ತುಮಕೂರು | ಮಾನಸಿಕ ರೋಗಕ್ಕೆ ಸಮಾಜ ಕಾರಣ : ಬಿ.ಎಸ್. ರಾಜಶೇಖರ್

Date:

Advertisements

ಹುಟ್ಟಿನಿಂದಲೇ ಯಾರೂ ಮಾನಸಿಕರೋಗಿಗಳಾಗಿರುವುದಿಲ್ಲ. ಅವರ ಸುತ್ತ ಮುತ್ತಲಿನ ಪರಿಸರ ಅವರನ್ನು ಮಾನಸಿಕ ರೋಗಿಯಾಗಿ ಪರಿವರ್ತಿಸುತ್ತದೆ ಎಂದು ಲಯನ್ಇಂಟರ್ ನ್ಯಾಷನಲ್ ಪಿ.ಎಂ.ಜಿ.ಎಫ್. ಸಂಸ್ಥೆಯ ಮುಖ್ಯಸ್ಥ ಬಿ.ಎಸ್. ರಾಜಶೇಖರ್ ಅಭಿಪ್ರಾಯಪಟ್ಟರು. 

ನಗರದ ಸ್ನೇಹ ಮನೋವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಪೌಂಡೇಶನ್ ಹಾಗೂ ತುಮಕೂರು ವಿವಿಯ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರದೇಶವಾರು ಮಹಿಳಾ ಸಬಲೀಕರಣ ಉಪಕ್ರಮ -1 ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾನಸಿಕ ರೋಗಿಗಳಿಗೆ ಎರಡು ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸಿ ಮಾತಾನಾಡಿದ ಅವರು ಮಾನಸಿಕವಾಗಿ ಗೊಂದಲಕ್ಕೆ ಒಳಗಾದವರನ್ನು ಸರಿ ದಾರಿಗೆ ತರುವ ಕೆಲಸ ಅಷ್ಟು ಸುಲಭದಲ್ಲ. ಬಹಳಷ್ಟು ಸಂಯಮ ಇರಬೇಕಾಗುತ್ತದೆ. ಇಲ್ಲಿನ ವಾತಾವರಣ ಮಾನಸಿಕ ರೋಗಿಗಳು ಗುಣವಾಗಲು ಪೂರಕವಾಗಿದೆ. ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಮನೋ ಕೇಂದ್ರಕ್ಕೆ ಎರಡು ಹೊಲಿಗೆ ಯಂತ್ರಗಳನ್ನು ನೀಡುತ್ತಿರುವುದು ಖುಷಿಯಾಗುತ್ತಿದೆ ಎಂದರು.

ಸ್ನೇಹ ಮನೋ ವಿಕಾಸ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಲೋಕೇಶ್ ಬಾಬು ಮಾತನಾಡಿ, ಮುಖ್ಯವಾಗಿ ಮಾನಸಿಕ ರೋಗಿಗಳು ಸಮಾಜದಿಂದ ನಗೆ ಪಟಾಲಿಗೆ ಗುರಿಯಾಗುತ್ತಾರೆ. ಅವರ ಮನೆಯವರು ಅವರನ್ನು ಪ್ರೀತಿಸಬೇಕು. ಆದರೆ ಮನೆಯವರೇ ಅವರನ್ನು ಹೀಯಾಳಿಸುತ್ತಾರೆ ಇದು ಸರಿಯಲ್ಲ ಎಂದರು.

Advertisements

ಕಾರ್ಯಕ್ರಮದಲ್ಲಿ ಲಯನ್ ಇಂಟರ್ ನ್ಯಾಷನಲ್ ತಂಡದ ಜಿಲ್ಲಾ ಸಂಯೋಜಕರಾದ ರವಿಚಂದ್ರನ್, ಲಯನ್ಸ್ ನ ಮಹಿಳಾ ಸಬಲೀಕರಣ ಜಿಲ್ಲಾ ಮುಖ್ಯಸ್ಥರಾದ ಶಾರದಾ ವಿ ಮುಳಗುಂದ, ಸೇಜಲ್ ನ್ಯೂ ಲೈಫ್ ಪೌಂಡೇಶನ್ ಕಾರ್ಯದರ್ಶಿ ಡಾ. ಪದ್ಮಾಕ್ಷಿ ಲೋಕೇಶ್, ಲಯನ್ಸ್ ನ ಪ್ರಾದೇಶಿಕ ಕಾರ್ಯದರ್ಶಿಯಾದ ದೇವತ ಬಿ.ಎನ್, ಅಮೃತ ಹಾಗೂ ಕಾವ್ಯಶ್ರೀ ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X