ಉಡುಪಿ | ನಟನೆಯ ಕಡೆಗೆ ಇಂದಿನ ಯುವಜನತೆ ಹೆಚ್ಚಿನ ಒಲವು: ರಂಗ ನಿರ್ದೇಶಕ ಪ್ರಸನ್ನ

Date:

Advertisements

ಇಂದಿನ ಯುವ ಸಮುದಾಯ ನಟನೆಯ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಪ್ಪತ್ತೊಂದನೇ ಶತಮಾನ ಯುವ ಜನಾಂಗದ ಶತಮಾನ, ಯುವಕರಿಗೆ ಸಂವಹನದ ಅಗತ್ಯವಿದೆ. ತನಗೆ ಅನಿಸಿದ್ದನ್ಬು ತಾನು ಮತ್ತಿಬ್ಬರಿಗೆ ಶಾಂತ ರೀತಿಯಲ್ಲಿ ತಿಳಿಸುವ ಅಗತ್ಯತೆ ಇದೆ. ಇಂದು ಸಂವಹನದ ಸಮಸ್ಯೆಯಿಂದ ಜಗಳಗಳು ನಡೆಯುತ್ತಿದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ರವರು ಹೇಳಿದರು.

ಅವರು ಉಡುಪಿಯ ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜಿನಲ್ಲಿ ಯಕ್ಷ ರಂಗಾಯಣ, ಕಾರ್ಕಳ, ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನದ ರಂಗಭಾಷೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾಟಕದ ಭಾಷೆಯನ್ನು ಕಲಿತು ಸಂವಹನ ನಡೆಸುವುದು ಬಹಳ ಮುಖ್ಯ, ಹೃದಯದ ಭಾಷೆಯನ್ನು ಶಾಂತ ಚಿತ್ತ ರೀತಿಯಲ್ಲಿ ತೋರಿಸುವುದೇ ಸಂವಹನ ಮಾಧ್ಯಮ ಅದನ್ನೆ ನಾಟಕ ನಮಗೆ ಕಲಿಸಿಕೊಡುತ್ತದೆ. ಸಂಪೂರ್ಣ ಸಾಮರಸ್ಯ ಇಲ್ಲದ ಕಾಲದಲ್ಲಿ ಸಾಮರಸ್ಯ ಅಗತ್ಯತೆ ಇದೆ. ಅದನ್ನು ರಂಗಭಾಷೆಯಲ್ಲಿ ಪರಿಚಯ ಪಡಿಸುವುದು ಕಾಲದ ಅವಶ್ಯ ಎಂದು ಹೇಳಿದರು.

Advertisements

ಯಕ್ಷ ರಂಗಾಯಣ ಕಾರ್ಕಳ ನಿರ್ದೇಶಕರಾದ ಬಿ ಆರ್ ವೆಂಕಟರಮಣ ಐತಾಳ್ ಮಾತನಾಡಿ, ರಂಗಾಯಣ ಸಮಾಜದ ನಡುವೆ ರಂಗ ಚಟುವಟಿಕೆ ಬಗ್ಗೆ ಯುವಕರಲ್ಲಿ ಮತ್ತು ಮಕ್ಕಳಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ರಂಗ ಕಮ್ಮಟ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಯುವ ಜನಾಂಗದ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ರಂಗ ಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನು ಓದಿದ್ದೀರಾ? ಚಿಂತಾಮಣಿ | ಶ್ರೀಗಂಧ ಅಕ್ರಮ ದಾಸ್ತಾನು; ಇಬ್ಬರ ಬಂಧನ

ಪ್ರಾಂಶುಪಾಲರು ವಿಲ್ಸಂಟ್ ಆಳ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಟರು ಮತ್ತು ನಿರ್ದೇಶಕರು ಮಂಡ್ಯ ರಮೇಶ್, ಶಶಿಧರ್ ಭಾರಿಘಾಟ್, ರಂಗ ನಿರ್ದೇಶಕಿ ಶ್ವೇತ ರಾಣಿ, ಯಕ್ಷ ರಂಗಾಯಣ ಕಾರ್ಯದರ್ಶಿ ಪೂರ್ಣಿಮಾ, ರಾಜಗೋಪಾಲ್ ಬಲ್ಲಾಳ್, ಬಾಸ್ಕರ್ ರಾವ್ ಕಿದಿಯೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಪ್ರಕಾಶ್ ಕೆತ್ಲಾಯ ಸ್ವಾಗತಿಸಿ, ನಿರೂಪಿಸಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X