ಸಮಾಜದಲ್ಲಿ ಸಮಾನತೆ ಮತ್ತು ಭಾತೃತ್ವವನ್ನು ಮೂಡಿಸುವುದು ಪ್ರತಿಯೊಬ್ಬ ಮಹಿಳೆಯ ಪಾತ್ರವಾಗಿದೆ ಎಂದು ಹೈಕೋರ್ಟ್ ನ್ಯಾಯವಾದಿ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಮೈತ್ರೇಯಿ ಕೆ. ಹೇಳಿದರು.
ವಿಜಾಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ), ಅನೌಪಚಾರಿಕ ಶಿಕ್ಷಣ ಸಂಸ್ಥೆ, ಇವರ ಸಹಯೋಗದಲ್ಲಿ ʼಪ್ರಗತಿಯ ವೇಗವರ್ಧನೆಗೆ ಮಹಿಳೆಯರ ಮೇಲೆ ಹೂಡಿಕೆʼ ಎಂಬ ಘೋಷ ವಾಕ್ಯದೊಂದಿಗೆ ಮಾ.6ರಂದು ವಿಜಯಪುರ ನಗರದ ಲೊಯೋಲಾ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹೈಕೋಟ್ ನ್ಯಾಯವಾದಿಗಳು, ಮಾನವ ಹಕ್ಕು ಹೋರಾಟಗಾರ್ತಿ ಮೈತ್ರೇಯಿ ಕೆ. ಮಾತನಾಡುತ್ತಾ, ಇಲ್ಲಿ ನೆರೆದಿರುವ ಮಹಿಳೆಯರನ್ನು ನೋಡಿದಾಗ ಮಹಿಳೆಯರ ಶಕ್ತಿಯ ಏನು ಎಂಬುದು ಅರ್ಥವಾಗುತ್ತದೆ. ದಿನನಿತ್ಯದ ದುಡಿಮೆಯ ಜೊತೆಗೆ ತಾವು ಮಾಡುವ ಸಮಾಜಮುಖಿ ಕಾರ್ಯಗಳು ನಿಜವಾಗಿಯೂ ಎಲ್ಲರಿಗೂ ಪ್ರೇರಣೆಯಾಗಿವೆ. ಮಹಿಳಯರು ಎಲ್ಲರಂಗದಲ್ಲಿಯೂ ಇವತ್ತು ಸಮಾನತೆಯನ್ನು ಸಾಧಿಸಿದ್ದಾಳೆ ಎಂದರು.
ಆದರೂ, ಸಹ ಅವಳ ಮೇಲೆ ಆಗುವ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇದನ್ನು ಕಡಿಮೆ ಮಾಡಬೇಕಾದರೆ ನಾವೆಲ್ಲರು ಒಂದಾಗಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳಲು ನಾವೆಲ್ಲರು ಬದ್ಧರಾಗೋಣ. ಸಮಾನತೆಯ, ಭಾತೃತ್ವ ಸಂದೇಶ ಸಾರೋಣ, ನಮ್ಮೆಲಾಗುವ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸೋಣ ಈ ಮೂಲಕ ಪ್ರತಿ ಹೆಣ್ಣಿನ ಧ್ವನಿಯಾಗೋಣವೆಂದು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಮಹಾಪೌರರು, ಮಹಾನಗರ ಪಾಲಿಕೆ ಇವರು ನೆರೆದಿರುವ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳೆ ಇವತ್ತು ಎಲ್ಲ ಕೇತ್ಷದಲ್ಲಿಯು ಸಾಧನೆ ಮಾಡುತ್ತಾಳೆ ಎಂಬುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರವನ್ನು ನೀಡುವ ಮೂಲಕ ಆಕೆಯನ್ನು ಸಮಾಜದಲ್ಲಿ ಗೌರಯುತವಾಗಿ ಬಾಳುವಂತೆ ಮಾಡಿಯೆಂದರು.
