ಭಾರತದಲ್ಲಿವೆ ರಾವಣನಿಗೆ 5 ದೇವಾಲಯಗಳು; ದಸರಾ ದಿನ ಮಾತ್ರ ತೆರೆಯುತ್ತದೆ ಈ ದೇವಾಲಯ

Date:

Advertisements

ರಾಮಾಯಣದಲ್ಲಿ ಖಳನಾಯಕನಾಗಿರುವ ಲಂಕೆಯ ರಾಜ ರಾವಣನನ್ನು ಭಾರತದಲ್ಲಿಯೂ ಪೂಜಿಸಲಾಗಿತ್ತು. ಭಾರತದಲ್ಲಿ ರಾವಣನ ಐದು ದೇವಾಲಯಗಳಿವೆ. ಅದರಲ್ಲೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ದಶಾನನ್ ದೇವಾಲಯ. ಈ ದೇವಾಲಯ ವರ್ಷದಲ್ಲಿ ಒಮ್ಮೆ ಮಾತ್ರವೇ ತೆರೆಯಲಾಗುತ್ತದೆ. ವಿಯಜದಶಮಿಯ ಸಂದರ್ಭದಲ್ಲಿ ದೇವಾಲಯವನ್ನು ತೆರೆದು ಪೂಜೆ ಸಲ್ಲಿಸಲಾಗುತ್ತಿದೆ.

ಈ ವರ್ಷವೂ ಇಂದು (ಮಂಗಳವಾರ- ವಿಜಯದಶಮಿ) ದೇವಾಲಯವನ್ನು ತೆರೆಯಲಾಗಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪೂಜೆ ಸಲ್ಲಿಸಿದ್ದಾರೆ.

“ತಮ್ಮ ಮಕ್ಕಳು ರಾವಣನಂತೆಯೇ ಬುದ್ದಿವಂತಿಕೆ ಮತ್ತು ಶಕ್ತಿಯನ್ನು ಪಡೆಯಲೆಂದು ಭಕ್ತರು ಪ್ರಾರ್ಥಿಸುತ್ತಾರೆ” ಎಂದು ದೇವಾಲಯದ ಅರ್ಚಕ ರಾಮ್ ಬಾಜ್‌ಪೇಯ್‌ ತಿಳಿಸಿದ್ದಾರೆ.

Advertisements

“ದಸರಾ ದಿನದಂದು ನಾವು ಈ ದೇವಾಲಯವನ್ನು ತೆರೆಯುತ್ತೇವೆ. ರಾವಣನನ್ನು ಪೂಜಿಸುತ್ತೇವೆ. ಸಂಜೆಯ ವೇಳೆಗೆ, ರಾವಣನ ಪ್ರತಿಕೃತಿಯನ್ನು ಸುಟ್ಟು ದೇವಾಲಯವನ್ನು ಮುಚ್ಚಲಾಗುತ್ತದೆ. ನಾವು ರಾವಣನ ಜ್ಞಾನಕ್ಕಾಗಿ ಪೂಜಿಸುತ್ತೇವೆ. ರಾವಣನಿಗೆ ಸಮಾನವಾದ ಶಕ್ತಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದನು ಬೇರೆ ಯಾರೂ ಇಲ್ಲ. ಅವನ ಏಕೈಕ ನ್ಯೂನತೆಯೆಂದರೆ ಅವನ ದುರಹಂಕಾರ. ನಾವು ಆ ದುರಹಂಕಾರವನ್ನು ಶಮನ ಮಾಡಲು ಆತನ ಪ್ರತಿಕೃತಿಯನ್ನು ಸುಡುತ್ತೇವೆ” ಎಂದು ಅರ್ಚಕರು ಹೇಳಿದ್ದಾರೆ.

ಈ ದಶಾನನ್ ದೇವಾಲಯವು ಸುಮಾರು 125 ವರ್ಷಗಳಷ್ಟು ಹಳೆಯದಾಗಿದ್ದು, 1890ರಲ್ಲಿ ರಾಜ ಗುರು ಪ್ರಸಾದ್ ಶುಕ್ಲ ಎಂಬಾತ ನಿರ್ಮಿಸಿದ್ದಾನೆಂದು ಹೇಳಲಾಗಿದೆ. ರಾವಣನು ವಿದ್ವಾಂಸನಾಗಿದ್ದನು. ಆತ ಶಿವನ ಅತಿದೊಡ್ಡ ಭಕ್ತನಾಗಿದ್ದನು ಎಂಬುದು ದೇವಾಲಯದ ನಿರ್ಮಾಣದ ಹಿಂದಿನ ಉದ್ದೇಶವಾಗಿದೆ. ಹೀಗಾಗಿ, ಶಿವನ ದೇವಾಲಯದ ಆವರಣದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದಲ್ಲಿಯೇ ರಾವಣನ ಮತ್ತೊಂದು ದೇವಾಲಯವಿದೆ. ಗ್ರೇಟರ್ ನೋಯ್ಡಾದ ಬಿಸ್ರಾಖ್‌ನಲ್ಲಿ ರಾವಣ ಮಂದಿರವಿದೆ. ಅಲ್ಲಿಯೂ ಭಕ್ತರು ಪೂಜೆ ಸಲ್ಲಿಸುತ್ತಾರೆ.

ಮಧ್ಯಪ್ರದೇಶದಲ್ಲಿಯೂ ಎರಡು ದೇವಾಲಯಗಳಿವೆ. ಮಂಡೋದರಿಯನ್ನು ರಾವಣ ಮದುವೆಯಾದ ಸ್ಥಳವೆಂದು ಹೇಳಲಾಗಿರುವ ಮಂಡಸೌರ್‌ನಲ್ಲಿ ರಾವಣ ದೇವಾಲಯವಿದೆ. ಅಲ್ಲದೆ, ಮಂಡೋದರಿಯ ಸ್ಥಳವೆಂದು ಹೇಳಲಾಗಿರುವ ವಿದಿಶಾದಲ್ಲಿ ರಾವಣ್‌ಗ್ರಾಮ್ ರಾವಣ ದೇವಾಲಯವಿದೆ.

ಇನ್ನು ಆಂಧ್ರಪ್ರದೇಶದಲ್ಲಿ ಮತ್ತೊಂದು ದೇವಾಲಯವಿದ್ದು, ಅದು ಗೋದಾವರಿ ಜಿಲ್ಲೆಯಲ್ಲಿ ಕಾಕಿನಡ ರಾವಣ ಎಂಬ ದೇವಾಲಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X