ಉಡುಪಿ | ನಾನು ಆಂಧ್ರದವನಲ್ಲ, ಕರ್ನಾಟಕದ ಪಾವಗಡದವನು, 2009 ರಲ್ಲಿ ಮುಖ್ಯವಾಹಿನಿಗೆ ಬಂದೆ

Date:

Advertisements

ನಕ್ಸಲ್ ಚಳುವಳಿ ತಪ್ಪು ಅಂತ ನನ್ನ ಮನಸಿಗ್ಗೆ ತಿಳಿದ ತಕ್ಷಣದಿಂದಲೇ ನಾನು ಅದರಿಂದ ಹೊರಬಂದೆ ಆ ಸಮಯದಲ್ಲಿ ಆ ರೀತಿಯ ಚಳುವಳಿ ಸರಿ ಎಂದು ಕಂಡಿತ್ತು ಅದರಲ್ಲಿ ಕೆಲವೊಂದು ಸಮಸ್ಯೆಗಳು ಅನುಭವಿಸಿದ ನಂತರ ಅಂಬೇಡ್ಕರ್ ರವರ ಸಂವಿಧಾನ ಇರುವಾಗ ಆ ಮೂಲಕವೇ ನಾವು ಹೋರಾಟ ಮಾಡಬೇಕು ಎಂದು 2009 ರಲ್ಲಿ ನಕ್ಸಲ್ ಚಳವಳಿ ತೊರೆದು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾದೆ ನನ್ನ ಮೇಲೆ ಇದ್ದಂತಹ ಎಲ್ಲಾ ಕೇಸುಗಳನ್ನು ಸರ್ಕಾರ ತೆಗೆದುಹಾಕಿದರು ಎಂದು ಇಂದು ಮುಖ್ಯವಾಹಿನಿಗೆ ಬಂದ ಮಾಜಿ ನಕ್ಸಲ್ ತೊಂಬೆಟ್ಟು ಲಕ್ಷ್ಮೀಯವರ ಪತಿ ಸಂಜೀವ ಹೇಳಿದರು.

ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪತ್ನಿ ಲಕ್ಷ್ಮೀಯ ಶರಣಾಗತಿ ಪ್ರಕ್ರಿಯೆಯನ್ನು ಪೂರ್ತಿಕರಿಸಿ ಮಾಧ್ಯಮದ ಮುಂದೆ ಮಾತನಾಡಿರು. ನಾನು ಮೂಲತ ಕರ್ನಾಟಕದ ಪಾವಗಡದವನು ಕಳೆದ ಹಲವಾರು ವರ್ಷಗಳಿಂದ ಆಂಧ್ರದಲ್ಲಿ ನೆಲೆಸಿದ್ದೇನೆ ಈಗ ನನ್ನ ಸಂಸಾರ ಸಹ ಅಲ್ಲೆ ನೆಲೆಸಿದೆ ನನ್ನ ಪತ್ನಿ ಲಕ್ಷ್ಮೀ 2006 ರಿಂದ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಳು 2008 ರಲ್ಲಿ ಚಳುವಳಿಯಲ್ಲಿ ಇರುವಾಗಲೇ ನಮ್ಮ ಮದುವೆ ಆಯಿತು ನನ್ನ ವಿರುದ್ಧ ಆಂಧ್ರದಲ್ಲಿ ಕೇಸು ಇದ್ದದ್ದರಿಂದ 2009 ರಲ್ಲಿ ನಾನು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾಗತಿಯಾಗಿ ಮುಖ್ಯವಾಹಿನಿಗೆ ಬಂದೆ ಈಗ ನನ್ನ ಪತ್ನಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯವರು ನಕ್ಸಲ್ ಚಳುವಳಿಯಲ್ಲಿ ಇರುವವರನ್ನು ಮುಖ್ಯವಾಹಿನಿಗೆ ತರುವ ಯೋಜನೆ ಹಾಕಿಕೊಂಡ ಹಿನ್ನಲೆಯಲ್ಲಿ ನಾವು ಟಿವಿಯಲ್ಲಿ ನೋಡಿ ಆ ಮೂಲಕ ನನ್ನ ಪತ್ನಿಯ ಮೇಲೆ ಇರುವ ಮೂರು ಕೇಸುಗಳನ್ನು ತೆಗೆಯಬೇಕು ಅವಳು ಸಹ ಮುಖ್ಯವಾಹಿನಿಗೆ ಬಂದು ಸಂವಿಧಾನದ ಬದ್ದವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.

2016 ರಲ್ಲಿ ಕರ್ನಾಟಕ ಪೊಲೀಸರು ನನ್ನನ್ನು ಅರೆಸ್ಟ್ ಮಾಡಿದ್ದರು. ನಂತರದಲ್ಲಿ ನನ್ನ ಮೇಲೆ ಯಾವುದೇ ಕೇಸುಗಳಿಲ್ಲ ಎಂದು ಬಿಟ್ಟು ಕಳುಹಿಸಿದರು ಮುಂದಿನ ದಿನಗಳಲ್ಲಿ ನಾವು ಕರ್ನಾಟಕದಲ್ಲಿ ಬಂದು ನೆಲೆಸುವ ಕನಸನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

Advertisements
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X