಿಕೆಯನ್ನು ಪಾಲಿಸುತ್ತಿರುವುದು ದುರದೃಷ್ಟಕರ. ಬಾಣಂತಿ, ಮಕ್ಕಳಿಗೆ ಉತ್ತಮ ಆರೈಕೆಯ ಅಗತ್ಯವಿದೆ. ಯಾವುದೇ ಕಾರಣಕ್ಕೂ ಅವರನ್ನು ಊರ ಹೊರಗೆ ಬಿಡಬಾರದು. ಅಂತಹ ಯಾವುದೇ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡುಬಂದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು” ಎಂದು ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಸೂಚಿಸಿದರು.

“ಗೊಲ್ಲರಹಟ್ಟಿಯ ವಿದ್ಯಾವಂತರೂ ಮೂಢನಂಬಿಕೆಗೆ ಬಲಿಯಾಗಿರುವುದು ವಿಪರ್ಯಾಸ. ಇಂತಹ ಪದ್ಧತಿಗಳನ್ನು ತ್ಯಜಿಸಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸಂಪ್ರದಾಯವನ್ನು ಆಚರಿಸಿ, ಆದರೆ ಮೂಢನಂಬಿಕೆಗೆ ಒಳಗಾಗಿ ಹಸುಗೂಸುಗಳನ್ನು ಬಲಿ ಕೊಡಬೇಡಿ” ಎಂದು ತಹಶೀಲ್ದಾರ್ ಬಿ ಆರತಿ ಜಾಗೃತಿ ಮೂಡಿಸಿದರು.

Advertisements
Bose Military School

ಈ ಸುದ್ದಿ ಓದಿದ್ದೀರಾ? ತುಮಕೂರು | ನ್ಯಾ. ಉಂಡಿ ಮಂಜುಳಾ ಶಿವಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ; ಬಾಣಂತಿ ಬಿಡುವ ಗುಡಿಸಲು ನಾಶ

“ಹೆರಿಗೆಯ ನಂತರ ಮಗು, ಬಾಣಂತಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಚಳಿ, ಮಳೆಗೆ ಲೆಕ್ಕಿಸದೆ ಗುಡಿಸಲಿನಲ್ಲಿ ಬಿಡುವುದು ತರವಲ್ಲ. ಇದು ಅಮಾನವೀಯ ಕೃತ್ಯ. ಸ್ಥಳೀಯರು ಜಾಗೃತಿಗೊಂಡು ಮಗು ಮತ್ತು ಬಾಣಂತಿಗೆ ಉತ್ತಮ ಆರೈಕೆ ಮಾಡುವುದರ ಜತೆಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು” ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ಬಿಂದು ಮಾಧವ್ ಸಲಹೆ ನೀಡಿದರು.

ಈ ವೇಳೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್, ದೇವಿಕಾರಾಣಿ, ನಾಗರಾಜು, ಪವಿತ್ರ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ʼಬಯಲು ಸೀಮೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿʼ

ಸುಮಾರು ವರ್ಷಗಳಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ...

ಉಡುಪಿ | ಜಗತ್ತಿನಾದ್ಯಂತ ಪ್ರತೀ ವರ್ಷ ನೂರಾರು ಮುದ್ರಣ ಪತ್ರಿಕೆಗಳು ಮುಚ್ಚಿಕೊಳ್ಳುತ್ತಿವೆ – ರಾಜಾರಾಂ ತಲ್ಲೂರು

ಕೃತಕ ಬುದ್ದಿಮತ್ತೆ ಸುದ್ದಿಮನೆಯ ಒಳಗೆ ಪ್ರವೇಶಿಸಿದರೆ, ಭಾಷಾಂತರ, ಸುದ್ದಿ, ಸಾರಾಂಶ, ವಿವಿಧ...

ಹಾವೇರಿ | ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ತಹಶೀಲ್ದಾರ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಡಾ....

Download Eedina App Android / iOS

X