ಅಂಗನವಾಡಿಗೆ ನೀರಿಗಾಗಿ ಬಾವಿಯನ್ನೇ ತೋಡುತ್ತಿರುವ ಮಹಿಳೆ

Date:

Advertisements

ನೀರಿನ ಸಮಸ್ಯೆ ಎದುರಿಸುತ್ತಿದ್ದ ಅಂಗನವಾಡಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 55 ವರ್ಷದ ಮಹಿಳೆಯೊಬ್ಬರು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಮಾದರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ ಸಿ ನಾಯ್ಕ್‌ ಅವರು ಬಾವಿ ತೋಡುತ್ತಿರುವ ದಿಟ್ಟ ಮಹಿಳೆ.

ನಗರದ ಗಣೇಶನಗರದಲ್ಲಿರುವ ಅಂಗನವಾಡಿಯಲ್ಲಿ ನೀರಿನ ಸಮಸ್ಯೆಯಿದೆ. ಮಕ್ಕಳಿಗೆ ಅಡುಗೆ ಮಾಡಲುಮತ್ತು ಕುಡಿಯಲು ನೀರು ತರಲು ಅಂಗನವಾಡಿ ಶಿಕ್ಷಕರು ದಿನನಿತ್ಯ ಸುಮಾರು ಅರ್ಧ ಕಿ.ಮೀ ಹೋಗಬೇಕಿತ್ತು. ಶಿಕ್ಷಕರ ಪರಿಸ್ಥಿತಿ ಕಂಡು ಮನವೊಂದ ಗೌರಿ ಅವರು ಅಂಗನವಾಡಿಗಾಗಿ ಬಾವಿ ತೋಡುತ್ತಿದ್ದಾರೆ.

“ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಅಡುಗೆ ಮಾಡಬೇಕು ಮತ್ತು ಅವರನ್ನು ನೋಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ದೂರದ ಬಾವಿಯಿಂದ ನೀರು ತರುವ ಹೊರೆಯೂ ಅವರ ಮೇಲಿದೆ. ಅವರ ಪರಿಸ್ಥಿತಿ ಕಂಡು ಅಂಗನವಾಡಿ ಆವರಣದಲ್ಲಿ ಬಾವಿ ತೋಡುವುದಾಗಿ ಕಳೆದ ವರ್ಷ ಭರವಸೆ ನೀಡಿದ್ದೆ. ಅದರಂತೆ ಬಾವಿ ತೋಡುತ್ತಿದ್ದೇನೆ,” ಎಂದು ಗೌರಿ ಹೇಳಿದರು.

Advertisements

ಕಳೆದ ವಾರ ಅಂಗನವಾಡಿ ಹಿಂಭಾಗದಲ್ಲಿ ಭಾವಿ ತೋಡಲು ಜಾಗ ಗುರಿಸಿದ್ದ ಗೌರಿ, ಕೆಲಸ ಆರಂಭಿಸಿದ್ದರು. ಭೂಮಿಯನ್ನು ಅಗೆಯುವುದು ಮತ್ತು ಮಣ್ಣನ್ನು ಹೊರಹಾಕುವ ಎರಡೂ ಕೆಲಸವನ್ನೂ ಒಬ್ಬರೇ ಮಾಡುತ್ತಿದ್ದಾರೆ.

“ನಾನು 4 ಅಡಿ ಅಗಲದ ಬಾವಿಯನ್ನು ನಿರ್ಮಿಸಲು ಯೋಜಿಸುತ್ತಿದ್ದೇನೆ. ನೀರು ಸಿಗುವವರೆಗೂ ಬಿಡುವುದಿಲ್ಲ. 50 ಅಡಿಗಳಷ್ಟು ಆಳದಲ್ಲಿ ನೀರು ದೊರೆಯಬಹುದು. ಮುಂದಿನ ಕೆಲವು ವಾರಗಳಲ್ಲಿ ಬಾವಿ ತೋಡುವುದನ್ನು ಮುಂದುವರೆಸುತ್ತೇನೆ. ಈ ಬಾವಿ ಅಂಗನವಾಡಿಗೆ ಮಾತ್ರವಲ್ಲ, ಈ ಪ್ರದೇಶದ ನಿವಾಸಿಗಳಿಗೂ ನೆರವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಗೌರಿ ಅಗೆಯುತ್ತಿರುವ ಮೂರನೇ ಬಾವಿ ಇದಾಗಿದೆ. ಈ ಹಿಂದೆ ತನ್ನ ಜಮೀನಿನಲ್ಲಿ ಮತ್ತು ತನ್ನ ಮನೆ ಆವರಣದಲ್ಲಿ ಬಾವಿ ತೆಗೆದಿದ್ದಾರೆ. 1.5 ಎಕರೆ ಜಮೀನು ಹೊಂದಿರುವ ಆಕೆ, ತನ್ನ ಜಮೀನಿನಲ್ಲಿ ಮೊದಲ ಬಾವಿ ತೋಡಿದ್ದಾರೆ. 45 ಅಡಿಗಳಷ್ಟು ಆಳದಲ್ಲಿ ಅವರಿಗೆ ನೀರು ದೊರೆತಿದೆ. ಆ ನೀರು ಅವರ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಸಾಕಾಗುತ್ತಿದೆ. ತನ್ನ ಮನೆಗೆ ನೀರು ಪಡೆಯಲು, ತಮ್ಮ ಮನೆಯ ಹಿಂದೆ ಮತ್ತೊಂದು ಬಾವಿ ತೆಗೆದಿದ್ದಾರೆ. ಅಲ್ಲಿ, 65 ಅಡಿ ಆಳದಲ್ಲಿ ನೀರು ದೊರೆತಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, “ಗೌರಿ ಅವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಶಾಲೆಗೆ ರಸ್ತೆ ಅಭಿವೃದ್ಧಿಪಡಿಸಲು ಆರನೇ ತರಗತಿ ವಿದ್ಯಾರ್ಥಿನಿ ಗ್ರಾ.ಪಂ. ಮುಂದೆ ಧರಣಿ

ಶಾಲೆಗೆ ಹೋಗುವ ರಸ್ತೆ ಸರಿಪಡಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

Download Eedina App Android / iOS

X