ರಾಜ್ಯದ ಹೆಸರು ಪಶ್ಚಿಮ ಬಂಗಾಳವನ್ನು ‘ಬಾಂಗ್ಲಾ’ ಎಂದು ಬದಲಿಸಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ಹೆಸರನ್ನು ಬದಲಾಯಿಸುವ ಸಾಧ್ಯವಾದ ರಾಜ್ಯಗಳ ವಿಭಾಗದಿಂದ ಪಶ್ಚಿಮ ಬಂಗಾಳವನ್ನು ಮಾತ್ರ ಏಕೆ ಹೊರಗಿಟ್ಟಿದೆ ಎಂದು ಪ್ರಶ್ನಿಸಿದರು.
ಗಾಜಿಯಾಬಾದ್ ಪುರಸಭೆ ತನ್ನ ಹೆಸರನ್ನು ಬದಲಿಸಿದ ನಿರ್ಧರಿಸಿದ ಕೆಲವು ದಿನಗಳ ನಂತರ ಈ ವಿಷಯ ಚರ್ಚೆಗೆ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಭಾರತದ ಹಲವು ನಗರಗಳು,ಸ್ಥಳಗಳು, ರೈಲು ನಿಲ್ದಾಣಗಳ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. 2016ರಲ್ಲಿ ಗುರುಗಾವ್ ಗುರುಗ್ರಾಮವಾಗಿದೆ, 2018ರಲ್ಲಿ ಅಲಹಾಬಾದ್ ಪ್ರಯಾಗ್ರಾಜ್ ಆಗಿದೆ. ನ್ಯೂ ರಾಯ್ಪುರ ಅಟಲ್ ನಗರ ಆಗಿದೆ ಹಾಗೂ ಫೈಜಾಬಾದ್ ಅಯೋಧ್ಯವಾಗಿರುವ ಇತರ ನಗರಗಳು.
ಟಿಎಂಸಿ ಸರ್ಕಾರ 2011ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹೆಸರನ್ನು ಬದಲಾಯಿಸಲು ಕೇಂದ್ರಕ್ಕೆ ಮನವಿ ಮಾಡಿತು. ಮೊದಲು ಪಶ್ಚಿಮ ಬಂಗಾ ಹಾಗೂ ಪಶ್ಚಿಮ ಬಂಗೋ ಎಂಬ ಹೆಸರನ್ನು ಸಲಹೆ ನೀಡಲಾಯಿತು. ಐದು ವರ್ಷಗಳ ನಂತರ ಮಮತಾ ಬ್ಯಾನರ್ಜಿ ಸರ್ಕಾರ ಬಂಗೋ ಅಥವಾ ಬಾಂಗ್ಲಾ ಎಂಬ ಹೆಸರನ್ನು ಅನುಮೋದಿಸಿತು. 2024ರ ಲೋಕಸಭಾ ಚುನಾವಣೆಗಳು ಕೆಲವೇ ತಿಂಗಳುಗಳು ಮುಂದಿರುವಾಗ ಕೇಂದ್ರಕ್ಕೆ ಮತ್ತೊಮ್ಮೆ ಹೆಸರು ಮರು ನಾಮಕರಣಕ್ಕೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ
ಸಾಂಸ್ಕೃತಿಕ ಹಿನ್ನೆಲೆ ಹಾಗೂ ಪ್ರದೇಶಗಳ ಭಾಷಾ ಪ್ರಸ್ತುತತೆಯ ಮೇಲೆ ಬಾಂಬೆಯು ಮುಂಬೈ ಎಂದು ಹಾಗೂ ಒರಿಸ್ಸಾವು ಒಡಿಶಾ ಆಗಿ ಬದಲಾಗಿರುವ ಬಗ್ಗೆ ತಮ್ಮ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
“ ನಾವು ಈಗಾಗಲೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದ್ದೇವೆ.ಬಹಳ ಸಮಯದಿಂದಲೂ ಕೇಂದ್ರವು ನಮ್ಮ ರಾಜ್ಯವನ್ನು ಬಾಂಗ್ಲಾ ಎಂದು ಬದಲಾಯಿಸಿಲ್ಲ. ವರ್ಣ ಮಾಲೆಯ ಪ್ರಕಾರ ಕೂಡ ‘ಬಾಂಗ್ಲಾ’ ಹೆಸರು ಮುಂಚೂಣಿಯ ಆದ್ಯತೆಯಾಗಿದೆ. ಪಶ್ಚಿಮ ಬಂಗಾಳವು ಆದ್ಯತೆಯಲ್ಲಿ ಕೊನೆಯಾಗಿರುತ್ತದೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
“ ನಮ್ಮ ಹೆಸರು ‘ಬಾಂಗ್ಲಾ’ ಎಂದು ಬದಲಾದರೆ ನಮ್ಮ ಮಕ್ಕಳು ಆದ್ಯತೆಯ ಮೇರೆಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳಬಹುದು. ಪ್ರತಿ ಸಭೆಯಲ್ಲಿಯೂ ನಾವು ಕೊನೆಯವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಸರು ಬದಲಾದರೆ ಮೊದಲ ಪ್ರಾತಿನಿಧ್ಯ ಸಿಗುತ್ತದೆ” ಎಂದು ಹೇಳಿದರು.
ರಾಜ್ಯದ ಹೆಸರಿನಲ್ಲಿ “ಪಶ್ಚಿಮ” ಎಂಬ ಪದವನ್ನು ಜೋಡಿಸುವ ಅಗತ್ಯವಿಲ್ಲ ಎಂದು ಪಾಕಿಸ್ತಾನವನ್ನು ಉದಾಹರಣೆಯಾಗಿ ನೀಡಿದ ಮಮತಾ, ಪಾಕಿಸ್ತಾನದಲ್ಲೂ ಪಂಜಾಬ್ ಪ್ರಾಂತ್ಯವಿದೆ. ಭಾರತದಲ್ಲೂ ಅದೇ ಹೆಸರಿನ ರಾಜ್ಯವಿದೆ. ಆದರೆ ನಮ್ಮ ದೇಶದ ಹೆಸರನ್ನು ಇಲ್ಲಿಯವರೆಗೆ ಬದಲಾಯಿಸಲಾಗಿಲ್ಲ ಎಂದರು.