ಈ ಕಾರ್ಯಕ್ರಮ ಉದ್ಘಾಟಕರಾಗಿ ಮಹಾಪೌರರಾದ ಮೈಜಬಿನ ಅಬ್ದುಲರಜಾಕ ಹೊರ್ತಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಕವಿತಾ ದೊಡಮನಿ, ವಿಜಯಪುರ ನಗರ ಗೃಹ ಕಾರ್ಮಿಕರ ಯೂನಿಯನ್(ರಿ) ಅಧ್ಯಕ್ಷರು ಫರ್ಜಾನಾ ಜಮಾದಾರ, ವಯೋವೃದ್ಧರ ಸಂಘಗಳ ಒಕ್ಕೂಟ ಅಧ್ಯಕ್ಷರು ಸುಶೀಲಾ ದಳವಾಯಿ, ಅನೌಪವಾರಿಕ ಶಿಕ್ಷಣ ಸಂಸ್ಥೆ ಸಿಸ್ಟರ್ ಜಯಾ ಜಮಖಂಡಿ ಕಾರ್ಯಸಂಯೋಜಕರು, ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟದ ಅಧ್ಯಕ್ಷರು ರೇಣುಕಾ ಏಂಟಮಾನ, ವಿಜಯಪುರ ನಗರ ಯುವತಿಯರ ಒಕ್ಕೂಟದ ಕುಮಾರಿ ತೇಜಶ್ವಿನಿ ಬಂಡಿವಡ್ಡರ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಿಬ್ಬಂದಿ ವರ್ಗದವರು, ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿಜಯಪುರ ನಗರದ ಸ್ಲಂ ಹಾಗೂ ಲಂಬಾಣಿ ತಾಂಡಾಗಳ ಮಹಿಳಾ ಸ್ವ-ಸಹಾಯ ಸಂಘಗಳಿಂದ ಕಾರ್ಯಕ್ರಮದಲ್ಲಿ 3,800 ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿರಸಲಾಯಿತು. ನಂತರ ವೇದಿಕೆ ಮೇಲೆ ಉಪಸ್ಥಿತರಿರುವ ಗಣ್ಯರನ್ನು ಸ್ವಾಗತಿಸಲಾಯಿತು. ಏಕತೆ ಮತ್ತು ಸಮಾನತೆಯ ಸಂಕೇತವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ನಂತರ ಗಣ್ಯರು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಆಯೋಜನೆ ಮಾಡಲಾಗಿದ್ದ ಆಟೋಟಗಳ ಸ್ಟಾಲ್ಗಳನ್ನು ಮತ್ತು ಪುಡ್ ಸ್ಟಾಲ್ಗಳನ್ನು ಉದ್ಘಾಟನೆ ಮಾಡಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನು ಹೇಳಿದ ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಫಾದರ ಟಿಯೋಲ ಮಚಾದೋ, ಮಹಿಳಾ ಒಕ್ಕೂಟವು ಮಹಿಳೆಯರ ಪರವಾಗಿ ಹಾಕಿಕೊಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿ ನೀಡುವ ಮೂಲಕ ಮಹಿಳಾ ಒಕ್ಕೂಟ ಸ್ವತಂತ್ರವಾಗಿ ಬೆಳೆಯುತ್ತಿರುವ ಬಗ್ಗೆ ಹಮ್ಮೆ ವ್ಯಕ್ತಡಿಸಿದರು. ವಿಶೇಷವಾಗಿ ಮಹಿಳಾ ಒಕ್ಕೂಟವು ಮಹಿಳೆಯರ ಸ್ವ-ಉದ್ಯೋಗಕ್ಕೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನಹರಿಸಿರುವುದು ಹೆಮ್ಮಯ ವಿಷಯವಾಗಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳತ್ತ ಮಹಿಳಾ ಒಕ್ಕೂಟವು ಬೆಳೆಯಲಿಯೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿಗಳು ಡಾ. ಕವಿತಾ ವನಿತಾ ದೊಡಮನಿ ಇವರನ್ನು ಸ್ಲಂ ಮಹಿಳೆಯರು ಮತ್ತು ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ನೀಡುವ ʼವಿಜಯಪುರ ರತ್ನ ಪ್ರಶಸ್ತಿʼಯನ್ನು ನೀಡಿ ಗೌರವಿಸಲಾಯಿತು.
ಸ್ಲಂನ ಪ್ರತಿಭಾನ್ವಿತ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ 42 ಮಕ್ಕಳಿಗೆ ಮಹಿಳಾ ಒಕ್ಕೂಟದ ಪರವಾಗಿ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಂತರ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
